ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 20 : ದೂದ್ ಪಾಪೇಶ್ವರ ಫಾರ್ಮಸುಟಿಕಲ್ ಕಂಪನಿ ಮುಂಬೈ ಹಾಗೂ ಡಿಜಿಎಂ. ಅಲುಮ್ನಿ ಅಸೋಸಿಯೇಷನ್ ಗದಗ ಇವುಗಳ ಸಹಯೋಗದೊಂದಿಗೆ ಬಾರ್ಲೈನ್ ರಸ್ತೆಯಲ್ಲಿರುವ ಸುಶೃತ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣೆಯನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಡಾ.ನವೀನ್ ಬಿ.ಸಜ್ಜನ್ ಹಾಗೂ ಡಾ.ಜಗದೀಶ ಇವರುಗಳು ನೂರಕ್ಕು ಹೆಚ್ಚು ಮಂದಿಗೆ ತಪಾಸಣೆ ನಡೆಸಿ ಔಷಧಿಗಳನ್ನು ವಿತರಿಸಿದರು.
ಮಹೇಶ್ ಕಡ್ಲೆಗುದ್ದು, ಪಿಲ್ಲಹಳ್ಳಿ ವೀರೇಶ್, ವಿನಾಯಕ ಆರ್.ಜಿ, ಮಹಾಂತಮ್ಮ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಚಿತ ತಪಾಸಣೆಯಲ್ಲಿ ಭಾಗವಹಿಸಿದ್ದರು.











