ನಟ, ನಿರ್ದೇಶಕ ಎಸ್ ನಾರಾಯಣ್ ಅವರ ಕುಟುಂಬದ ಸಮಸ್ಯೆ ಈಗ ಗುಟ್ಟಾಗಿ ಉಳಿದಿಲ್ಲ. ಬದಲಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಲಕ್ಷಾಂತರ ರೂಪಾಯಿ ಆ ಮನೆಗೋಸ್ಕರ ಖರ್ಚು ಮಾಡಿದ್ದೇನೆ, ಪವನ್ ಕೆಲಸ ಮಾಡದೆ ಹೋದರು ನಾನು ಕೆಲಸ ಮಾಡಿ ಮನೆ ನೋಡಿಕೊಂಡಿದ್ದೇನೆ. ಇದರ ಜೊತೆಗೆ ವರದಕ್ಷಿಣೆ ಕೇಳುತ್ತಿದ್ದಾರೆ ಎಂದು ವರದಕ್ಷಿಣೆ ಕಿರುಕುಳದ ಕೇಸನ್ನ ಅವರ ಸೊಸೆ ಹಾಕಿದ್ದಾರೆ. ಇದೀಗ ಎಸ್ ನಾರಾಯಣ್ ಹೇಳುತ್ತಿರುವುದೇ ಬೇರೆ.
ಹೆಣ್ಣು ಮಗುವಿನ ಸಮಸ್ಯೆ ಹೊರಗೆ ಬರಬಾರದು. ಯಾವುದೇ ಹೆಣ್ಣು ಮಗುವನ್ನು ನೋಹಿಸಲು ನಾನು ಇಷ್ಟ ಪಡುವುದಿಲ್ಲ. ಅವರು ಹೇಳಿದಂತೆ ವರದಕ್ಷುಣೆ ಹೆಚ್ವಿಗೆ ಕೊಟ್ಟಿದ್ದರೆ ನಾನು ವಿಧಾನಸೌಧ ಖರೀದಿ ಮಾಡುತ್ತೇನೆ ಎಂದರೆ ಯಾರು ನಂಬಲ್ಲ. ಹಾಗೇ ಸೊಸೆ ಹೇಳಿದ್ದನ್ನ ಎಲ್ಲರೂ ನಂಬೋದು ಹೇಗೆ..? ಈ ಸಮಸ್ಯೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಕೋರ್ಟ್ ನಲ್ಲಿವೆ. ಹೆಚ್ಚು ಹೇಳುವುದಕ್ಕೆ ಆಗುವುದಿಲ್ಲ.

ಹದಿನಾಲ್ಕು ತಿಂಗಳಿನಿಂದ ನಮ್ಮ ಜೊತೆಗೆ ಸೊಸೆ ಇಲ್ಲ. ಆದರೆ ಮಗು ಅವರ ಬಳಿ ಇದೆ. ಹೀಗಾಗಿಯೇ ನಾವೂ ತುಂಬಾ ಕೆಳಮಟ್ಟಕ್ಕೆ ಹೋಗಿದ್ದೇವೆ. ಯಾಕಂದ್ರೆ ಮಗುವನ್ನು ನೋಡಬೇಕು ಎನ್ನುವ ಆಸೆ. ನಮ್ಮ ಜಗಳ ಮಗು ಏನು ತಪ್ಪು ಮಾಡಿದೆ. ತಾಯಿಯಾದವರು ನೂರು ಸಮಸ್ಯೆ ಬಂದರು ಮಗುವಿಗಾಗಿ ತ್ಯಾಗ ಮಾಡಬೇಕು. ಆದರೆ ಅವರು ಹಾಗೇ ಮಾಡಲಿಲ್ಲ. ಮಗುವಿಗಾಗಿ ತಂದೆ ಅವರ ಮನೆ ಬಳಿ ಹೋಗಿದ್ದಾಗ ಹೊರಗೆ ನಿಲ್ಲಿಸಿದಾಗ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ನಿಂದಿಸಿ, ಅವಮಾನ ಮಾಡಿ ವಾಪಸ್ ಕಳಿಸಿದ್ದಾರೆ ಎಂದು ಹೇಳಿದ್ದಾರೆ.


















