ಹಾಸನದಲ್ಲಿ ಯಶ್ ಅವರ ತಾಯಿ ಮನೆಗೆ ಕನೆಕ್ಟ್ ಆಗಿದ್ದ ದಾರಿ ಕ್ಲೋಸ್ : ಈಗ ಹೇಗಿದೆ..?

suddionenews
1 Min Read

ಹಾಸನ: ವಿದ್ಯಾನಗರದಲ್ಲಿ ಇರುವ ಯಶ್ ಅವರ ತಾಯಿಯ ನಿವೇಶನದ ಪಕ್ಕದಲ್ಲಿಯೇ ಹಾಕಲಾಗಿದ್ದ ಕಾಂಪೌಂಡ್ ಅನ್ನು ತೆರವು ಮಾಡಲಾಗಿದೆ. ಹಾಕಿದ್ದ ಶೆಡ್ಡ ಹಾಗೂ ಕಾಂಪೌಂಡ್ ಅನ್ನು ತೆರವು ಮಾಡಲಾಗಿದೆ. ಕಟ್ಟಾಯ ಹೋಬಳಿ ದೋರ್ನಳ್ಳಿ ಗ್ರಾಮದ ದೇವರಾಜು ಎಂಬುವವರು, ಈ ಜಾಗದ ಮೂಲ ಮಾಲೀಕರಾಗಿರುವ ಲಕ್ಷ್ಮಮ್ಮ ಎಂಬುವವರು ತನ್ನ ಹೆಸರಿಗೆ ಜಿಪಿಎ ಮಾಡಿಕೊಟ್ಟಿದ್ದಾರೆ. ಈ ನಿವೇಶನಕ್ಕೆ ಸಂಬಂಧಿಸಿದ ಕೇಸ್ ತನ್ನಂತೆ ಆಗಿದೆ ಎಂದು ನಿನ್ನೆ ಅಕ್ರಮವಾಗಿ ನಿರ್ಮಾಣವಾಗಿದ್ದ ಕಾಂಪೌಂಡ್ ಅನ್ನು ತೆರವು ಮಾಡಿಸಿದ್ದರು.

ಸದ್ಯಕ್ಕೆ ಯಶ್ ಅವರ ತಾಯಿ ಮನೆಗೆ ಹೋಗಬೇಕಿದ್ದ ರಸ್ತೆಯನ್ನ ಕ್ಲೋಸ್ ಮಾಡಿಸಲಾಗಿದೆ. ಅಂದ್ರೆ ಪಕ್ಕದಲ್ಲೂ ಒಂದು ದಾರಿಯನ್ನ ನಿರ್ಮಾಣ ಮಾಡಿಕೊಂಡಿದ್ದರು. ಈಗ ಮನೆಯ ಮುಂದಿನ ದಾರಿ ಮಾತ್ರ ಇದೆ. ಪಕ್ಕದ ದಾರಿಯನ್ನ ಬಂದ್ ಮಾಡಿಸಿ, ತಂತಿ ಬೇಲಿ ಹಾಕಿಕೊಳ್ಳಲಾಗಿದೆ. 1500 ಚದುರ ಅಡಿಯ ಜಾಗವನ್ನ ಒತ್ತುವರಿ ಮಾಡಲಾಗಿತ್ತು. ಹಾಸನ 4ನೇ ಹೆಚ್ಚುವರಿ ಜಿಎಂಎಫ್ ನ್ಯಾಯಾಲಯದಿಂದ ಆದೇಶ ಬಂದಿತ್ತು.

ಕೇಸ್ ದೇವರಾಜ್ ಅವರ ಪರವಾಗಿದ್ದು, ತನ್ನ ಸಂಗಡಿಗರೊಂದಿಗೆ ಬಂದು ತೆರವು ಮಾಡಿದ್ದಾರೆ. ಅತ್ತ ಪುಷ್ಪಾ ಅವರ ಚಿಕ್ಕಮ್ಮನ ಮಗ ಕೂಡ ದೂರು ನೀಡಿದ್ದಾರೆ. ದೇವರಾಜ್ ಗೂ ಈ ಆಸ್ತಿಗೂ ಸಂಬಂಧವಿಲ್ಲ. ನಮಗೆ ಜೀವ ಬೆದರಿಕೆ ಇದೆ. ರಕ್ಷಣೆ ನೀಡಬೇಕೆಂದು ಕೋರಿ ಬಡಾವಣೆ ಠಾಣೆಗೆ ದೂರು ನೀಡಲಾಗಿದೆ. ಎರಡು ಕಡೆಯಿಂದ ದೂರು ಬಂದ ಹಿನ್ನೆಲೆ ಪೊಲೀಸರು ಇಬ್ಬರಿಗೂ ನೋಟೀಸ್ ನೀಡಿದ್ದು, ಗಲಾಟೆ ಮಾಡಿಕೊಳ್ಳದಂತೆ ಎಚ್ಚರಿಕೆವಹಿಸಿದ್ದಾರೆ. ಕೋರ್ಟ್ ಆದೇಶದಂತೆ ನಡೆದುಕೊಳ್ಳಲು ಸೂಚನೆ ನೀಡಿದ್ದಾರೆ‌.

Share This Article
Enable Notifications OK No thanks