Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶುಗರ್ ಬರಬಾರದು ಅಂದ್ರು ಈ ಒಂದು ಕಾಳನ್ನ ರಾತ್ರಿ ನೆನೆಹಾಕಿ, ಬೆಳಗ್ಗೆ ನೀರು ಕುಡಿರಿ ಸಾಕು..!

---Advertisement---

ಇತ್ತೀಚಿನ ಲೈಫ್ ಸ್ಟೈಲ್ ಹೇಗಾಗಿದೆ ಅಂದ್ರೆ ಒಂದು ಸಣ್ಣ ಸಮಸ್ಯೆಯಾದರೂ ಮೊದಲು ಆಸ್ಪತ್ರೆಗೆ ಓಡಿ ಹೋಗ್ತಾರೆ, ಮಾತ್ರೆಯನ್ನ ತಗೋಳ್ತಾರೆ. ಆದರೆ ಈ ಮೊದಲೆಲ್ಲಾ ಆ ರೀತಿ ಇರಲಿಲ್ಲ. ಎಂಥದ್ದೇ ಸಮಸ್ಯೆಯಾಗಲಿ ಅಡುಗೆ ಮನೆಯಲ್ಲಿರುವ ಮದ್ದುಗಳನ್ನೇ ಬಳಸುತ್ತಿದ್ದರು. ಹಿತ್ತಲ ಗಿಡವನ್ನೇ ಅರೆಯುತ್ತಿದ್ದರು. ಅದಕ್ಕೆ ರೋಗ ನಿರೋಧಕ ಶಕ್ತಿಗಳು ಹೆಚ್ಚಿ, ಅದರಿಂದ ಕಾಯಿಲೆ ಮತ್ತೆ ಹತ್ತಿರ ಸುಳಿಯುತ್ತಿರಲಿಲ್ಲ. ಒಂದು ವೇಳೆ ಮತ್ತೆ ಬಂದರೂ ಅದು ಬೇಗ ಬರ್ತಾ ಇರಲಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯದಿಂದ ಇರಲು ಸಹಕಾರಿಯಾಗುತ್ತಿತ್ತು. ಆದರೆ ಈಗ ಹಾಗಲ್ಲ. ಇವತ್ತು ಒಂದು ಮನೆ ಮದ್ದನ್ನ ಹೇಳ್ತೀವಿ, ಅದನ್ನ ಫಾಲೋ ಮಾಡಿದ್ರೆ ಖಂಡಿತ ಮಧಿಮೇಹ ಅನ್ನೋದು ನಿಮ್ಮ ಹತ್ತಿರಕ್ಕೂ ಸುಳಿಯಲ್ಲ.

ಮೆಂತ್ಯ ಕಾಳು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಇದನ್ನ ದೋಸೆಗೋ, ಇಡ್ಲಿಗೋ ಅಥವಾ ಅಡುಗೆ ಸಾಂಬಾರ್ ಪುಡಿ ಮಾಡುವಾಗಲೋ ಬಳಸುತ್ತಿವಿ. ಆದರೆ ಇದನ್ನ ಡೈಲಿ ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳಿದಾವೆ ಗೊತ್ತಾ..? ಇದರಲ್ಲಿ ಪ್ರೋಟೀನ್ 25%, ಫ್ಯಾಟ್ 6%, ಫೈಬರ್ 25% ಇರುತ್ತದೆ. ಇದರಿಂದ ದೇಹಕ್ಕೆ ಸಾಕಷ್ಟು ಉಪಯೋಗವಿದೆ.

ರಾತ್ರಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಗೆ ಇದರ ನೀರು ಕುಡೊಯುವುದರಿಂದ ಡಯಾಬಿಟೀಸ್ ಕಂಟ್ರೋಲ್ ಗೆ ಬರುತ್ತೆ, ಹೈಪರ್ ಟೆನ್ಶನ್, ಕೊಲೆಸ್ಟ್ರಾಲ್ ಕೂಡ ಕಂಟ್ರೋಲ್ ಗೆ ಬರಲಿದೆ. ನೀರು ಕುಡಿದು, ಮೆಂತ್ಯವನ್ನ ಜಗಿದು ತಿನ್ನುವುದಕ್ಕಾದರೆ ತಿಂದು ಬಿಡಿ. ಅದರಿಂದ ಆರೋಗ್ಯಕ್ಕೆ ಲಾಭ ಹೆಚ್ಚು. ಮನೆಯಲ್ಲಿರುವ ಮೆಂತ್ಯವನ್ನ ಪ್ರತಿದಿನ ನೆನೆ ಹಾಕಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಡಯಾಬಿಟೀಸ್ ಹತ್ತಿರವೂ ಸುಳಿಯಲ್ಲ. ಈಗಾಗಲೇ ಡಯಾಬಿಟೀಸ್ ಇರುವವರು ಈ ನೀರನ್ನ ಕುಡೊಯುತ್ತಾ ಬನ್ನಿ. ಹಾಗಂತ ಮಾತ್ರೆ ನಿಲ್ಲಿಸಬೇಡಿ. ಡಯಾಬಿಟೀಸ್ ಕಂಟ್ರೋಲ್ ಗಡ ಬರುವುದು ನಿಮ್ಮ ಗಮನಕ್ಕೆ ಬರುತ್ತದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment