Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶರಣ ಸಂಸ್ಕೃತ ಉತ್ಸವ 2023 : ಅಂಗಭಾವದಿಂದ ಲಿಂಗಭಾವಕ್ಕೆ ಪರಿವರ್ತನೆಯಾಗುವುದೇ ಬಸವತತ್ತ್ವ: ಅರವಿಂದ ಜತ್ತಿ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.21 : ಶರಣರಿಗೆ ಆದ ನೋವುಗಳನ್ನು ತಡೆದುಕೊಳ್ಳಲಾರದೇ ಅಂದಿನ ಅನುಭವ ಮಂಟಪ ಖಾಲಿಯಾಗಿತ್ತು. ಹಾಗೆಯೇ ಚಿತ್ರದುರ್ಗದ ಈ ಅನುಭವ ಮಂಟಪ ತುಂಬಿ ತುಳುಕುತ್ತಿತ್ತು. ಇಂದು ಖಾಲಿ ಆದಂತೆ ಕಾಣುತ್ತದೆ. ಶಿವಶರಣರಿಗೆ ಮೇಲಿಂದ ಮೇಲೆ ಹೊಡೆತಗಳು ಬೀಳುತ್ತಿವೆ. ಬಸವ ಶರಣರು ಯಾರಿಗೂ ಅಂಜಿದವರಲ್ಲ. ಶರಣ ಸಂಸ್ಕೃತಿ ಮಾಡುವವರು ಬಸವಣ್ಣನನ್ನು ಮರೆತಿದ್ದಾರೆ. ತತ್ತ್ವಗಳನ್ನು ಬಿಟ್ಟದ್ದಾರೆ ಎಂದು ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಹೇಳಿದರು.

ಶ್ರೀಮಠದ ಅನುಭವ ಮಂಟಪದ ಅವರಣದಲ್ಲಿ ಶನಿವಾರ ನಡೆದ ಶರಣ ಸಂಸ್ಕೃತಿ ಉತ್ಸವ 2023ರ ಬಸವತತ್ವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಶರಣರು ಕೊಟ್ಟಿರುವ ದೀಪವು ನಿರಂತರವಾದುದು. ಪರಿವರ್ತನೆ ನಮ್ಮೊಳಗೆ ಆಗಬೇಕು. ನನ್ನ ತಂದೆ ಸಾಯುವ ಮೊದಲು ನನ್ನ ತಲೆ ಮೇಲೆ ಕೈಯಿಟ್ಟು ರಾಜಕಾರಣ ಬೇಡ ಬಸವಣ್ಣನಾಗು, ಅದು ಎಲ್ಲವನ್ನೂ ಕೊಡುತ್ತದೆ ಎಂದು ಹೇಳಿದ್ದರು.

ಅಂದಿನಿಂದ ಇಂದಿನವರೆಗೆ ನಾನು ಬಸವತತ್ತ್ವವನ್ನು ಬೆಳಸುತ್ತಿದ್ದೇನೆ. ಒಳಗಿರುವ ಲಿಂಗದ ಅರಿವು ನಮಗಿಲ್ಲದೇ ಹೋಗಿದೆ. ಅರಿವೇ ಗುರುವಾಗಿ ನಾವು ಬದುಕಬೇಕು. ಅಂಗಭಾವದಿಂದ ಲಿಂಗಭಾವಕ್ಕೆ ಪರಿವರ್ತನೆಯಾಗುವುದೇ ಬಸವತತ್ತ್ವ. ಈಗ ಅಂಗದ ಪ್ರಭಾವಳಿ ಬೇರೆ, ಅಂಗ ಪ್ರಭಾವಳಿ ಬೇರೆಯಾಗಿ ಕಾಣುತ್ತಿದೆ. ನಮ್ಮ ಸಮಾಜದಲ್ಲಿ ಯಾಕೆ ಪರಿವರ್ತನೆ ಆಗುತ್ತಿಲ್ಲ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸವಣೂರು ದೊಡ್ಡಹುಣಸೇಮಠದ  ಶ್ರೀ.ಮ.ನಿ.ಪ್ರ ಶ್ರೀ.ಚನ್ನಬಸವ ಸ್ವಾಮಿಗಳು, ಹುಲಸೂರು ಶ್ರೀ ಗುರು ಬಸವೇಶ್ವರ ಸಂಸ್ಥಾನಮಠದ ಶ್ರೀ. ಮ. ನಿ. ಪ್ರ. ಶ್ರೀ. ಶಿವಾನಂದಾ ಮಹಾಸ್ವಾಮಿಗಳು, ಉಸ್ತುವಾರಿ ಶ್ರೀಗಳಾದ ಶ್ರೀಬಸವಪ್ರಭು ಸ್ವಾಮಿಗಳು, ಶರಣಸಂಸ್ಕøತಿ ಉತ್ಸವ-2023ರ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ, ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆಶೋಕ್ ಎಸ್ ಆಲೂರು, ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ. ಎಸ್. ರೇಖಾ, ಶರಣಸಂಸ್ಕøತಿ ಉತ್ಸವ-2023ರ ಕಾರ್ಯಾಧ್ಯಕ್ಷರಾದ ಕೆ.ಸಿ.ನಾಗರಾಜ್, ಎಸ್‍ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿಗಳಾದ ಎಂ. ಭರತ್ ಕುಮಾರ್ ಹಾಗೂ ಹರಚರಗುರುಮೂರ್ತಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ವಿವಿಧ ಮಠಾಧೀಶರುಗಳು ಕತೃಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಮುರಾ ಕಾಲವಿದರು ಪ್ರಾರ್ಥಿಸಿ, ಶ್ರೀ ಜ್ಞಾನಮೂರ್ತಿ ನಿರೂಪಿಸಿ ವಂದಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೊಸದುರ್ಗ | ಕೃಷಿ‌ ಮಾರುಕಟ್ಟೆಯಲ್ಲಿ ಡಿ. ಗ್ರೂಪ್ ನೌಕರ ಆತ್ಮಹತ್ಯೆ..!

ಹೊಸದುರ್ಗ: ಕೃಷಿ ಮಾರುಕಟ್ಟೆಯಲ್ಲಿಯೇ ಡಿ ಗ್ರೂಪ್ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇದನ್ನು ಕಂಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಕಚೇರಿ ಸಿಬ್ಬಂದಿ ಶಾಕ್ ಆಗಿದ್ದಾರೆ. 55 ವರ್ಷದ ಜಗದೀಶ್ ಆತ್ಮಹತ್ಯೆಗೆ

ಚಿತ್ರದುರ್ಗ ಜಿಲ್ಲೆಯ ಮಳೆ ವರದಿ : ಸೂಗೂರುನಲ್ಲಿ ಹೆಚ್ಚು ಮಳೆ

  ಚಿತ್ರದುರ್ಗ,ಮೇ.20 : ಭಾನುವಾರ ಸುರಿದ ಮಳೆ ವಿವರದನ್ವಯ ಹಿರಿಯೂರು ತಾಲ್ಲೂಕಿನ ಸೂಗೂರುನಲ್ಲಿ 52.4ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರು 11.4 ಮಿ.ಮೀ, ಇಕ್ಕನೂರು 26 ಮಿ.ಮೀ,

ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ : ಎಸ್ಐಟಿ ಮುಂದೆ ಹಾಜರಾಗುವುದು ಉತ್ತಮ ಎಂದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಇನ್ನು ಪತ್ತೆಯಾಗಿಲ್ಲ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿಗೆ ಪ್ರಶ್ನೆ ಎದುರಾದಾಗ, ಆರೋಪಿ ಆಗಿದ್ದವನು ಆರೋಪವನ್ನು ಎದುರಿಸಬೇಕು. ಕಾನೂನು ಹೋರಾಟವನ್ನು ಮಾಡಬೇಕು ಎಂದಿದ್ದಾರೆ.   ಆರೋಪವೆಂಬುದು

error: Content is protected !!