ಬಿಕ್ಲು ಶಿವನ ಕೊ* ಕೇಸ್ : ಭೈರತಿ ಬಸವರಾಜ್ ಸಹೋದರನ ಪುತ್ರ ಅರೆಸ್ಟ್..!

1 Min Read

ಬೆಂಗಳೂರು: ರಾಜ್ಯದಲ್ಲಿ ಬಿಕ್ಲು ಶಿವನ ಕೊ* ಕೇಸ್ ಸಾಕಷ್ಟು ಸಂಚಲನವನ್ನು ಸೃಷ್ಟಿ ಮಾಡಿದೆ. ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರು ಹೆಸರು ಓಡಾಡುತ್ತಿದ್ದು, ಈಗಾಗಲೇ ವಿಚಾರಣೆಗೂ ಕರೆದಿದ್ದಾರೆ. ಇದರ‌ ನಡುವೆ ದೊಡ್ಡದೊಂದು ಬೆಳವಣಿಗೆ ನಡೆದಿದ್ದು, ಈ ಕೊ* ಕೇಸಲ್ಲಿ ಭೈರತಿ ಬಸವರಾಜ್ ಸಹೋದರನ ಮಗ ಅನಿಲ್ ಅವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಗೆ ಅನಿಲ್ ಕಾರು ನೀಡಿದ್ದರು ಎಂಬ ಹಿನ್ನೆಲೆ ವಶಕ್ಕೆ ಪಡೆದುಕೊಂಡಿದ್ದಾರೆ.

ಬಿಕ್ಲು ಶಿವನ ಕೊಲೆ ಕೇಸಲ್ಲಿ ಅರುಣ್ ಮತ್ತು ನವೀನ್ ಮೊದಲ ಆರೋಪಿಯಾಗಿರುವ ಜಗದೀಶ್ ಸಹಚರರಾಗಿದ್ದಾರೆ. ಇವರಿಗೆ ಭೈರತಿ ಬಸವರಾಜ್ ಸಹೋದರ ಮಗ ಅನಿಲ್ ಕಾರು ನೀಡಿದ್ದರಂತೆ. ಹೀಗಾಗಿ ಭಾರತೀನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಬಿಕ್ಲು ಶಿವ ಕೊ* ಕೇಸ್ ಚುರುಕುಗೊಂಡಿದ್ದು, ಅನುಮಾನವಿರುವವರನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬಿಕ್ಲು ಶಿವನ ಕೊಲೆಗೆ ಕಾರಣ ಏನಂದ್ರೆ, ಕಿತ್ತಗನೂರಿನಲ್ಲಿರುವ ಒಂದೂವರೆ ಎಕರೆ ಜಮೀನು ಎನ್ನಲಾಗಿದೆ. ಈ ಜಮೀನಿಗೆ ಮೂವರು ಮಾಲೀಕರಿದ್ದರು. ಈ ಪೈಕಿ ನದಾಫ್ ಬಳಿ ಬಿಕ್ಲು ಜಮೀನು ಖರೀದಿ ಅಗ್ರಿಮೆಂಟ್ ಮಾಡಿಸಿಕೊಂಡಿದ್ದ. ಮತ್ತೊಬ್ಬ ಮಾಲೀಕನಿಂದ ರವಿ ಅಗ್ರಿಮೆಂಟ್ ಮಾಡಿಸಿಕೊಂಡು ಕಾಂಪೌಂಡ್ ಹಾಕುತ್ತಿದ್ದ.

ಇದರಿಂದ ಕೆರಳಿದ ಶಿವ ಆ ಸಮಯಕ್ಕೆ ಕಾಂಪೌಂಡ್ ಕೆಡವಿದ್ದ. ಬಳಿಕ ರವಿ ಬೆನ್ನ ಹಿಂದೆ ಇದ್ದ ಜಗದೀಶ್ ಮತ್ತೆ ಕಿರಣ್, ಶಿವುಗೆ ಪ್ರಾಣ ಬೆದರಿಕೆ ಹಾಕಿದ್ದರು. ಈ ಬಗ್ಗೆ ಶಿವು ಅಂದಿನ ಕಮಿಷನರ್ ಗೆ ದೂರು ನೀಡಿದ್ದ.‌ ರಾಮಮೂರ್ತಿನಗರ ಠಾಣೆಗೆ ದೂರು ನೀಡಿದ್ದ. ಆದರೆ ಅವರು ಎನ್​ಸಿಆರ್​ ದಾಖಲಿಸಿ ಕೈ ಚೆಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks