Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸುನೀತಾ ವಿಲಿಯಮ್ಸ್ ಇರುವ ನೌಕೆಯಲ್ಲಿ ಬೆಚ್ಚಿಬೀಳಿಸಿದ ಕರ್ಕಶ ಶಬ್ದ : ಏನದು..?

---Advertisement---

 

ಭಾರತೀಯ ಮೂಲದ ಗಗನಯಾತ್ರಿ ಸುನೀಯಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶಕ್ಕೆ ಹೋಗಿ ಬಹಳಷ್ಟು ಸಮಯವಾಗಿದೆ. ಆದಷ್ಟು ಬೇಗ ಅವರು ಭೂಮಿಗೆ ಬರಲಿ ಎಂದೇ ದೇಶದ ಜನ ಪ್ರಾರ್ಥನೆ ಮಾಡುತ್ತಿದ್ದಾರೆ. ಯಾಕೆಂದರೆ ಆ ಇಬ್ಬರು ಗಗನಯಾತ್ರಿಗಳು ಅಲ್ಲಿ ಆರಾಮವಾಗಿ ಏನು ಇಲ್ಲ. ತಾಂತ್ರಿಕ ದೋಷದಿಂದ ಭೂಮಿಗೆ ಬರಬೇಕಾದವರು ಬಾಹ್ಯಾಕಾಶದಲ್ಲಿಯೇ ಸಿಲುಕಿದ್ದಾರೆ. ಊಟ ನಿದ್ರೆಯಿಲ್ಲದೆ ಗಾಳಿಯಲ್ಲಿಯೇ ತೇಲುತ್ತಿದ್ದಾರೆ. ಹೀಗಾಗಿ ನಾಸಾ ಕೂಡ ಸಾಧ್ಯವಾದಷ್ಟು ಭೂಮಿಗೆ ಕರೆತರುವ ಪ್ರಯತ್ನ ಮಾಡುತ್ತಿದೆ. ಆದರೆ ಎಷ್ಟೇ ಪ್ರಯತ್ನಿಸಿದರು ಆ ಇಬ್ಬರು ಭೂಮಿಗೆ ಬರುವುದು ಮುಂದಿನ ವರ್ಷಕ್ಕೇನೆ.

https://x.com/Unexplained2020/status/1830352770362438078?t=nNo1v0Ar7AEgXxRdNpJVfQ&s=19

ಸದ್ಯ ಒಂದು ಶಾಕಿಂಗ್ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಾಸಾ ಸದ್ಯ ನಿರಂತರವಾಗಿ ಇಬ್ಬರ ಸಂಪರ್ಕದಲ್ಲಿ ಇದೆ. ಬುಜ್ ವಿಲ್ಮೋರ್ ಜೊತೆಗೆ ನಾಸಾ ಮಾತನಾಡುತ್ತಿರುವಾಗ ಏನೋ ವಿಚಿತ್ರ ಶಬ್ಧವೊಂದು ಕೇಳಿಸಿದೆ. ಕೇಳುವುದಕ್ಕೇನೆ ಕರ್ಕಶವಾದ ಶಬ್ದವಾಗಿದೆ.

ಇದರ ಬಗ್ಗೆ ವಿಲ್ಮೋರ್ ವಿವರಣೆ ನೀಡಿದ್ದಾರೆ. ಈ ವಿಚಿತ್ರ ಶಬ್ಧ ಜಲಾಂತರ್ಗಾಮಿ ಸೋನಾರ್ ಅಥವಾ ಬಾಹ್ಯಾಕಾಶ ನೌಕೆಯ ಹೊರಗಿನಿಂದ ಟ್ಯಾಪಿಂಗ್ ಮಾಡುತ್ತಿರುವ ಧ್ವನಿ ಎಂದು ವಿವರಣೆ ನೀಡಿದ್ದಾರೆ. ನಾಸಾದ ಮಿಷನ್ ಕಂಟ್ರೋಲ್ ಕೂಡ ಈ ಧ್ವನಿಯನ್ನು ಪತ್ತೆ ಹಚ್ಚಿದೆ. ಇದು ಸೋನಾರ್ ಶಬ್ಧ ಎಂಬುದನ್ನು ತಿಳಿಸಿದೆ. ಸದ್ಯ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೀರ್ ಬಾಹ್ಯಾಕಾಶಕ್ಕೆ ತೆರಳಿ ಮೂರು ತಿಂಗಳಾಗಿದೆ. ಕೇವಲ ಒಂದು ವಾರಕ್ಕೆ ಎಂದು ಹೋದವರು ತಾಂತ್ರಿಕ ದೋಷದಿಂದ ಅಲ್ಲಿಯೇ ಉಳಿಯುವಂತೆ ಆಗಿದೆ. ಆದಷ್ಟು ಬೇಗ ಇಬ್ಬರು ಭೂಮಿಗೆ ಬರಲಿ ಎಂದೇ ಹಾರೈಸುತ್ತಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment