Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

NEET-UG ಫಲಿತಾಂಶ ಪ್ರಕಟ : ಟಾಪ್ 10ರ ಪಟ್ಟಿಯಲ್ಲಿರೋದು ಯಾರ್ಯಾರು..?

---Advertisement---

 

ಇಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನೀಟ್-ಯುಜಿ 2025ರ ಫಲಿತಾಂಶ ಪ್ರಕಟ ಮಾಡಿದೆ. ಮೆಡಿಕಲ್ ಪ್ರವೇಶ ಪರೀಕ್ಷೆಗೆ ಕಾಯ್ತಾ ಇದ್ದಂತವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ದೇಶದಾದ್ಯಂತ ಒಟ್ಟು 12 ಲಕ್ಷದ 36 ಸಾವಿರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಮೆಡಿಕಲ್ ಪ್ರವೇಶ ಪರೀಕ್ಷೆಗೆ ಈ ಬಾರಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ರಾಜಸ್ಥಾನ ಮೂಲದ ಮಹೇಶ್ ಕುಮಾರ್ ಅವರು ನೀಟ್ – ಯುಜಿ 2025ರಲ್ಲಿ ಇಡೀ ಭಾರತದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ.

ಈ ಬಾರಿ ಹತ್ತು ಸ್ಥಾನಗಳನ್ನ ಯಾರೆಲ್ಲಾ ಪಡೆದಿದ್ದಾರೆ ಎಂಬ ಮಾಹಿತಿ ಇಲ್ಲಿದೆ. ಅದರಲ್ಲೂ ನೀಟ್ – ಯುಜಿ ನಲ್ಲೂ ಮಹಿಳೆಯರು ಕೂಡ ಒಳ್ಳೆ ಸ್ಥಾನ ಪಡೆದಿದ್ದಾರೆ. ಅದರಲ್ಲೂ ದೆಹಲಿಯ ಅವಿಜಾ ಅಗರ್ವಾಲ್ ಮಹಿಳೆಯರಲ್ಲಿಯೇ ಅಗ್ರಸ್ಥಾನ ಪಡೆದಿದ್ದಾರೆ. ಮಧ್ಯಪ್ರದೇಶದ ಉತ್ಕರ್ಷ್ ಅವದಿಯಾ ದ್ವಿತೀಯಾ ಸ್ಥಾನದಲ್ಲಿದ್ದಾರೆ.

 

ಹತ್ತು ಸ್ಥಾನ ಪಡೆದವರು ಯಾರೆಲ್ಲಾ ಎಂಬ ಲೀಸ್ಟ್ ಇಲ್ಲಿದೆ. ಮಹೇಶ್ ಕುಮಾರ್ ರಾಜಸ್ಥಾನ, ಉತ್ಕರ್ಷ್ ಅವದಿಯಾ ಮಧ್ಯಪ್ರದೇಶ, ಕೃಷ್ಣಾಗ್ ಜೋಶಿ ಮಹಾರಾಷ್ಟ್ರ, ಮೃಣಾಲ್ ಕಿಶೋರ್ ದೆಹಲಿ, ಅವಿಕಾ ಅಗರ್ವಾಲ್ ದೆಹಲಿ, ಜೆನಿಲ್ ವಿನೋಬಾಯ್ ಗುಜರಾತ್, ಕೇಶವ್ ಮಿಠಾಲ್ ಪಂಜಾಬ್, ಭವ್ಯಾ ಚಿರಾಗ್ ಗುಜರಾತ್, ಹರ್ಷ್ ದೆಹಲಿ, ಆರವ್ ಅಗರ್ವಾಲ್ ಮಹಾರಾಷ್ಟ್ರದವರು ಹತ್ತನೇ ರ್ಯಾಂಕ್ ಬಂದಿದ್ದಾರೆ‌. ನೀಟ್ – ಯುಜಿ ಫಲಿತಾಂಶವನ್ನು ವೆಬ್ ಸೈಟ್ ಮೂಲಕ ವೀಕ್ಷಿಸಬಹುದಾಗಿದೆ. NEET ಅಧಿಕೃತ ವೆಬ್‌ಸೈಟ್ ಆದ neet.nta.nic.in ಅಲ್ಲಿ ವೀಕ್ಷಿಸಬಹುದು. ಯಾರೆಲ್ಲಾ ನೀಟ್ ಪರೀಕ್ಷೆ ಬರೆದಿದ್ದಾರೆ ಅವರೆಲ್ಲರು ಈ ವೆಬ್ಸೈಟ್ ಮೂಲಕ ನೋಡಬಹುದು. ಮೆಡಿಕಲ್ ಮಾಡಬೇಕು ಎಂದು ಕನಸು ಕಂಡವರಿಗೆ ಇದೀಗ ಫಲಿತಾಂಶ ಬಂದಿದ್ದು, ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment