Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಾಜಿ ಶಾಸಕ ರಾಜೀವ್ ಬೆಂಬಲಿಗರಿಂದ ಜಮೀನು ಬರೆಸಿಕೊಂಡ ಆರೋಪ : ದಯಾಮರಣ ನೀಡಿ ಎಂದ ನೊಂದ ಕುಟುಂಬ..!

---Advertisement---

 

 

ಬೆಳಗಾವಿ: ಕುಡಚಿಯ ಮಾಜಿ ಶಾಸಕ ಪಿ ರಾಜೀವ್ ಅವರ ಬೆಂಬಲಿಗರಿಂದ ಜಮೀನು ಕಬಳಿಕೆ ಆರೋಪ ಕೇಳಿ ಬಂದಿದೆ. ಕುಟುಂಬ ಒಂದಕ್ಕೆ ಗನ್ ತೋರಿಸಿ, ಎಂಟು ಎಕರೆ ಜಮೀನನ್ನು ಬರೆಸಿಕೊಂಡಿರುವ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ನೊಂದ ದಂಪತಿ ಕೋರ್ಟ್ ಮುಂದೆ, ದಯಾಮರಣ ನೀಡಿ, ಇಲ್ಲವೆ, ಜಮೀನು ಕೊಡಿಸಿ ಎಂದು ಕುಳಿತಿದ್ದಾರೆ.

ಮಾಜಿ ಶಾಸಕರ ಬೆಂಬಲಿಗರು ರಾಯಭಾಗ ಬಳಿಯ ಜಲಾಲಾಪುರ ಬಳಿಯ ಸರ್ವೆ ನಂಬರ್ 744ರಲ್ಲಿರುವ ಎಂಟು ಎಕರೆ ಜಮೀನನ್ನು ಬರೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನ್ಯಾಯಾಲಯದಲ್ಲಿ ಸುಳ್ಳು ಹೇಳಿಸಿ, ಗನ್ ತೋರಿಸಿ, ನಮ್ಮಿಂದ ಆಸ್ತಿ ಕಬಳಿಕೆ ಮಾಡಿಕೊಂಡಿದ್ದಾರೆ. ಆಸ್ತಿ ವಾಪಾಸ್ ಕೊಡಿಸಿ, ಇಲ್ಲ ದಯಾ ಮರಣ ನೀಡಿ ಎಂದು ಕೋರ್ಟ್ ಮುಂದೆ ಬೇಡಿಕೊಂಡಿದ್ದಾರೆ.

ಎರಡು ಮಕ್ಕಳನ್ನು ಕರೆದುಕೊಂಡು ಬಂದಿರುವ ದಂಪತಿ, ಪ್ರಭಾವಿಗಳಿಗೆ ಹೆದರಿ ನಾವೂ ಬದುಕುತ್ತಿದ್ದೇವೆ. ನಮ್ಮ ಜಮೀನು ಕೊಡಿಸಿ, ಇಲ್ಲ ದಯಾ ಮರಣ ಕೊಡಿ ಎಂದು ಕೋರ್ಟ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಂದು, ಬ್ಯಾನರ್ ಹಿಡಿದು ಪ್ರತಿಭಟಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...