Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಒಂದೇ ಸಮನೆ ಸುರಿಯುತ್ತಿರುವ ಮಳೆ : ಬೆಂಗಳೂರಿನಲ್ಲಿ ಏರಿಕೆಯಾಯ್ತು ಟೊಮೆಟೊ ಬೆಲೆ..!

---Advertisement---

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಮಳೆರಾಯ ಪುರುಸೊತ್ತನ್ನು ಕೊಡದಂತೆ ಸುರಿಯುತ್ತಿದ್ದಾನೆ.‌ ಇದರಿಂದ ಹಲವು ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ. ಬೆಳೆ ನಷ್ಟದಿಂದಾಗಿ ಬೆಲೆ ಏರಿಕೆಯ ಬಿಸಿಯೂ ಗ್ರಾಹಕರನ್ನು ಬಾಧಿಸುತ್ತಿದೆ. ಈಗಾಗಲೇ ಈರುಳ್ಳಿ ಬೆಲೆ ಏರಿಕೆಯಿಂದಾನೇ ಗ್ರಾಹಕರು ತತ್ತರಿಸಿ ಹೋಗಿದ್ದಾರೆ. ಈಗ ಟೊಮೋಟೋ ಬೆಲೆಯೂ ಏರಿಕೆಯಾಗಿದೆ.

ಸಾಲು ಸಾಲು ಹಬ್ಬಗಳು ಶುರುವಾಗಿವೆ‌. ಈಗಾಗಲೇ ಟಮೋಟೊ ಬೆಲೆ ಏರಿಕೆಯಲ್ಲಿಯೇ ಇದೆ. ಕಡಿಮೆಯಾಗುತ್ತದೆ ಎಂಬ ನಿರೀಕ್ಷೆ ಇದ್ದವರಿಗೆ ಮತ್ತೆ ಏರಿಕೆಯ ಬಿಸಯನ್ನೇ ನೀಡಿದೆ. ಗ್ರಾಹಕರಿಗೆ ತರಕಾರಿಗಳನ್ನು ಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಬೇಸರ ಮಾಡಿಕೊಂಡೆ ತರಕಾರಿಯನ್ನು ಕೊಂಡುಕೊಂಡು ಮನೆ ಕಡೆಗೆ ನಡೆಯುತ್ತಿದ್ದಾರೆ.

ಮಳೆ ಹೆಚ್ಚಾದ ಕಾರಣ ಮಾರುಕಟ್ಟೆಗೆ ಟೊಮೋಟೊ ಪೂರೈಕೆಯಾಗುತ್ತಿಲ್ಲ. ಇದರ ಪರಿಣಾಮ ಜನರಲ್ಲಿ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಹೆಚ್ಚಾದಾಗ ಇರುವ ವಸ್ತುಗಳಿಗೆ ಬೆಲೆ ಜಾಸ್ಯಿ ಮಾಡಲಾಗುತ್ತದೆ. ಅದೇ ರೀತಿ ಟೊಮೋಟೋ ಕೂಡ ಬೆಲೆ ಏರಿಕೆ ಮಾಡುತ್ತಲೆ ಇದೆ. ಇಂದು ಬೆಂಗಳೂರು ಮಾರುಕಟ್ಟೆಯಲ್ಲಿಕೆಜಿ ಟೊಮೋಟೊ 50 ರೂಪಾಯಿ ದಾಟಿದೆ. ಈ ಹಿಂದೆ ಮಾರುಕಟ್ಟೆಗೆ 40 ಸಾವಿರ ಬಾಕ್ಸ್ ಟಮೋಟೋ ಬರುತ್ತಿತ್ತು. ಆದರೆ ಈಗ 20 ಬಾಕ್ಸ್ ಟಮೋಟೊ ಬರುತ್ತಿದೆ. ಇದರಿಂದ ಬೆಲೆ ಜಾಸ್ತಿಯಾಗಿದೆ.

ಈ ಮೊದಲೆಲ್ಲಾ ಕೋಲಾರದ ಭಾಗದ ಟಮೋಟೊಗೆ ಬೇಡಿಕೆ ಜಾಸ್ತಿ ಇತ್ತು. ಅಲ್ಲಿನ ರೈತರು ಹೆಚ್ಚಾಗಿ ಟೊಮೋಟೊ ಬೆಳೆಯುತ್ತಿದ್ದರು. ಅದಷ್ಟೇ ಅಲ್ಲದೆ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಂಡ್ಯ, ಮೈಸೂರು, ಚಳ್ಳಕೆರೆ ಭಾಗದ ರೈತರು ಕೂಡ ಟೊಮೋಟೊ ಬೆಳೆಯುತ್ತಿದ್ದರು. ಮಾತುಕಟ್ಟೆಗೆ ಹೆಚ್ಚಿನ ಟೊಮೋಟೋ ಬರುತ್ತಿತ್ತು. ಆದರೆ ಈಗ ಮಾರುಕಟ್ಟೆಗೇನೆ ಕಡಿಮೆ ಟೊಮೋಟೋ ಬರುತ್ತಿದೆ. ಹಾಗಾಗಿ ಬೆಲೆಯಲ್ಲೂ ಜಾಸ್ತಿಯಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...