ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜು. 22 : ಛಲವಾದಿ ಗುರುಪೀಠಕ್ಕೆ ಭಕ್ತರೊಬ್ಬರು ತಮ್ಮ ಇನೋವಾ ಕಾರನ್ನು ಗುರುಗಳಿಗೆ ದಾನವಾಗಿ ನೀಡಿದ್ದಾರೆ.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವೃತ್ತದಲ್ಲಿರುವ ಒನಕೆ ಓಬವ್ವ ವೃತ್ತದ ಪ್ರತಿಮೆಯ ಬಳಿ ಇಂದು ನಡೆದ ಸರಳ ಸಮಾರಂಭದಲ್ಲಿ ಶ್ರೀಮಠದ ಭಕ್ತರಾದ ಅರವಿಂದ ಈಶ್ವರ ಪಾಟೀಲ್ ರವರ ಬೆಂಗಳೂರಿನಲ್ಲಿ ಐಟಿ ಕಂಪನಿ ಹಾಗೂ ಬೆಳಗಾವಿಯಲ್ಲಿ ಸಣ್ಣದಾದ ಕೈಗಾರಿಕೆಯನ್ನು ನಡೆಸುತ್ತಿದ್ದು ನಮ್ಮ ಸಮುದಾಯದ ಗುರುಗಳು ಸಮಾಜವನ್ನು ಸಂಘಟಿಸಲು ಬಸ್ಗಳಲ್ಲಿ ಪ್ರಯಾಣ ಮಾಡುವುದು ಬೇಡ ಎಂದು ಛಲವಾದಿ ಗುರುಪೀಠಕ್ಕೆ ಕಾರನ್ನು ಕೂಡುಗೆಯಾಗಿ ನೀಡಿದ್ದಾರೆ.
ನಮ್ಮ ಸಮುದಾಯದವರಿಗೆ ಸೇರಿದಂತೆ ಬೇರೆ ಸಮುದಾಯದವರಿಗೂ ಸಹಾ ಉದ್ಯೋಗವನ್ನು ನೀಡುವ ಹಂಬಲವನ್ನು ಹೊಂದಿದ್ದು ಈಗ ಇರುವ ಐಟಿ ಕಂಪನಿಯ 132 ಉದ್ಯೋಗಿಗಳನ್ನು 1000 ಜನಕ್ಕೆ ಏರಿಸಬೇಕೆಂಬ ಆಭಿಲಾಷೆಯನ್ನು ಹೊಂದಲಾಗಿದೆ, ನಮ್ಮವರು ಸರ್ಕಾರಿ ಉದ್ಯೋಗವನ್ನು ಕಾಯದೇ ಸ್ವಯಂ ಆಗಿ ಕೆಲಸವನ್ನು ಮಾಡುತ್ತಾ ಬೇರೆಯವರಿಗೆ ಉದ್ಯೋಗವನ್ನು ನೀಡುವಂತರಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಛಲವಾದಿ ಗುರುಪೀಠ ಶ್ರೀ ಬಸವನಾಗ್ತಿ ದೇವ ಶ್ರೀಗಳು, ನ್ಯಾಯಾವಾದಿ ಪ್ರತಾಪ್ ಜ್ಯೋಗಿ, ನವೀನ್, ಪ್ರಸನ್ನ, ಪ್ರಸಾದ್, ಗೋವಿಂದರಾಜು, ವಿಜಯ ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








