Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಣ ಉಳಿತಾಯಕ್ಕೆ RD ಅಥವಾ FD.. ಯಾವುದು ಬೆಟರ್..?

Facebook
Twitter
Telegram
WhatsApp

ಮನುಷ್ಯನ ಈಗಿನ ಜೀವನಶೈಲಿಯಿಂದ ಹಣದ ಅವಶ್ಯಕತೆ ಬಹಳ ಇದೆ. ಬೆಲೆ ಏರಿಕೆಯ ನಡುವೆ ಮುಂದಿನ ಜೀವನಕ್ಕಾಗಿ ಹಣ ಉಳಿಸಲೇಬೇಕಾಗಿದೆ‌. ಆದರೆ ಹಣ ಉಳಿಕೆಗೆ ಅಥವಾ ಇರುವ ಹಣಕ್ಕೆ ಬ್ಯಾಂಕ್ ನಲ್ಲಿ ಯಾವ ಮಾರ್ಗವನ್ನು ಬಳಸಬೇಕೆಂಬುದು ಬಹಳ ಮುಖ್ಯ. ಕೆಲವರು ಎಫ್ಡಿ ಇಡುತ್ತಾರೆ. ಇನ್ನು ಕೆಲವರು ಆರ್ಡಿ ಮಾಡಿಸುತ್ತಾರೆ. ಮಾಡಿಸಿದ ಮೇಲೆ ಗೊಂದಲಕ್ಕೆ ಈಡಾಗುತ್ತಾರೆ. ಹೀಗಾಗಿ ಯಾವ ರೀತಿಯ ಹಣಕ್ಕೆ ಯಾವ ರೀತಿಯ ಯೋಜನೆ ಉತ್ತಮ ಎಂಬುದನ್ನು ತಜ್ಞರಿಂದ ತಿಳಿಯುವುದು ಉತ್ತಮ.

ಫಿಕ್ಸೆಡ್ ಡೆಪಾಸಿಟ್:

ನಿಶ್ಚುತ ಠೇವಣಿ ಬಂದು ಒಮ್ಮೆ ಕಟ್ಟುವ ಹಣವಾಗಿರುತ್ತದೆ. ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಎಫ್ಡಿ ತೆರೆಯಬಹುದು. ಎಷ್ಟು ಮೊತ್ತಕ್ಕಾದರೂ ಎಫ್ಡಿ ಹಾಕಬಹುದು. ಮೂರು ತಿಂಗಳಿನಿಂದ ಹಿಡಿದು ಹತ್ತು ವರ್ಷದವರೆಗೂ ಠೇವಣಿ ಇರಿಸುವ ಅವಕಾಶ ಇರುತ್ತದೆ. ಬಡ್ಡಿದರ ಕೂಡ ನಿಶ್ಚಿತವಾಗಿರುತ್ತದೆ. ಎಫ್ಡಿ ತೆರೆಯುವಾಗಲೇ ಬಡ್ಡಿ ದರ ನಿಶ್ಚಿತವಾಗಿರುತ್ತದೆ. ಕಡೆಯವರೆಗೂ ಅದೇ ಬಡ್ಡಿ ಅನ್ವಯವಾಗುತ್ತದೆ. ಮೆಚ್ಯೂರಿಟಿಗಿಂತ ಮುಂಚೆ ಹಣ ಪಡೆಯಬೇಕಾದರೆ ಅದಕ್ಕೆ ನಿರ್ದಿಷ್ಟ ದಂಡ ಕಟ್ಟಬೇಕಾಗುತ್ತದೆ.

ಆರ್‌ಡಿ ಎಂದರೆ:
ಇದು ಆವರ್ತಿತ ನಿಧಿಯಾಗಿರುತ್ತದೆ. ನಿಯಮಿತವಾಗಿ ನೀವೂ ನಿಗದಿತ ಹಣವನ್ನು ಜಮೆ ಮಾಡುತ್ತಿರಬೇಕು. ಸಾಮಾನ್ಯವಾಗಿ ಪ್ರತಿ ತಿಂಗಳು ಪೂರ್ವನಿಗದಿತವಾದ ಹಣವನ್ನು ಆವರ್ತಿತ ನಿಧೊಗೆ ಡೆಪಾಸಿಟ್ ಮಾಡಬೇಕು. ಇಲ್ಲಿಯೂ ಬಡ್ಡಿದರ ಎಫ್ಡಿ ದರದಷ್ಟೇ ಇರುತ್ತದೆ. ಆರ್‌ಡಿಯನ್ನು ಮಧ್ಯದಲ್ಲು ನಿಲ್ಲಿಸಿದರೆ ಒಂದಷ್ಟು ದಂಡ ಕಟ್ಟಬೇಕಾದ ಪರಿಸ್ಥಿತಿ ಬರುತ್ತದೆ. ನಿಮ್ಮಲ್ಲಿ ಲಂಪ್ಸಮ್ ಅಮೌಂಟ್ ಇದ್ದರೆ ಅದನ್ನು ಫಿಕ್ಸೆಡ್ ಮಾಡುವುದು ಉತ್ತಮ. ನೀವೂ ಪ್ರತಿ ತಿಂಗಳು ನಿರ್ದಿಷ್ಟ ಹಣವನ್ನು ಉಳಿಸುತ್ತಿದ್ದರೆ ಆ ಮೊತ್ತಕ್ಕೆ ಬೇಕಾದರೆ ಆರ್ಡಿ ತೆರೆಯಬಹುದು. ನಿಮ್ಮಲ್ಲಿರುವ ಹಣದ ಪ್ರಮಾಣ, ಉಳಿಕೆಯ ಪ್ರಮಾಣವನ್ನು ನೋಡಿಕೊಂಡು ಪ್ಲ್ಯಾನ್ ಮಾಡಿದರೆ ಉತ್ತಮ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!