Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದ ಕೋಟೆ ಮುಂಭಾಗದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ : ಎಚ್ ಕೆ ಎಸ್ ಸ್ವಾಮಿ ಒತ್ತಾಯ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಡಾ.ಎಚ್.ಕೆ.ಎಸ್.ಸ್ವಾಮಿ
ಉಪಾಧ್ಯಕ್ಷರು,
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಚಿತ್ರದುರ್ಗ,
94830 49830

ಚಿತ್ರದುರ್ಗ :  ಏಳು ಸುತ್ತಿನ ಕೋಟೆಯ ಮುಂಭಾಗದಲ್ಲಿ ಮಕ್ಕಳು ಮತ್ತು ಸಾರ್ವಜನಿಕರು ಬಂದು ತಿಂದು ಬಿಸಾಡುವ ಪ್ಲಾಸ್ಟಿಕ್ ಕವರ್ ಗಳು ಗಾಳಿಯಲ್ಲಿ ತೇಲಾಡುತ್ತಿರುತ್ತವೆ. ಅವುಗಳನ್ನ ಹಾಕಲು  ಒಂದು ಕಸದ ಬುಟ್ಟಿಯ ವ್ಯವಸ್ಥೆ ಮಾಡಿ ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಡಾ ಎಚ್ ಕೆ ಎಸ್  ಸ್ವಾಮಿ ಒತ್ತಾಯಿಸಿದ್ದಾರೆ‌.

ಭಾರತೀಯ ಪುರಾತತ್ವ ಇಲಾಖೆ ಪರಿಸರದ ಬಗ್ಗೆ ಕಾಳಜಿಯನ್ನ ಮರೆತಂತಿದೆ. ದಿನನಿತ್ಯ ಕೋಟೆ ವೀಕ್ಷಣೆಗೆಂದು ಬರುವ ಸಾವಿರಾರು ಪ್ರವಾಸಿಗರು, ಹೊರಗಡೆ ಗೇಟಿನ ಮುಂಭಾಗದಲ್ಲಿ ತಿಂದು ಬಿಸಾಡುವ ಪ್ಲಾಸ್ಟಿಕ್ ಕವರ್ ಗಳು, ಸಿಪ್ಪೆಗಳನ್ನ ಹಾಕಲು ಕಸದ ಬುಟ್ಟಿ ವ್ಯವಸ್ಥೆಯನ್ನು ಮಾಡದೆ ಹಾಗೆ ಬಿಟ್ಟಿರುವುದರಿಂದ ತಿಂದ ಎಲ್ಲಾ ಕಸವನ್ನ ರಸ್ತೆಯಲ್ಲಿ ಎಸೆಯುತಿರುವುದರಿಂದ, ಅದು ಗಾಳಿಯಲ್ಲಿ ಹಾರಾಡಿಕೊಂಡು, ತೇಲಾಡಿಕೊಂಡು, ಅಕ್ಕಪಕ್ಕದ ರಸ್ತೆಯ ಮನೆಗಳ ಮುಂದೆ ಬಂದು ಬೀಳುತ್ತಿರುವ ದೃಶ್ಯ ನೋಡುಗರಿಗೆ ಅಸಹ್ಯ ಹುಟ್ಟಿಸುವಂತೆ ಆಗಿದೆ.

ನಗರದ ಸೌಂದರ್ಯದ ಬಗ್ಗೆ ಕಾಳಜಿ ವಹಿಸಬೇಕಾದಂತ ನಗರ ಸಭೆಯವರಾಗಲಿ, ಕೋಟೆಯ ವ್ಯವಸ್ಥಾಪಕರಾಗಲಿ ಈ ಕಸದ ಬುಟ್ಟಿಯ ಬಗ್ಗೆ ಇನ್ನೂ ಗಮನ ಹರಿಸಿಲ್ಲ. ಹಾಗಾಗಿ ಶೀಘ್ರವಾಗಿ ಅಲ್ಲಿಗೊಂದು ಕಸದ ಬುಟ್ಟಿಗಳನ್ನು ಇಟ್ಟು, ಬಂದ ಟೂರಿಸ್ಟ್ ಗಳಿಗೆ ತಿಂದಾದ ಮೇಲೆ ಕಸವನ್ನ ಅದರಲ್ಲಿ ಹಾಕುವಂತಹ ವ್ಯವಸ್ಥೆ ಮಾಡಿದರೆ, ಕೋಟೆಯ ಮುಂಭಾಗದಲ್ಲಿ ಸ್ವಚ್ಛತೆ ಮತ್ತು ಪರಿಸರ ಸುಂದರವಾಗುವುದು, ಇಲ್ಲವಾದರೆ ಕಸ ಹೊಡೆಯುವವರೆಗೂ ಅಲ್ಲಿ ಕಸವನ್ನು ತುಳಿದುಕೊಂಡೆ ಜನರು ಓಡಾಡುತ್ತಿರುತ್ತಾರೆ.

ಇದರ ಬಗ್ಗೆ ಅಧಿಕಾರಿಗಳು ಶೀಘ್ರವಾಗಿ ಗಮನಹರಿಸಿ ಅಲ್ಲೊಂದಿಷ್ಟು ಕಸದ ಬುಟ್ಟಿಗಳನ್ನ ಇಟ್ಟು ಪರಿಸರ ಕಾಳಜಿಯನ್ನ ತೋರಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ಡಿಕೆ ಶಿವಕುಮಾರ್ ರುವಾರಿ.. ವೈರಲ್ ಆದ ವಿಡಿಯೋಗಳ ನನ್ನ ಪೆನ್ ಡ್ರೈವ್ ನಲ್ಲಿ ಇರೋದಲ್ಲ ಎಂದ ದೇವರಾಜೇಗೌಡ..!

ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಾಸನದ ಹಾದಿ ಬೀದಿಯಲ್ಲಿ ಸಿಕ್ಕಿದ್ದಲ್ಲದೆ, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್

ಮುರುಘಾಮಠದಲ್ಲಿ ಮೇ 8 ರಿಂದ 10 ರವರೆಗೆ ಬಸವ ಜಯಂತಿ ,:  ಕಾರ್ಯಕ್ರಮಗಳ ವಿವರ ಇಂತಿದೆ..!

ಸುದ್ದಿಒನ್,ಚಿತ್ರದುರ್ಗ, ಮೇ. 06 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚಿತ್ರದುರ್ಗ ಆಕಾಶವಾಣಿಯಲ್ಲಿ ಮೇ

ನಾಳೆ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಉತ್ಸವ :   ಸಿದ್ದತೆ ಹೇಗಿದೆ ?

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ.06 : ಸಹೋದರಿಯರ ನಡುವೆ ಜಗಳ, ಮುನಿಸು ಇರುವುದು ಸಹಜ. ಆದ್ರೆ, ಕೋಟೆನಾಡಿನಲ್ಲಿ ಮಾತ್ರ ಮುನಿದು

error: Content is protected !!