Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು : ಪ್ರೋ.ನಂಜರಾಜೇ ಅರಸ್ ಹೇಳಿದ್ದೇನು..?

---Advertisement---

ಮೈಸೂರು: ಇಲ್ಲಿನ ರಾಜಕುಮಾರಿ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿಡಬೇಕು ಎಂಬ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಇತಿಹಾಸ ತಜ್ಞರಾದ ನಂಜರಾಜೇ ಅರಸರು ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವರೇ ನನ್ನ ಹೆಸರನ್ನು ಇಡಬೇಡಿ ಎಂದು ಹೇಳುವ ಕಾಲ ಬರುತ್ತದೆ ಎಂದಿದ್ದಾರೆ.

ಮಾಧ್ಯಮದವರ ಜೊತೆಗೆ ಮಾತನಾಡಿ, ಹೊರಗಡೆಯಿಂದ ಮೈಸೂರಿಗೆ ಬರುವ ಅಧಿಕಾರಿಗಳಿಗೆ, ಕೆಲವು ವೃತ್ತಿ ನಿರತ ರಾಜಕಾರಣಿಗಳಿಗೆ, ಸ್ವಾರ್ಥಿಗಳಿಗೆ ಮೈಸೂರಿನ ಇತಿಹಾಸ, ಸಂಸ್ಕೃತಿ, ಪರಂಪರೆ ಗೊತ್ತಿರಲ್ಲ. ಅವರೇನೋ ತೀರ್ಮಾನ ಮಾಡ್ತಾರೆ. ನಾವೂ ಮೈಸೂರಿನ ನಾಗರಿಕರಾಗಿ, ಮೈಸೂರಿನ ಗೌರವ ಉಳಿಯಬೇಕು ಎನ್ನುವ ದೃಷ್ಟಿಯಿಂದ, ಪ್ರಿನ್ಸೆಸ್ ರಸ್ತೆ ಬಗ್ಗೆ ಅವರು ಏನು ಹೇಳ್ತಾರೆ, ದಾಖಲೆಗಳನ್ನ ಕೊಟ್ಟಿದ್ದೀವಿ. ಈ ಹಗರಣ ಹೇಗಾಗಿದೆ ಎಂದರೆ ಇವರು ಅವರನ್ನ ಬೈಯ್ಯೋದು, ಅವರು ಇವರನ್ನ ಬೈಯ್ಯೋದು.

ನಾನು ನಿನ್ನೆ ಮಹದೇವಪ್ಪ ಅವರ ಬಳಿ ಈ ಬಗ್ಗೆ ಮಾತಾಡಿದ್ದೀನಿ. ಅವರು 5ನೇ ತಾರೀಖು ಮೈಸೂರಿಗೆ ಬರ್ತಾರೆ. ಅವತ್ತು ಅವರ ಬಳಿ ಮಾತನಾಡಿ, ಮುಖ್ಯಮಂತ್ರಿ ಅವರನ್ನ ಭೇಟಿ ಮಾಡ್ತೀವಿ. ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆಯೆ ಈ ರೀತಿ ಅಪಪ್ರಚಾರ ಆಗ್ತಾ ಇದೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಸಂಪೂರ್ಣ ವಿಷಯ ತಿಳಿಸಿ, ನಿಮ್ಮ ಮರ್ಯಾದೆ ನೀವು ಕಳೆದುಕೊಳ್ಳಬೇಡಿ, ಮೈಸೂರಿನ ಗೌರವನು ಉಳಿಯಲಿ. ನಿಮಗೆ ಅವಮಾನ ಆಗುವುದು ತಪ್ಪಬೇಕು. ಈ ಹಗರಣಗಳು, ವಾದ ವಿವಾದಗಳು ಬೇಡ ಅಂತ ಅವರ ಬಳಿಯೂ ಮಾತಾಡ್ತೀವಿ. ನಮಗೀರೋ ವಿಶ್ವಾಸದಲ್ಲಿ ಬಹುಶಃ ಅವರೇ ಇದನ್ನ ಬೇಡ ಅಂತ ಹೇಳುವ ಪರಿಸ್ಥಿತಿ ಬರುತ್ತದೆ. ಜೆಪಿ ನಗರದಲ್ಲಿ ಅವರ ಹೆಸರಲ್ಲಿ ಒಂದು ಉದ್ಯಾನವನ ಇದೆ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment