Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

SC/ST ಒಳಮೀಸಲಾತಿ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದೇನು.‌.?

Facebook
Twitter
Telegram
WhatsApp

 

 

ಬೆಂಗಳೂರು: ಚುನಾವಣೆಗೂ ಮೊದಲು ಚಿತ್ರದುರ್ಗದಲ್ಲಿ ಒಂದು ಎಸ್ಸಿ/ಎಸ್ಟಿ ಸಮಾವೇಶವನ್ನು ಮಾಡಿದ್ದೆವು. ಆ ಸಂದರ್ಭದಲ್ಲಿ ಒಂದು ನುರ್ಣಯ ಮಾಡಿದ್ದೆವು. ಈ ಸದಾಶಿವ ಆಯೋಗದ ವರದಿಯನ್ನು ನಾವೂ ಎರಡು ಸದನದಲ್ಲಿ ಮಂಡಿಸುತ್ತೀವಿ ಎಂದು ನಿರ್ಧಾರ ಮಾಡಿದ್ದೆವು. ಅಧಿವೇಶನ ಆಗಿದ್ದು, ಚುನಾವಣೆಗೂ ಮೊದಲು. ಹಿಂದೆ ಬೊಮ್ಮಾಯಿ ಅವರು ಅದನ್ನು ಒಂದು ಸಮಿತಿ ಮಾಡಿ ಈ ವರದಿಯನ್ನು ರಿಜೆಕ್ಟ್ ಮಾಡಿದರು. ಬಳಿಕ ಬೇರೆ ವಿಷಯವನ್ನು ತೆಗೆದುಕೊಂಡು ಅವರು ಮೀಸಲಾತಿಯನ್ನು ಹೆಚ್ಚು ಮಾಡಿ, ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಅವರು ಒಳಮೀಸಲಾತಿಯಲ್ಲಿ ಇಷ್ಟು ಪರ್ಸೆಂಟ್ ಕೊಡಬೇಕು ಅಂತ ಎಲ್ಲಾ ಮಾಡಿದ್ದರು. ಅದು ಕಾನೂನಾತ್ಮಕವಾಗಿ ಆಗಿಲ್ಲ ಅದು. ಈಗ ಪುನರ್ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.

ಈಗ ಸರ್ಕಾರದಲ್ಲಿ ಒಂದು ನಿರ್ಧಾರ ಮಾಡಬೇಕಾಗುತ್ತದೆ. ಈಗಾಗಲೇ ಚರ್ಚೆಯಾಗಿದೆ. ಸಂಪುಟದಲ್ಲಿಯೇ ಅದನ್ನು ತಂದು ಮಾಡಬೇಕು. ಈಗ ಸದನಕ್ಕೆ ಹೋಗುವುದಕ್ಕೆ ಆಗುವುದಿಲ್ಲ. ಅವರು ವರದಿಯನ್ನ ರಿಜೆಕ್ಟ್ ಮಾಡಿದ್ದಾರೆ. ಒಳಮೀಸಲಾತಿಗೆ ಕೈ ಹಾಕಿದ್ದ ಬಿಜೆಪಿ ಪೆಟ್ಟು ತಿಂದಿತ್ತು ಎಂಬ ಮಾತಿಗೆ ಉತ್ತರಿಸಿದ ಪರಮೇಶ್ವರ್, ನಾವಿಲ್ಲಿ ಪೆಟ್ಟು ತಿನ್ನುವ ಪ್ರಶ್ನೆಯೇ ಬರುವುದಿಲ್ಲ. ಈ ಸಮಸ್ಯೆ ಬಗೆಹರಿಸಬೇಕು ಎಂಬುದಷ್ಟೇ ನಮ್ಮ ಗುರಿ. ಆ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಸರ್ಕಾರ ಮಾಡಬೇಕು. ಅದು ಸರ್ಕಾರದ ಜವಬ್ದಾರಿ. ಟೀಕೆ ಟಿಪ್ಪಣಿಗಳು ಇರುತ್ತವೆ. ಅದಕ್ಕೆಲ್ಲಾ ಏನು ಮಾಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.

 

ನಿಗಮ ಮಂಡಳಿಗಳ ಬಗ್ಗೆ ಮಾತನಾಡಿ, ಅವರಿಗೂ ಒಂದು ಅಧಿಕಾರ ಸಿಗಬೇಕು, ಸಮಾಜ ಸೇವೆ ಮಾಡಬೇಕು ಅಂತ ಇರುತ್ತೆ. ಎಲ್ಲರು ಮಂತ್ರಿ ಆಗುವುದಕ್ಕೆ ಆಗಲ್ಲ. ಮೂರು ಸಲ ನಾಲ್ಕು ಸಲ ಗೆದ್ದಿದ್ದಾರೆ ಕೆಲವ್ರು. ಅದನ್ನು ಅರಿತುಕೊಂಡಿರುವುದಕ್ಕೆ ಮಂಡಳಿಗಳಿಗೆ ನೇಮಕ ಮಾಡುವುದು. ಸದ್ಯದಲ್ಲಿಯೇ ಅದರ ನಿರ್ಣಯವಾಗುತ್ತದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಲಗುವ ಮುನ್ನ ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

  ಸುದ್ದಿಒನ್ : ಬಾಳೆಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಅಡಗಿವೆ. ಇವು ದೇಹಕ್ಕೆ ತುಂಬಾ ಒಳ್ಳೆಯದು. ಅದಕ್ಕಾಗಿಯೇ ಸದಾ ಲಭ್ಯವಿರುವ ಬಾಳೆಹಣ್ಣನ್ನು ತಿನ್ನಲು ತಜ್ಞರು ಸಲಹೆ ನೀಡುತ್ತಾರೆ. ಬಾಳೆ ಹಣ್ಣಿನಲ್ಲಿ ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್

ಈ ರಾಶಿಯವರು ಏಕಾಂಗಿ ಬದುಕಲು ಇಷ್ಟಪಡುವರು!

ಈ ರಾಶಿಯವರು ಏಕಾಂಗಿ ಬದುಕಲು ಇಷ್ಟಪಡುವರು! ಈ ರಾಶಿಯವರು ದೊಡ್ಡ ಮಹಾತ್ಮಾಕಾಂಕ್ಷೆ ಹೊಂದಿರುವರು, ಸೋಮವಾರ- ರಾಶಿ ಭವಿಷ್ಯ ಮೇ-20,2024 ಸೂರ್ಯೋದಯ: 05:46, ಸೂರ್ಯಾಸಸ್ತ : 06:38 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

error: Content is protected !!