ವೀರೇಂದ್ರಗೆ ತಪ್ಪಿದ ಜೆಡಿಎಸ್ ಟಿಕೆಟ್.. ಶರವಣಗೆ ಎರಡನೇ ಬಾರಿಯೂ ಅದೃಷ್ಟ..!

suddionenews
1 Min Read

ಬೆಂಗಳೂರು: ವಿಧಾನ ಪರಿಷತ್ ನ ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಸಿಕ್ಕ ಒಂದೇ ಒಂದು ಸ್ಥಾನಕ್ಕೆ ಜೆಡಿಎಸ್ ಯೋಚಿಸಿ ಆಯ್ಕೆ ಮಾಡಬೇಕಾದ ಸ್ಥಿತಿ ಇತ್ತು. ಹೀಗಾಗಿ ಯೋಚಿಸಿ, ಶಾಸಕಾಂಗ ಸಭೆಯಲ್ಲಿ ಅಭ್ಯರ್ಥಿಯನ್ನು ಅಂತಿಮ ಮಾಡಿದೆ.

ನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಮತ್ತು ಶರವಣ ನಡುವೆ ಪರಿಷತ್ ಟಿಕೆಟ್ ಪೈಪೋಟಿ ಜೋರಾಗಿಯೇ ನಡೆದಿತ್ತು. ಆದರೆ ಅಂತಿಮವಾಗಿ ಈ ಟಿಕೆಟ್ ಶರವಣಗೆ ಸಿಕ್ಕಿದೆ. ಇದರಿಂದ ಶರವಣ ತುಂಬಾ ಖುಷಿ ಪಟ್ಟಿದ್ದು, ಸಿ ಎಂ ಇಬ್ರಾಹಿಂ ಮತ್ತು ಕುಮಾರಸ್ವಾಮಿ ಅವರ ಜೊತೆ ಹೋಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಶಾಸಕಾಂಗ ಸಭೆಯಲ್ಲಿ ಟಿಕೆಟ್ ಘೋಷಿಸುತ್ತಿದ್ದಂತೆಯೇ ಶರವಣ ತುಂಬಾ ಖುಷಿ ಪಟ್ಟರು, ಕುಮಾರಸ್ವಾಮಿಗೆ ಪಾದಕ್ಕೆರಗಿ ನಮಸ್ಕರಿಸಿದರು. ಸಣ್ಣ ಸಮಾಜದಿಂದ ಬಂದವನು ನಾನು ಹಾಗಿದ್ದರೂ ಬೆಳೆಯಲು ಅವಕಾಶ ಕೊಟ್ಟರು. ನನ್ನ ಜವಬ್ದಾರಿ ಇನ್ನಷ್ಟು ಜಾಸ್ತಿಯಾಗಿದೆ. ಕುಮಾರಸ್ವಾಮಿ ಅವರು ಮೂರನೇ ಬಾರಿಗೆ ಪಟ್ಟಾಭಿಷೇಕವಾಗಬೇಕು. ಹೀಗಾಗಿ ರಾಜ್ಯ ಪ್ರವಾಸ ಮಾಡಿ, ಪಕ್ಷ ಸಂಘಟನೆ ಮಾಡುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *