ಕಲಬುರಗಿ: ರಾಜ್ಯದಲ್ಲಿ ಚುನಾವಣೆಯ ಸಂದರ್ಭದಲ್ಲಿ ಇವಿಎಂ ಮಷಿನ್ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆ ಜಾರಿಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ, ಯಾಕೆ ಕಾಂಗ್ರೆಸ್ ಪಕ್ಷಕ್ಕೆ ಇವಿಎಂ ಮಷಿನ್ ಮೇಲೆ ನಂಬಿಕೆ ಇಲ್ವಾ ಅಂತ ಕೇಳಿದಾಗ ನಿಮಗೆ ಏನು ಅನ್ನಿಸುತ್ತೆ ಎಂದು ರಿಪೀಟ್ ಪ್ರಶ್ನೆ ಕೇಳಿದ್ದಾರೆ.
ಬಳಿಕ ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಕಳೆದ ಕೆಲವು ವರ್ಷಗಳಿಂದ ಈ ಸಂಬಂಧ ಚಳುವಳಿ ಮಾಡಿದೆ. ಇವಿಎಂನಲ್ಲಿ ಮೋಸ ಆಗ್ತಿದೆ ಅಂತ. ನಾವ್ಯಾರು ಹೇಳಿದಾಗ ಸರಿ ಇರಲ್ಲ. ಈಗ ಅವರೇಳ್ತಾರೆ ಇವಿಎಂ ಸರಿ ಇದೆ ಅಂತ. ಮತ್ತೆ ಬ್ಯಾಲೆಟ್ ಪೇಪರ್ ತಂದದ್ದು ಒಳ್ಳೆಯ ಕೆಲಸ. ಮಾಡ್ತಾ ಇದಾರೆ ಮಾಡ್ಲಿ ಎಂದಿದ್ದಾರೆ.
ಜಿಎಸ್ಟಿಯಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿದ್ದು, ದರ ಕಡಿಮೆಯಾಗಿರುವುದರ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಎಂಟು ವರ್ಷದ ಹಿಂದೆಯೇ ಈ ಬಗ್ಗೆ ಹೇಳಿದೆವು, ಅವರು ಕೇಳಲಿಲ್ಲ. ಈಗ ದಿಢೀರನೇ ಯಾವ ಕಾರಣಕ್ಕಾಗಿ ಮಾಡ್ತಾ ಇದ್ದಾರೆ ಎಂಬುದು ಮೋದಿಯವರಿಗೇನೆ ಗೊತ್ತು. ಇದರಿಂದ ಬಡವರಿಗೆ ಅನುಕೂಲವಾಗಿದೆ, ಇದಕ್ಕೂ ನಾನೂ ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ. ಆದರೆ ನಾವೂ ಯಾವಾಗಲೂ ಜನಪರ ಇರುವಂತ ಸಮಸ್ಯೆಗಳನ್ನ ಎತ್ತಿ ಹಿಡಿದು ಹೇಳ್ತೇವೆ. ಅವರು ಯಾವಾಗಲೂ ಅದನ್ನ ನಿರ್ಲಕ್ಷ್ಯ ಮಾಡುತ್ತಲೇ ಬರುತ್ತಾರೆ. ನಾನೀಗ ಹೇಳಿದ್ರೆ, ನೀವೆಲ್ಲಾ ತಪ್ಪಾಗಿ ಭಾವಿಸ್ತೀರಿ. ಅವರಿಗೆ ಅಹಂಕಾರ ಏನಂದ್ರೆ ನಾವೂ ಏನೇ ಮಾಡಿದ್ರು ನಡೆಯುತ್ತೆ ಎಂಬುದು. ಇವತ್ತು ಅವರ ಅಹಂಕಾರವೇ ಅವರನ್ನ ತಿನ್ನುತ್ತಾ ಇದೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















