Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆರ್ಸಿಬಿ ಸಂಭ್ರಮಾಚರಣೆಗೆ ರಾಜ್ಯಪಾಲರು ಬಂದಿದ್ದೇಕೆ..? ಡಿಸಿಎಂ ಡಿಕೆ ಶಿವಕುಮಾರ್ ಕೊಟ್ಟ ಉತ್ತರವೇನು..?

ಡಿಕೆ ಶಿವಕುಮಾರ್
---Advertisement---

ದೆಹಲಿ; ಆರ್ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ರಾಜ್ಯಪಾಲರು ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿದ್ದಲ್ಲ ಎಂದೂ ಆಡಳಿತ ಪಕ್ಷ ಹೇಳ್ತಾ ಇದೆ. ಆದರೆ ರಾಜ್ಯಪಾಲರು ಅಲ್ಲಿಗೇಗೆ ಬಂದರೂ ಎಂಬ ಪ್ರಶ್ನೆಯೂ ಜನರನ್ನ ಕಾಡುತ್ತಿದೆ. ಈ ಬಗ್ಗೆ ದೆಹಲಿಗೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದಾಗ, ಸರಿಯಾದ ಉತ್ತರ ಕೊಡದೆ ಜಾರಿಕೊಂಡಿದ್ದಾರೆ.

ಟೌನ್ ಪ್ಲ್ಯಾನಿಂಗ್ ವಿಚಾರದಲ್ಲಿ ಹೊಸ ಪಾಲಿಸಿಯನ್ನ ಮಾಡ್ತಾ ಇದ್ದರು. ಈ ಹಿಂದೆನೆ ಮಾಡಿದ್ರು. ಆದರೆ ಇಂಪ್ಲಿಮೆಂಟ್ ಮಾಡಿರಲಿಲ್ಲ. ಈಗ ಮಾಡ್ತಾ ಇದ್ದಾರೆ. ರೋಡ್ಸ್ ಗಳಿಗೆ ಫೆಸಿಪಿಕ್ ಆಗಿ ಒಂದೊಂದು ಮಾಡಿದ್ದಾರೆ. ಅದರ ಭಾಗವಾಗಿ ನನಗೆ ಪ್ರೆಸೆಂಟೇಷನ್ ಕೊಡ್ತಾ ಇದ್ದಾರೆ. ಅದಾದ ಮೇಲೆ ಕಸದ ಡಂಪಿಂಗ್ ಯಾರ್ಡ್ ಗೆ ವಿಸಿಟ್ ಮಾಡ್ತೇವೆ ನಮ್ಮ ಟೀಂ.

ಹೈಕಮಾಂಡ್ ಭೇಟಿ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಸಲ ಕಷ್ಟ ಆಗಬಹುದು. ಎತ್ತಿನ ಹೊಳೆದು ನಾಳೆ ಮೀಟಿಂಗ್ ಇದೆ. ಚೀಫ್ ಮಿನಿಸ್ಟರ್ ಎರಡು ಮೂರು ಸಲ ಪೋಸ್ಟ್ ಪೋನ್ ಮಾಡಿದ್ರು.12ನೇ ತಾರೀಖು ಮತ್ತೊಂದು ಮೀಟಿಂಗ್ ಇದೆ. ಅವಾರ್ಡ್ ಬಗ್ಗೆ ಎಲ್ಲಾ ಎಂಪಿಗಳನ್ನ ಮೀಟ್ ಮಾಡಬೇಕು.

ರಾಜ್ಯಪಾಲರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿದ್ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಆ ಪ್ರಶ್ನೆಯನ್ನ ನೀವೂ ರಾಜ್ಯಪಾಲರಿಗೆ ಕೇಳಬೇಕು. ನನಗೆ ಕೇಳಿದರೆ ಏನು ಪ್ರಯೋಜನ. ನಂಗೆ ಏನು ಗೊತ್ತಿಲ್ಲ. ಆಯೋಗ ತನಿಖೆಯನ್ನ ನಡೆಸ್ತಾ ಇದೆ. ನೀವೂ ರಾಜ್ಯಪಾಲರನ್ನೇ ಭೇಟಿ ಮಾಡಿ ಅಂತೇಳಿ ಹೊರಟಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment