Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಲಾಲ್ ಕಟ್ ಬ್ಯಾನ್ ವಿಚಾರ : ಹಿಂದೂ ಸಂಘಟನೆ ಮಾಡಿದ್ದು ಸರಿ ಎಂದ ಸಚಿವೆ ಜೊಲ್ಲೆ

Facebook
Twitter
Telegram
WhatsApp

ಚಿಕ್ಕೋಡಿ: ಇಂದು ಯುಗಾದಿ ಹಬ್ಬ. ನಾಳೆ ಎಲ್ಲೆಡೆ ಹೊಸ ತಡುಕು. ಮಾಂಸ ಖರೀದಿ ಮಾಡಲು ಮುಸ್ಲಿಂ ಅಂಗಡಿಗೆ ಹೋಗಬೇಡಿ, ಹಲಾಲ್ ಕಟ್ ನಿಷೇಧಿಸಿ ಎಂದು ಈಗಾಗಲೇ ಹೇಳಲಾಗುತ್ತಿದೆ. ಈ ಸಂಬಂಧ ಸಚುವೆ ಶಶಿಕಲಾ ಜೊಲ್ಲೆ ಮಾತನಾಡಿದ್ದು, ವಿಶ್ವ ಹಿಂದೂಪರಿಷತ್ ಸೇರಿದಂತೆ ಹಲವು ಸಂಘಟನೆಗಳು ಹಲಾಲ್ ಕಟ್ ನಿಷೇಧ ಮಾಡುತ್ತಿದ್ದಾರೆ. ಸರ್ಕಾರ ಆ ಬಗ್ಗೆ ಚಿಂತನೆ ಮಾಡುತ್ತೆ. ಅದರ ಜೊತೆಗೆ ನಮ್ಮ ಹಿರಿಯ ಸಚಿವರು ಜೊತೆಗೆ ನಮ್ಮ ಸಿಎಂ ಕೂಡ ಆ ಬಗ್ಗೆ ಚಿಂತನೆ ಮಾಡುತ್ತಾರೆ ಅನ್ನೋದು ಅಭಿಪ್ರಾಯವಾಗಿದೆ.

ಈಗ ಹಲಾಲ್ ಕಟ್ ಅನ್ನೋದನ್ನ ಅವರು ತಮ್ಮ ದೇವರಿಗೆ ಅರ್ಪಣೆ ಮಾಡಿರುತ್ತಾರೆ ಅನ್ನೋದು ನಮಗೆ ಗೊತ್ತಾಗುತ್ತೆ. ಆ ವಿಚಾರ ಎಲ್ಲಾ ಕಡೆಗೂ ಹರಿದಾಡುತ್ತಿದೆ. ಹೀಗಾಗಿ ನಾವೂ ಕೂಡ ಅದನ್ನ ನಿಷೇಧ ಮಾಡಿದ್ದೇವೆ. ಅದರ ಬದಲಿಗೆ ಜಟ್ಕಾ ಕಟ್ ಮಾಡಿರುವುದನ್ನ ತೆಗೆದುಕೊಳ್ಳುವಂತದ್ದು ಆಗಬೇಕು ಎಂಬ ಅಭಿಪ್ರಾಯ ಇದೆ. ಆದರೆ ಆ ಬಗ್ಗೆಯೂ ನಾವೂ ಚಿಂತನೆ ಮಾಡಬೇಕಿದೆ. ಅವರು ಯಾವ ರೀತಿ ಆ ಕಟ್ ಮಾಡುತ್ತಿದ್ದರು. ಅದನ್ನ ಅವರ ದೇವರಿಗೆ ಅರ್ಪಿಸುತ್ತಿದ್ದರ..? ನಾವೂ ಅದನ್ನ ದೂಷಿತ ರಕ್ತ ಹೋಗಬೇಕು ಎಂಬ ಕಾರಣಕ್ಕೆ ಆ ರೀತಿ ಕಟ್ ಮಾಡುತ್ತೇವೆ ಅಂತ ಹೇಳುತ್ತಾ ಇದ್ದರು. ಆ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತೆ ಎಂದಿದ್ದಾರೆ.

ನಾನು ಆ ಬಗ್ಗೆ ಏನನ್ನು ಹೇಳಲು ಬಯಸಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಅಷ್ಟಾಗಿ ಇಲ್ಲ. ಹಿಂದೂ ಪರ ಸಂಘಟನೆಗಳು‌ ಮಾಡುತ್ತಿರುವುದು ಸರಿ ಅನ್ನಿಸುತ್ತೆ. ಜಟ್ಕಾ ಕಟ್ ಬಗ್ಗೆ ಜಾಗೃತಿ‌ ಮೂಡಿಸಬೇಕಾಗಿದೆ. ನಾವೂ ಹಿಂದೂ ಪರ ಸಂಘಟನೆ ಪರ ಇದ್ದೇವೆ. ಆದರೆ ಜವಬ್ದಾರಿಯುತ ಸಚುವೆಯಾಗಿ ಆ ಬಗ್ಗೆ ತಿಳಿದುಕೊಳ್ಳದೆ ಮಾತನಾಡುವುದಿಲ್ಲ. ಹಲಾಲ್ ಮತ್ತು ಜಟ್ಕಾ ಕಟ್ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಕೇಸ್: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಇದ್ದಾಗ ಮಾಡಿಕೊಂಡ ವಿಡಿಯೋ.. ಪ್ರಜ್ವಲ್ ಗೆ ಶಿಕ್ಷೆಯಾಗಲೇಬೇಕು : ಮೋದಿ ಒತ್ತಾಯ..!

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳಿಗೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಂಬಂಧಪಟ್ಟವರಿಗೆ ನೋಟೀಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಸಂತ್ರಸ್ತೆಯರನ್ನು ಕರೆಸಿ, ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ಇದರ ನಡುವೆ ಪ್ರಧಾನಿ

ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ : ಬೇಗ ಬೇಗ ವೋಟ್ ಮಾಡಿ ಬಿಡಿ

ಬೆಂಗಳೂರು: ನಿನ್ನೆಯಿಂದ ಎಲ್ಲೆಡೆ ಜೋರು ಮಳೆಯಾಗುತ್ತಿದೆ. ಇಂದು ಕೂಡ ಹವಮಾನ ಇಲಾಖೆ ಮಳೆಯ ಮುನ್ಸೂಚನೆಯನ್ನು ನೀಡಿದೆ. ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಚಾಮರಾಜನಗರ ಮತ್ತು ರಾಮನಗರದ

ಶಿಕ್ಷಕ ಎಸ್. ಶಿವಕುಮಾರ್ ನಿಧನ

    ಸುದ್ದಿಒನ್, ಚಳ್ಳಕೆರೆ, ಮೇ. 07 : ತಾಲ್ಲೂಕಿನ ತಿಮ್ಮಣ್ಣನಹಳ್ಳಿಯ  ಸಿ.ಪಿ. ಮೂಡಲಗಿರಿಯಪ್ಪ ಗ್ರಾಮಾಂತರ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ಶಿವಕುಮಾರ್ (55 ವರ್ಷ) ಅವರು ಲೋ ಬಿಪಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ

error: Content is protected !!