Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಾಸನದಲ್ಲಿ ಜೆಡಿಎಸ್ ಬಗ್ಗೆ ವ್ಯಂಗ್ಯವಾಡಿದ ಪ್ರಧಾನಿ ನರೇಂದ್ರ ಮೋದಿ..!

---Advertisement---

ಹಾಸನ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನಾಯಕರು ಕೂಡ ಹಳೆ ಮೈಸೂರು ಭಾಗವನ್ನು ಗೆಲ್ಲುವುದಕ್ಕಾಗಿ ಕಸರತ್ತು ನಡೆಸುತ್ತಿದೆ. ಹೇಳಿ ಕೇಳಿ ಹಳೇ ಮೈಸೂರು ಭಾಗ ಜೆಡಿಎಸ್ ನ ಭದ್ರಕೋಟೆ ಇದ್ದಂತೆ. ಹಾಸನದಲ್ಲೂ ಜೆಡಿಎಸ್ ಪ್ರಾಬಲ್ಯವಿದೆ. ಆದರೆ ಈ ಬಾರಿ ಬಿಜೆಪಿ ಒಂದು ಕ್ಷೇತ್ರ ಕಬಳಿಸಿದೆ. ಪ್ರೀತಂ ಗೌಡ ಆ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಬಾರಿ ಅದನ್ನೂ ಪಡೆಯಲೇಬೇಕೆಂದು ದೊಡ್ಡ ಗೌಡರ ಕುಟುಂಬಸ್ಥರು ಮನಸ್ತಾಪ ಮರೆತು ಒಂದಾದರೆ, ಈ ಕಡೆ ಪ್ರಧಾನಿ ಮೋದಿ ಅವರು ಅದೇ ಜೆಡಿಎಸ್ ಕೋಟೆಗೆ ಇಂದು ಭೇಟಿ ನೀಡಿದ್ದಾರೆ. ಜೆಡಿಎಸ್ ವಿರುದ್ಧ ಅಬ್ಬರಿಸಿ, ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಉಚ್ಛರಿಸಿದ್ದಾರೆ.

 

ಬೇಲೂರಿನಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ – ಜೆಡಿಎಸ್ ಗೆ ಮತ ಹಾಕಿದರೆ ಕರ್ನಾಟಕದ ಭವಿಷ್ಯದ ಬಾಗಿಲು ಮುಚ್ಚಿದಂತೆಯೇ. ಕಾಂಗ್ರೆಸ್ – ಜೆಡಿಎಸ್ ನಡುವೆ ವಿಚಿತ್ರವಾದ ಸಮಾನತೆ ಇದೆ. ಏನೆಂದರೆ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ನೆಲೆಸಿರುವ ಒಂದು ಪರಿವಾರದ ಸೇವೆ ಮಾಡುತ್ತಿದ್ದಾರೆ. ಯಾರು ಕುಟುಂಬದ ಸೇವೆ ಮಾಡುತ್ತಾರೋ..? ಯಾರು ಆ ಕುಟುಂಬಕ್ಕೆ ಹತ್ತಿರ ಇರುತ್ತಾರೊ..? ಯಾರು ಆ ಪರಿಹಾರಕ್ಕೆ ಮಂಡಿಯೂರಿ ಕೂರುತ್ತಾರೋ..? ಅಂತಹವೆಇಗೆ ಮಾತ್ರ ಕಾಂಗ್ರೆಸ್ ನಲ್ಲಿ ಸ್ಥಾನ- ಮಾನ ಸಿಗಲಿದೆ.

ಜೆಡಿಎಸ್ ಕೂಡ ಒಂದು ರೀತಿಯ ಪ್ರೈವೆಟ್ ಲಿಮಿಟೆಡ್. ಇಲ್ಲಿ ಕುಟುಂಬ ಅಭಿವೃದ್ಧಿಗೆ ಮಾತ್ರ ಒತ್ತು ಸಿಗಲಿದೆ. ಇಲ್ಲಿ ಜನರ ಹಿತ ಇಲ್ಲ. ಪರಿವಾರದ ಹಿತಾಸಕ್ತಿ ನಡೆಯುತ್ತದೆ. ಕುಟುಂಬಕ್ಕಾಗಿ ಕರ್ನಾಟಕದ ತುಂಬೆಲ್ಲಾ ಹೋರಾಟ ನಡೆಯುತ್ತದೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...