ಸುದ್ದಿಒನ್, ಚಳ್ಳಕೆರೆ, ಮೇ. 04 : ಗುಡಿ ಗೋಪುರ ದೇವಾಲಯಗಳು ಪೂಜಾ ಸ್ಥಳಗಳು ಅಷ್ಟೆಅಲ್ಲದೆ , ಇವುಗಳು ಮಾನಸಿಕ ನೆಮ್ಮದಿ, ಶಾಂತಿ ಮತ್ತು ಆಧ್ಯಾತ್ಮಿಕ ಶಕ್ತಿಯ ಕೇಂದ್ರಗಳಾಗಿವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದ ಮಟ್ಲಿಗೆರೆ ಕೆರೆ ಹಿಂಭಾಗದಲ್ಲಿ ನೆಲಸಿರುವ ಶ್ರೀಕಾಟಂಲಿಂಗೇಶ್ವ ನೂತನ ದೇವಸ್ಥಾನ ಲೋಕಾರ್ಪಣೆ,ಕಳಸ ಉತ್ಸವ ಹಾಗೂ ನೂತನ ವಿಗ್ರಹ ಪ್ರತಿಷ್ಠಾಪನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿ..
ಇಂದಿನ ಒತ್ತಡದ ಜೀವನದಲ್ಲಿ, ದೇವಾಲಯದ ಆವರಣವು ಭಕ್ತರಿಗೆ ದೈವಿಕ ಅನುಭವ ಮತ್ತು ನೆಮ್ಮದಿಯನ್ನು ನೀಡುತ್ತದೆ. ದೆವಾಲಯ
ಸುತ್ತಮುತ್ತಲಿನ ಪರಿಸರ ಮತ್ತು ದೇವಾಲಯದ ಒಳಾಂಗಣವು ಪ್ರಶಾಂತತೆಯನ್ನು ಕಲ್ಪಿಸಿಕೊಡುತ್ತದೆ, ಇದು ಧ್ಯಾನ ಮತ್ತು ಭಕ್ತಿಗೆ ಸಹಕಾರಿಯಾಗಿದೆ.
ಆಧುನಿಕ ಜಗತ್ತಿಗೆ ಮಾರುಹೋಗಿರುವ ನಾವು ದೇವಾಲಯಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಬದುಕಿನ ಜಂಜಾಟಗಳನ್ನು ಒತ್ತಡಗಳನ್ನು ಸ್ಪಲ್ಪ ಮಟ್ಟಿಗೆ ನೀಗಲು ದೇವಾಲಯಕ್ಕೆ ಒಮ್ಮೆ ಬಂದರೆ ನೆಮ್ಮದಿ ಸಿಗುತ್ತದೆ.
ಬೆಳಗೆರೆ ಗ್ರಾಮ ಒಂದು ವಿಶೇಷ ಗ್ರಾಮವಾಗಿದ್ದು ಬೆಳಗೆರೆ ಕೆರೆ ಏರಿ ಹತ್ತಿರ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನವಿದ್ದು ಅದೇ ರೀತಿಯಾಗಿ ಮಟ್ಟಲಿಗೆರೆಕೆರೆ ಏರಿ ಹತ್ತಿರ ಈ ದೇವಸ್ಥಾನ ನಿರ್ಮಾಣಗೊಂಡಿರುವುದು ಒಂದು ವಿಶೇಷವಾಗಿದೆ.
ದೇವಸ್ಥಾನಕ್ಕೆ ರಸ್ತೆ ಅವಶ್ಯಕತೆ ಇದೆ ಜೊತೆಗೆ ಇಲ್ಲಿ ಭಕ್ತರು ಬಂದು ಉಳಿದುಕೊಳ್ಳು ಸಮುದಾಯ ಭವನದ ಮುಂದಿನ ದಿನಗಳಲ್ಲಿ ಸಮುದಾಯ ಭವನಕ್ಕೆ ಹಾಗೂ ಇಲ್ಲಿಗೆ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು. ಈ ಸಮಯದಲ್ಲಿ. ಪರಶುರಾಮಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಹಾಗೂ ವಕೀಲರಾದ ಜಿ.ಟಿ.ಶಶಿಧರ್.ಕಾಡುಗೊಲ್ಲರ ಸಂಘದ ಯುವ ಘಟದ ಅಧ್ಯಕ್ಷ ಸಿದ್ದಾಪುರ ವಿರೇಶ,.ಮುಖಂಡರಾದಬೆಟ್ಟಪ್ಪನಹಳ್ಳಿ ಮಹಾಲಿಂಗಪ್ಪ
ದೇವಸ್ಥಾನ ಪೂಜಾರಿಗಳಾದ ಮಹಾಲಿಂಗಪ್ಪ, ಮುಖಂಡರಾದ ಕೆ.ಟಿ.ನಿಜಲಿಂಗಪ್ಪ,ಪಾಂಡುರಂಗಪ್ಪ,ಸಿ.ರಾಜಣ್ಣ,ಪಟೇಲ್ ಗೋಪಿನಾಥ,ಪೂಜಾರ್ ರಂಗಸ್ವಾಮಿ,ಎ.ಸುರೇಶ,ಪಾಂಡುರಂಗ, ಶಿವಣ್ಣ,ಗೋಪಾಲಪ್ಪ, ಮುದ್ದಿವೀರಪ್ಪ, ಗಿರಿಯಪ್ಪ,ಬೆಳಗೆರೆ ಗ್ರಾಮಪಂಚಾಯಿತಿ ಆಡಳಿತಾಧಿಕಾರಿ ರಮೇಶ, ಮಹಾಂತೇಶ್. ಪೂಜಾರ್ ಶ್ರೀಧರ್. ಸೇರಿದಂತೆ ಗ್ರಾಮಸ್ಥರು ಹಾಗೂ ಮುಖಂಡರು ಹಾಗೂ ಪೂಜಾರಿಗಳು ಇದ್ದರು.
























