Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರತಾಪ್ ಸೇರಿದಂತೆ ಎಲ್ಲರೂ ಸೇಫ್.. ಹೊರಗೆ ಬರ್ತಾರ ಸ್ನೇಕ್ ಶ್ಯಾಮ್..?

Facebook
Twitter
Telegram
WhatsApp

 

ಬಿಗ್ ಬಾಸ್ ಸೀಸನ್ 10 ಶುರುವಾಗಿ ಒಂದು ವಾರ ಕಳೆದಿದೆ. ಮೊದಲ ಪಂಚಾಯ್ತಿ ಶುರುವಾಗಿದೆ. ಎಲ್ಲಾ ಸೀಸನ್ ನಲ್ಲೂ ಕಿಚ್ಚನ ಪಂಚಾಯ್ತಿಗೆ ಕುತೂಹಲದಿಂದಾನೇ ಕಾಯುತ್ತಾರೆ. ಆದರೆ ಈ ಸೀಸನ್ ನಲ್ಲಿ ಆ ಕಾಯುವಿಕೆ ಹೆಚ್ಚಾಗಿತ್ತು. ಯಾಕಂದ್ರೆ ಒಳಗಿದ್ದ ಜನ ಅಷ್ಟು ಕೆಳಮಟ್ಟದಲ್ಲಿ ನಡೆದುಕೊಂಡಿದ್ದರು. ಸಿಕ್ಕ ಪ್ರತಾಪನನ್ನು ಹಿಡಿದು ಹಿಡಿದು ಜಗ್ಗುತ್ತಿದ್ದರು. ಕಡೆಗೂ ಪಾಪ ಆ ಪ್ರತಾಪನ ತಾಳ್ಮೆಯ ಕಟ್ಟೆ ಒಡೆದು ಅಳುವಿಗೂ ಕಾರಣವಾಯ್ತು. ಈ ಎಲ್ಲಾ ಬೆಳವಣಿಗೆಯಿಂದ ಬಿಗ್ ಬಾಸ್ ನೋಡುತ್ತಿದ್ದವರು ಆದಷ್ಟು ಬೇಗ ಕಿಚ್ಚನ ವಾರದ ಕಥೆ ಬರಲಿ ಎಂದೇ ಕಾದಿದ್ದಾರೆ.

ಈಗಾಗಲೇ ನಾಮಿನೇಷನ್ ಲೀಸ್ಟ್ ನಲ್ಲಿ ಎಂಟು ಜನ ಇದ್ದರು. ಆ ಎಂಟು ಜನರಲ್ಲಿ ಮೊದಲ ದಿನ ಅಂದ್ರೆ ಶನಿವಾರ ಮೂವರನ್ನು ಸೇವ್ ಮಾಡಲಾಗಿದೆ. ಭಾನುವಾರ ಇನ್ನುಳಿದ ನಾಲ್ವರನ್ನು ಸೇವ್ ಮಾಡಿ, ಒಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆ. ಒಂದೇ ವಾರಕ್ಕೆ ಮನೆಯಲ್ಲಿರುವ ಒಬ್ಬರು ತನ್ನ ಆಟವನ್ನು ಮುಗಿಸಲಿದ್ದಾರೆ.

ಡ್ರೋನ್ ಪ್ರತಾಪ್ ಈಗಾಗಲೇ ಎಲ್ಲರ ಜೊತೆಗೂ ಬೆರೆಯುತ್ತಿದ್ದಾರೆ. ಕಿಚ್ಚನ ಕ್ಲಾಸ್ ನಂತರ ಮನೆಯವರೆಲ್ಲ ಸರಿಯಾಗಲಿದ್ದಾರೆ ಎಂಬ ನಂಬಿಕೆ ಎಲ್ಲರಿಗೂ ಇದೆ. ಈ ಬೆನ್ನಲ್ಲೇ ಮನೆಯಿಂದ ಹೊರ ಬರುವುದು ಯಾರು ಎಂಬ ಪ್ರಶ್ನೆಗೆ ಮೂಲಗಳ ಪ್ರಕಾರ ಸ್ನೇಕ್ ಶ್ಯಾಮ್ ಎನ್ನಲಾಗ್ತಾ ಇದೆ. ಸ್ನೇಕ್ ಶ್ಯಾಮ್, ವಯಸ್ಸಿನ ವಿಚಾರ ಅಷ್ಟಾಗಿ ಬಾರದೆ ಹೋದರು, ಆಟಗಳಲ್ಲಿ ಅವರ ಬೆಂಬಲ ಸಿಗುತ್ತಿಲ್ಲ ಎಂಬುದು ಮನೆಯವರ ಮಾತು. ಹೀಗಾಗಿ ಸ್ನೇಕ್ ಶ್ಯಾಮ್ ಹೊರಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಸಂಡೆ ವಿತ್ ಸುದೀಪದಲ್ಲಿ ಗೊತ್ತಾಗಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

ಪ್ರಜ್ವಲ್ ರೇವಣ್ಣ ಜೊತೆ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಸಂಕಷ್ಟ : ಎಸ್ಐಟಿಯಿಂದ ನೋಟೀಸ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

error: Content is protected !!