ಬೆಂಗಳೂರು: ನಟ, ಹೋರಾಟಗಾರ ಚೇತನ್ ಕಾಣೆಯಾಗಿದ್ದಾರೆಂದು ಅವರ ಪತ್ನಿ ಹೇಳಿದ್ದಾರೆ. ಶೇಷಾದ್ರಿ ಪುರಂ ಪೊಲೀಸ್ ಠಾಣೆ ಬಳಿಯೂ ವಿಚಾರಿಸಲು ಹೋಗಿದ್ದಾರೆ. ಈ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಆತಂಕ ವ್ಯಕ್ತಪಡಿಸಿದ್ದಾರೆ.
ಲೈವ್ ನಲ್ಲಿ ಹೇಳಿರುವಂತೆ, ಮನೆಯಲ್ಲಿದ್ದವರು ಏಕಾಏಕಿ ಕಾಣೆಯಾಗಿದ್ದರು. ನಾನು ಮನೆಯಲ್ಲೆಲ್ಲಾ ಹುಡುಕಿದೆ. ಗಾಬರಿಯಾದ. ಅಲ್ಲೆ ಸುತ್ತಮುತ್ತಲಿದ್ದವರನ್ನ ಕೇಳಿದೆ ಚೇತನ್ ಎಲ್ಲಿ ಎಂದು. ಅವರು ಪೊಲೀಸರು ಕರೆದುಕೊಂಡು ಹೋದರೆಂದು ಹೇಳಿದ್ರು. ಹೀಗಾಗಿ ನಾನು ಶೇಷಾದ್ರಿಪುರಂ ಠಾಣೆ ಬಳಿ ಬಂದೆ ಎಂದಿದ್ದಾರೆ.
ಚೇತನ್ ಮತ್ತು ಅವರ ಬಾಡಿಗಾರ್ಡ್ ಇಬ್ಬರು ಫೋನ್ ಗೆ ಸಿಕ್ತಾ ಇಲ್ಲ. ಪೊಲೀಸರು ನೋಡಿದ್ರೆ ನಾವೂ ಅರೆಸ್ಟ್ ಮಾಡಿಲ್ಲ ಅಂತಿದ್ದಾರೆ. ಠಾಣೆಯಲ್ಲೂ ಸರಿಯಾದ ಉತ್ತರ ಸಿಗುತ್ತಿಲ್ಲ. ಪೊಲೀಸ್ ನವರು ಬಂಧಿಸಿದ್ದರೆ ಅದು ಮನೆಯವರಿಗೂ ತಿಳಿಸಬೇಕಿತ್ತು. ನೋಟೀಸ್ ನೀಡಬೇಕಿತ್ತು. ಆದ್ರೆ ಏನು ಹೇಳದೆ, ನೋಟೀಸನ್ನು ನೀಡದೆ ಏಕಾಏಕಿ ಕರೆದುಕೊಂಡು ಹೋಗಿದ್ದಾರೆ. ಇಲ್ಲಿ ಪೊಲೀಸ್ ಕಸ್ಟಡಿಯಲ್ಲಿ ನನ್ನ ಪತಿ ಇಲ್ಲ, ಹಾಗಾದ್ರೆ ಅವರನ್ನ ಕಿಡ್ನ್ಯಾಪ್ ಮಾಡಿದ್ದು ಯಾರು ಅಂತಾದ್ರೂ ಗೊತ್ತಾಗಬೇಕಿತ್ತಲ್ಲ ಎಂದು ಲೈವ್ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.