Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆಯಲ್ಲಿ ಬಸವೇಶ್ವರ ಕಾರ್ಣಿಕ : ಮಹಿಳೆಯರ ಏಳಿಗೆ.. ಸೋಷಿಯಲ್‌ಮೀಡಿಯಾ ಹುಚ್ಚಿನ ಬಗ್ಗೆ ಎಚ್ಚರಿಕೆ..!

---Advertisement---

ಸುದ್ದಿಒನ್, ದಾವಣಗೆರೆ: ಕೆಲವೊಂದು ಪ್ರದೇಶದಲ್ಲಿ ಕಾರ್ಣಿಕ ಭವಿಷ್ಯ ತುಂಬಾ ಮಹತ್ತರ ಸ್ಥಾನ ಹೊಂದಿದೆ. ಅದರಂತೆ ದಾವಣಗೆರೆಯ ಕಾರ್ಣಿಕಾ ಕೂಡ. ಕಡೆಯ ಶ್ರಾವಣದಂದು ನುಡಿಯುವ ಈ ಕಾರ್ಣಿಕಾಕ್ಕಾಗಿ ಬಹಳಷ್ಟು ಮಂದಿ ಕಾಯುತ್ತಿರುತ್ತಾರೆ. ಇದೀಗ ದಾವಣಗೆರೆಯ ಬಸವೇಶ್ವರ ಸ್ವಾಮಿಯೂ ಕಾರ್ಣಿಕಾ ನುಡಿದಿದೆ. ಈ ಕಾರ್ಣಿಕಾದಿಂದ ಮಹಿಳೆಯರ ಅಭಿವೃದ್ಧಿಯ ಬಗ್ಗೆ ತಿಳಿಸಿದೆ.

ದಾವಣಗೆರೆಯಲ್ಲಿ ಇತಿಹಾಸ ಪ್ರಸಿದ್ಧ ಆನೆಕೊಂಡ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಇದೆ. ಪ್ರತಿ ವರ್ಷ ಕಡೆಯ ಶ್ರಾವಣ ಇಲ್ಲಿ ಕಾರ್ಣಿಕಾ ಭವಿಷ್ಯವನ್ನು ನುಡಿಯುತ್ತಾರೆ. ಈ ಬಾರಿಯೂ ಭವಿಷ್ಯವನ್ನು ನುಡಿಯಲಾಗಿದೆ. ನೀಲಾನಹಳ್ಳಿ ಶ್ರೀಆಂಜನೇಯ ಸ್ವಾಮಿ, ಆನೆಕೊಂಡದ ಶ್ರೀ ಬಸವೇಶ್ವರ, ನಿಟುವಳ್ಳಿ ಶ್ರೀದುರ್ಗಾಂಬಿಕಾ ಸೇರಿದಂತೆ ಏಳು ಹಳ್ಳಿಗಳ ದೇವರ ಮೆರವಣಿಗೆ ಮಾಡಲಾಗುತ್ತದೆ. ಬಳಿಕ ಕಾರ್ಣಿಕಾ ಭವಿಷ್ಯವನ್ನು ನುಡಿಯಲಾಗುತ್ತದೆ.

ಅನಾದಿ ಕಾಲದಿಂದಲೂ ಇಲ್ಲಿ ಭವಿಷ್ಯವನ್ನು ನುಡಿಯಲಾಗುತ್ತದೆ. ಸ್ವಾಮಿಯ ದರ್ಶನಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.ಪದ್ಧತಿಯಂತೆ ಆಚರಣೆಗಳ ಜೊತೆಗೆ ನೀಲಾನಹಳ್ಳಿಯ ಅರ್ಚಕ ದಾಸಯ್ಯ ಕಾರ್ಣಿಕ ನುಡಿದಿದ್ದಾರೆ. ನರಲೋಕದ ಜನಕೆ ಆನೆ ತಣ್ಣೀರ ಉಗೀತಲೆಎಂದರೆ ಉತ್ತಮ ಮಳೆಯಾಗಲಿದೆ, ಮುತ್ತೈದೆಯರ ಭೂತಾಯಿ ಉಡಿತುಂಬಿತಲೇ ಎಂದು ಕಾರ್ಣಿಕಾ ನುಡಿದಿದೆ.

ನರಲೋಕದ ಜನರ ದೃಷ್ಟಿ ಹುಚ್ಚಾದೀ ತಲೆ ಅಂದರೆ ಈಗಿನ ಕಾಲದ ಸೋಷಿಯಲ್ ಮೀಡಿಯಾಗಳ ಅತಿಯಾದ ಬಳಕೆ, ಅದರಿಂದ ಆಗುವ ಕೆಡುಕು, ಅಪಾಯಗಳನ್ನು ಸೂಚ್ಯವಾಗಿ ಹೇಳಿದಂತಿದೆ ಈ ಸಲದ ಕಾರ್ಣಿಕ ಎಂದು ಸ್ಥಳದಲ್ಲಿದ್ದ ಹಿರಿಯರು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿದರು. ಈ ಬಾರಿ ಮಹಿಳೆಯರಿಗೂ ಒಳಿತಾಗುತ್ತದೆ ಎಂದೇ ಭವಿಷ್ಯದಲ್ಲಿ ಸೂಚನೆ ನೀಡಲಾಗಿದೆ. ಈ ಮೂಲಕ ಕಾರ್ಣಿಕಾ ಕೇಳಲು ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ಜನ ಸಂತೃಪ್ತರಾದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment