ಯುಗಾದಿ ಕವಿತೆ : ಯುಗದ ಆದಿ : ಕೆ. ನಿರ್ಮಲ ಮರಡಿಹಳ್ಳಿ,

suddionenews
1 Min Read

 

ನವೋಲ್ಲಾಸ ನವೋತ್ಸಾಹ ನವಚೈತನ್ಯದ
ಚೈತ್ರಮಾಸ ಬಂದಿದೆ
ಹೊಸತನದಾಗಮನದ
ಜೀವಂತಿಕೆ ಕಂಡಿದೆ

ವಸಂತನ ಸ್ವಾಗತಕೆ
ವನವೇ ತೋರಣವಾಗಿದೆ.
ಚಿಗುರು ಹೂವು ಕಾಯಿಗಳ
ಸೊಬಗಿಗೆ ದೇವಲೋಕವೇ ಸೋತಿದೆ.

ತಂಗಾಳಿ ಸೊಂಕಿದಾಗ
ಬಿರುಬಿಸಲು ಮರೆತಿದೆ
ಮಲ್ಲಿಗೆಯ ಕಂಪಿನೊಂದಿಗೆ
ಮೋಡಗಳ ಬೀಜ ಕಟ್ಟಿದೆ

ಬೇವು, ಹೊಂಗೆಯ ತಂಪಿನೊಂದಿಗೆ
ಭೂವಿಯ ಸಂಭ್ರಮ ಮರುಕಳಿಸಿದೆ.
ಮನದ ಜಡವ ತೊರೆದು
ಕಾಲಕಾಲಕೆ ನೂತನತೆಯ ಸಾರಿದೆ.

ಕಷ್ಟ ಸುಖ – ನೋವು ನಲಿವುಗಳ
ಮೇರೆ ಮೀರಿ ಸಾಗುವ
ಪ್ರಕೃತಿಯ ನೆಲಗಟ್ಟು ಜೀವನದ ಮರುಹುಟ್ಟು
ಯುಗದ ಆದಿ ಜೀವನದ ಹೊಸ ಹಾದಿ

ಕೆ. ನಿರ್ಮಲ ಮರಡಿಹಳ್ಳಿ,
ಕನ್ನಡ ಶಿಕ್ಷಕಿ,
ಡಾನ್‍ಬೋಸ್ಕೋ ಶಾಲೆ,
ಚಿತ್ರದುರ್ಗ
ದೂರವಾಣಿ – 9901527137

Share This Article
Leave a Comment

Leave a Reply

Your email address will not be published. Required fields are marked *