Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಳೆದು ಹೋದ ಮಗನನ್ನು ಹುಡುಕಿ ಕೊಟ್ಟ ಶ್ವಾನ : ಉಡುಪಿಯಲ್ಲಿ ಮನಮಿಡಿಯುವ ಕಥೆ

Facebook
Twitter
Telegram
WhatsApp

ಉಡುಪಿ: ಇತ್ತಿಚಿನ ದಿನಗಳಲ್ಲಿ ಶ್ವಾನ ಪ್ರೇಮಿಗಳು ಹೆಚ್ಚಾಗಿದ್ದಾರೆ. ಮನೆಯಲ್ಲಿ ಶ್ವಾನವೊಂದಿದ್ದರೆ ಅದನ್ನೇ ಮಕ್ಕಳಂತೆ ಸಾಕುತ್ತಾರೆ. ಶ್ವಾನದ ಜೊತೆಗೇನೆ ಬಾಂಧವ್ಯ ಹೆಚ್ಚಾಗಿರುತ್ತದೆ. ನಾಯಿಗಳಿಗೆ ಮೊದಲೇ ನಿಯತ್ತು ಜಾಸ್ತಿ ಇರುತ್ತೆ ಅನ್ನೋ ಮಾತು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಶ್ವಾನವೊಂದು ಕಳೆದು ಹೋದ ಮಗನನ್ನೇ ಹುಡುಕಿಕೊಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಅಮವಾಸೆ ಬೈಲು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ‌ ವಿವೇಕಾನಂದ ಎಂಬುವವರು ಇದ್ದಕ್ಕಿದ್ದ ಹಾಗೇ ಕಾಣೆಯಾಗಿದ್ದರು. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವಿವೇಕಾನಂದ, ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದ. ಎಷ್ಟು ಹುಡುಕಿದರು ಸಿಕ್ಕಿಲ್ಲ. ವಾರಗಟ್ಟಲೇ ಕಾಡಿನಲ್ಲಿಯೇ ಅಲೆದಾಡಿದ್ದಾನೆ. ಆಹಾರವಿಲ್ಲದೆ ನೀರು ಕುಡಿದು ಬದುಕಿದ್ದಾನೆ‌.

ಆಹಾರ ಇಲಾಖೆಯ ಸಿಬ್ಬಂದಿಗಳಿಗೂ ಈತ ಸಿಕ್ಕಿರಲಿಲ್ಲ. ಕಾಡು ಪ್ರಾಣಿಗೆ ಆಹಾರವಾಗಿರಬಹುದು ಎಂದೇ ಎಲ್ಲಾ ಸುಮ್ಮನೆ ಆಗಿದ್ದರು. ಆದರೆ ಸಾಕು ಪ್ರಾಣಿ‌ ಸುಮ್ಮನೆ ಇರಬೇಕಲ್ಲಾ..? ಕಾಡಿಗೆ ಹೋಗಿ ವಿವೇಕಾನಂದನನ್ನು ಹುಡುಕಿ ತಂದಿದೆ. ಸುಮಾರು ಎಂಟು ದಿನಗಳ ಬಳಿಕ ಮನೆಯವರಿಗೆ ಸಿಕ್ಕಿದ್ದಾನೆ. ನಿತ್ರಾಣಗೊಂಡು ಬಿದ್ದಿದ್ದ ವಿವೇಕಾನಂದನನ್ನು ಹುಡುಕಿಕೊಟ್ಟಿದ್ದು, ಸಾಕಿದ ನಾಯಿಯೆ.

ಎಷ್ಟೋ ವಿಡಿಯೋಗಳಲ್ಲಿ‌ ನಾಯಿಯ ಮಾನವೀಯತೆಯ‌ನ್ನು ಕಂಡಿದ್ದೇವೆ. ಆ ಮೂಕ ಪ್ರಾಣಿ ಕೇಳುವುದು ಕೇವಲ ಒಂದು ತುತ್ತು ಅನ್ನ, ಒಂದಿಷ್ಟು ಪ್ರೀತಿ. ಸ್ವಲ್ಪೇ ಸ್ವಲ್ಪ ಪ್ರೀತಿ ಕೊಟ್ಟರು ಶ್ವಾನ ಪ್ರಾಣ ಉಳಿಸುವಷ್ಟು ದೊಡ್ಡ ಮಟ್ಟದ ಸಹಾಯವನ್ನೇ ಮಾಡುತ್ತದೆ. ಯಾವಾಗಲೂ ತನ್ನ ಮಾಲೀಕನ ಜೊತೆಗೆ ನಿಲ್ಲುತ್ತದೆ. ಅದಕ್ಕೆ ನಾಯಿಗಿರುವ ನಿಯತ್ತು ಬೇರೆ ಯಾರಿಗೂ ಇರಲ್ಲ ಎಂಬ ಮಾತನ್ನು ಹೇಳುತ್ತಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!