ಬಳ್ಳಾರಿ : ಬ್ಯಾನರ್ ಗಲಾಟೆಯ ಬಳಿಕ ಬಳ್ಳಾರಿಯಲ್ಲಿ ಒಂದಷ್ಟು ಬದಲಾವಣೆಗಳು ಆಗಿವೆ. ಅದರಲ್ಲೂ ಡಿಜಿಪಿ ಹಾಗೂ ಎಸ್ಪಿಯ ಬದಲಾವಣೆಯೂ ಆಗಿದೆ. ಬಳ್ಳಾರಿಯಲ್ಲಿ ಶಾಂತಿ ಕಾಪಾಡಬೇಕು ಎಂಬ ಉದ್ದೇಶದಿಂದ ಹಲವು ಬದಲಾವಣೆಗಳನ್ನ ತರಲಾಗಿದೆ. ಇನ್ನು ಇಂದೇ ಐಜಿಪಿ ಅಧಿಕಾರ ಸ್ವೀಕಾರ ಮಾಡಿರುವ ಡಾ.ಹರ್ಷ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಇವತ್ತು ಸರ್ಕಾರದ ಆದೇಶದಂತೆ ಬಳ್ಳಾರಿಯ ವಲಯದ ಐಜಿಪಿ ಆಗಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಈ ವಲಯದಲ್ಲಿ ನಾಲ್ಕು ಜಿಲ್ಲೆಗಳಿವೆ. ಹೆಡ್ ಕ್ಚಾರ್ಟರ್ ಆಗಿ ಬಳ್ಳಾರಿ ಇದೆ. ನಾನು ರಿಪೋರ್ಟ್ ಮಾಡಿಕೊಂಡ ಮೇಲೆ ಎಲ್ಲಾ ಅಧಿಕಾರಿಗಳ ಜೊತೆಗೆ ಸಣ್ಣದೊಂದು ಸಭೆ ನಡೆಸಿದ್ದೇನೆ. ನನಗೂ ಕೂಡ ಒಂದಷ್ಟು ಸಲಹೆಗಳು ಸಿಕ್ಕಿವೆ. ಕಾನೂನನ್ನು ಭದ್ರಪಡಿಸುವಂತಹ ಸರಿಯಾದ ಸಲಹೆಗಳನ್ನ ನಮ್ಮ ಹಿರಿಯ ಅಧಿಕಾರಿಗಳು ಸಹ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ನಮ್ಮ ಅಧಿಕಾರಿಗಳೊಂದಿಗೆ ಕೂಲಂಕುಶವಾಗಿ ಘಟನೆಗಳ ಬಗ್ಗೆ ಮಾಹಿತಿಯನ್ನ ಪಡೆಯುತ್ತೇನೆ. ಕೆಲವು ಪ್ರಕರಣಗಳ ಸಂಬಂಧ ತನಿಖೆಯನ್ನು ನಡೆಸುತ್ತೇನೆ ಎಂದಿದ್ದಾರೆ. ಸದ್ಯ ಬ್ಯಾನರ್ ಗಲಾಟೆಯಲ್ಲಿ ಆದಂತ ಸಾವಿನ ತನಿಖೆಯು ನಡೆಯುತ್ತಿದೆ. ರಾಜಶೇಖರ್ ದೇಹದಲ್ಲಿ ಹೊಕ್ಕ ಗುಂಡು, ಫೈಯರ್ ಆಗಿದ್ದೇಗೆ ಇದೆಲ್ಲದಕ್ಕೂ ಸಂಬಂಧ ಪಟ್ಟಂತೆ ಸಿಸಿಟಿವಿ ವಿಡಿಯೋ ಕೂಡ ವೈರಲ್ ಆಗಿದೆ. ಇದರ ತನಿಖೆಯೂ ಮುಂದುವರೆಯಲಿದೆ.


















