ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕ ವಿಚಾರವಂತು ಬಗೆಹರಿಯದ ಸಮಸ್ಯೆಯಾಗಿ ಕಾಡಿದೆ. ಅಭಿಮಾನಿಗಳು ಸ್ಮಾರಕ ಕಟ್ಟುತ್ತೀವಿ ಅಂದ್ರು ಬಾಲಣ್ಣನ ಮಕ್ಕಳು ಬಿಡಲಿಲ್ಲ. ಈಗ ಸರ್ಕಾರವೇ ಆ ಸ್ಟುಡಿಯೋವನ್ನ ಕಂಪ್ಲೀಟ್ ಮುಟ್ಟುಗೋಲು ಹಾಕಿಕೊಂಡಿದೆ. ಈಗ ಮತ್ತೆ ಗೀತಾ ಬಾಲಿ ಅವರು ಆ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗೋಷ್ಟಿ ಕರೆದು ಮತ್ತೆ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ, ಆ ಜಾಗವನ್ನ ಬಿಟ್ಟುಕೊಡಲ್ಲ ಎಂದೇ ಹೇಳಿದ್ದಾರೆ.
ನಾನು ಕೇಸ್ ಹಾಕುವುದಕ್ಕೂ ಮುನ್ನ ಆಗಿನ ಎಂಎಲ್ಸಿ ಒಬ್ಬರು ನಮ್ಮ ಮನೆಗೆ ಬಂದು ಐದು ಲಕ್ಷ ಹಣ ಕೊಡುವುದಕ್ಕೆ ಬಂದಿದ್ದರು ಎಂದಿದ್ದರು. ವಿಲ್ಸನ್ ಗಾರ್ಡನ್ ನಲ್ಲಿ ಮನೆ ಇತ್ತು. ಅಲ್ಲಿಗೆ ಬಂದ ಎಂಎಲ್ಸಿ ಐದು ಲಕ್ಷದ ಚೆಕ್ ಕೊಡುವುದಕ್ಕೆ ಬಂದರು. ಕೇಸ್ ಎಲ್ಲಾ ಹಾಕ್ಬೇಡಿ, ಸುಮ್ನೆ ಸಮಸ್ಯೆ ಆಗುತ್ತೆ. ಹಣ ತಗೋಳಿ ಅಂದಿದ್ರು. ಆದರೆ ಹಣ ಎಲ್ಲಾ ಏನು ಬೇಡ, ನಾನು ಏನು ಮಾಡಬೇಕೋ ಅದನ್ನೇ ಮಾಡ್ತೀನಿ ಅಂದಿದ್ದೆ. ಆಮೇಲೆ ಅವರ ಅಸಿಸ್ಟೆಂಟ್ ಅನ್ನ ಕಳುಹಿಸಿದ್ದರು ಎಂದಿದ್ದಾರೆ.
ಅರಣ್ಯ ಇಲಾಖೆ ಈ ಸಂಬಂಧ ಈಗಾಗಲೇ ಒತ್ತುವರಿ ಮಾಡಿಕೊಂಡಿದೆ. ಆದರೂ ಈ ಸಂಬಂಧ ನನಗೆವಯಾವ ನೋಟೀಸ್ ಬಂದಿಲ್ಲ ಅಂತಾನೇ ಗೀತ ಬಾಲಿ ಹೇಳಿದ್ದಾರೆ. ಇತ್ತ ಸೆಪ್ಟೆಂಬರ್18ಕ್ಕೆ ವಿಷ್ಣು ಸ್ಮಾರಕಕ್ಕೆ ಅಡಿಗಲ್ಲು ಹಾಕ್ತೇವೆ ಅಂತ ಹೇಳಿದ್ದಾರೆ. ಅಭಿಮಾನಿಗಳೆಲ್ಲ ಸ್ಮಾರಕದ ಸಿದ್ಧತೆಗೆ ರೆಡಿಯಾಗಿದ್ದಾರೆ. ಈಗ ನೋಡಿದ್ರೆ ಮತ್ತೆ ಗೀತಾ ಬಾಲಿ ಅವರು ಸುದ್ದಿಗೋಷ್ಟಿ ನಡೆಸಿ, ಮತ್ತೆ ಹೌಹಾರಿದ್ದಾರೆ.


