Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿವಿ ಸಾಗರದಿಂದ DRDO ಗೆ ಹರಿಯುವ ನೀರನ್ನು ನಿಲ್ಲಿಸಿ : ಚಿತ್ರದುರ್ಗದಲ್ಲಿ ರಾಜ್ಯ ರೈತ ಸಂಘ ಆಗ್ರಹ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ, ಸುರೇಶ್ ಪಟ್ಟಣ್,                     ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಫೆಬ್ರವರಿ 28 : ವಿ ವಿ ಸಾಗರದಿಂದ ಡಿಆರ್‍ಡಿಓಗೆ ಬಿಡುವ ನೀರನ್ನು ಸ್ಥಗಿತಗೊಳಿಸುವಂತೆ ರಾಜ್ಯ ರೈತ ಸಂಘ ಸರ್ಕಾರವನ್ನು ಆಗ್ರಹಿಸಿದೆ.

ಜಿಲ್ಲಾ ಪಂಚಾಯತಿ‌ಯ ಕೇಂದ್ರ ಸಚಿವರ ಕಛೇರಿಯ ಮುಂದೆ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಹಣವನ್ನು ನೀಡುವಂತೆ ಆಗ್ರಹಿಸಿ ಕಳೆದ 23 ದಿನಗಳಿಂದ ನಿರಂತರವಾಗಿ ರೈತರು ಧರಣಿ ನಡೆಸಲಾಗುತ್ತಿದೆ. ಕರ್ನಾಟಕದ ಹಿಂದಿನ ವಿಧಾನ ಸಭೆಯ ಚುನಾವಣೆ ಪ್ರಚಾರಕ್ಕೆ ಚಿತ್ರದುರ್ಗಕ್ಕೆ ಬಂದ ಪ್ರಧಾನ ಮಂತ್ರಿಗಳು ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಹಣವನ್ನು ಕಾಯ್ದಿರಿಸಿದ್ದೇವೆ ಎಂದು ಹೇಳಿದ್ದು ಸರಿಯಷ್ಟೇ, ಆದರೆ ಒಂದು ವರ್ಷ ಕೆಳದರೂ ಬಿಡುಗೆಡೆ ಮಾಡಿಲಿಲ್ಲ. ಇದೇ ಕಾರಣಕ್ಕೆ ಚಿತ್ರದುರ್ಗ ಎಂಪಿ ಕಛೇರಿಯ ಮುಂದೆ 23 ದಿನಗಳಿಂದ ನಿರಂತರವಾಗಿ ರೈತರು ಧರಣಿ ನಡೆಸುತ್ತಿದ್ದಾರೆ ಈ ಬಗ್ಗೆ ಎಂಪಿ ನಾರಾಯಣಸ್ವಾಮಿ ಯವರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಕರಾತ್ಮಕವಾಗಿ ದೊರೆತಿರುವುದಿಲ್ಲ ಎಂದು ದೂರಿದ್ದಾರೆ.

ಈ ವರ್ಷ 50 ವರ್ಷಗಳಲ್ಲಿ ಅತ್ಯಂತ ಭೀಕರ ಬರವನ್ನು ನಮ್ಮ ಜಿಲ್ಲೆಯಲ್ಲೂ ಎದುರಿಸುತ್ತಿದೇವೆ ಕೃಷಿ ಭೂಮಿಯಲ್ಲಿ ಮೆಳೆಯಿಲ್ಲದೆ ಬೆಳೆ ಇಲ್ಲ ಮತ್ತು ಬೋರ್‍ವೆಲೆಗಳಲ್ಲಿ ನೀರು ಬತ್ತಿ ಹೋಗಿದೆ. ತೋಟಗಳೆಲ್ಲ ಒಣಗಲು ಪ್ರಾರಂಭಿಸಿವೆ. ಕುಡಿಯುವ ನೀರಿಗೂ ಆಹಾಕಾರ ಪಡುವಂತಾಗಿದೆ ಈ ಜಿಲ್ಲೆಯಲ್ಲಿ ಯಾವುದೇ ನೀರಿನ ಮೂಲಗಳು ಇಲ್ಲ, ಆದಾಗ್ಯೂ ತಾವುಗಳು ಭದ್ರಾ ಮೆಲ್ದಂಡೆ ಯೋಜನೆಗೆ ಸಹಕರಿಸಿ ನೀರಾವರಿ ಕಲ್ಪಿಸದೇ ಇರುವ ಕಾರಣ ಸುಮಾರು 30 ಸಾವಿರ ಎಕರೆಗಿಂತಲೂ ಹೆಚ್ಚು ಭೂಮಿಯಲ್ಲಿ ಬೆಳೆ ಬೆಳೆಯಬಹುದಾದ ನೀರನ್ನು ಡಿ.ಆರ್.ಡಿ.ಓಗೆ ಕೊಡುವುದನ್ನು ಪರಿಗಣಿಸಿ ಕೂಡಲೇ ಡಿ.ಆರ್.ಡಿ.ಓಗೆ ನೀರನ್ನು ತಡೆಹಿಡಿಯಬೇಕೆಂದು ಈ ಮೂಲಕ ಒತ್ತಾಯಿಸಲಾಯಿತು.

ಸರ್ಕಾರ ನೀರನ್ನು ನಿಲ್ಲಿಸದಿದ್ದಲ್ಲಿ ರೈತರೇ ಈ ನೀರನ್ನು ತಡೆಹಿಡಿಯಬೇಕೆಂದು ಮುಂದಾಗಲಿದ್ದಾರೆಂದು ಈ ಮೂಲಕ ಗಮನ ಸೆಳೆದಿದೆ. ಅಲ್ಲದೆ ಮುಂದೆ ಜರುಗಬಹುದಾದ ಯಾವುದೇ ಅನಾಹುತಗಳಿಗೆ ರೈತ ಸಂಘಟನೆಯಾಗಲೀ, ರೈತರಾಗಲೀ ಸಾರ್ವಜನಿಕರಾಗಲೀ ಜವಾಬ್ದಾರರಲ್ಲ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಈಚಘಟ್ಟ ಸಿದ್ದವೀರಪ್ಪ, ಡಿ ಸಿ ಹಳ್ಳಿ ಮಲ್ಲಿಕಾರ್ಜುನಪ್ಪ, ಹೆಚ್ ಡಿ ಪುರ ಮಲ್ಲಿಕಾರ್ಜುನ ಸತೀಶ್, ಬಸವರಾಜಪ್ಪ, ಜಯಣ್ಣ, ರಂಗಸ್ವಾಮಿ, ಚಂದ್ರಮೌಳಿ, ಇಂದೂದಾರ, ಲೋಕಣ್ಣ, ಮಹಾದೇವಪ್ಪ, ರಾಜಪ್ಪ, ವಿಶ್ವನಾಥಪ್ಪ, ಜಯಣ್ಣ,  ಸದಾಶಿವಪ್ಪ, ನಾಗರಾಜ ಚಾರ್, ಹರಳಯ್ಯ,  ಅಜ್ಜಪ್ಪ, ಚಂದ್ರಪ್ಪ, ನಾಗಪ್ಪ, ತುಳಜಮ್ಮ, ಇನ್ನೂ ಮುಂತದಾವರು ಭಾಗವಹಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!