ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿ : ಇಸ್ರೋ ಹಿರಿಯ ವಿಜ್ಞಾನಿ ಸೋಮೇಶ್ ಕರೆ

3 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಹೊಳಲ್ಕೆರೆ ಮಾ. 01 : ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡಿಸುವ ಕಾರ್ಯವನ್ನು ಶಿಕ್ಷಕರಾದವರು ಮಾಡಬೇಕಿದೆ. ಬಹುತೇಕ ವಿದ್ಯಾರ್ಥಿಗಳು ಬರೀ ಇಂಜಿನಿಯರಿಂಗ್, ದಂತ, ವೈದ್ಯಕೀಯ, ಐಟಿಐ, ಪಾಲಿಟೆಕ್ನಿಕ್ ಎಂದು ಇದರ ಕಡೆ ಹೋಗುತ್ತಿದ್ದಾರೆ ವಿಜ್ಞಾನದ ಕಡೆ ಯಾರು ಬರುತ್ತಿಲ್ಲ ಮಕ್ಕಳಿಗೆ ಚಿಕ್ಕನಿಂದಲೇ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬರಿಸುವಂತ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ ಎಂದು ಇಸ್ರೋದ ಹಿರಿಯ ವಿಜ್ಞಾನಿ ಸೋಮೇಶ್ ಕರೆ ನೀಡಿದರು.

ಹೊಳಲ್ಕೆರೆ ಪಟ್ಟಣದ ಹೂರ ವಲಯದ ಸ್ನೇಹ ಪಬ್ಲಿಕ್ ಸ್ಕೂಲ್‍ನಲ್ಲಿ ಶನಿವಾರ ವಿಶ್ವ ವಿಜ್ಞಾನ ದಿಣಾಚರಣೆಯ ಅಂಗವಾಗಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಪ್ರದರ್ಶನ ಸ್ನೇಹ ಅನ್ವೇಷಣಾದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜ್ಞಾನ ಎನ್ನುವುದು ನಮ್ಮೆಲ್ಲರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ವಿಜ್ಞಾನ ಇಲ್ಲದೆ ನಮ್ಮ ಬದುಕು ಇಲ್ಲ ಎನ್ನುವಂತಾಗಿದೆ. ವಿಜ್ಞಾನ ನಮಗೆ ಏನ್ನೆಲ್ಲಾ ನೀಡಿದೆ ಅದರ ಅವಿಷ್ಕಾರಗಳನ್ನು ಇಂದು ನಾವುಗಳು ಅನುಭವಿಸುತ್ತಿದ್ದೇವೆ. ನಮ್ಮ ಹಿರಿಯ ವಿಜ್ಞಾನಿಗಳು ಕಂಡು ಹಿಡಿದ ಅವಿಷ್ಕಾರಗಳ ಫಲವನ್ನು ಇಂದು ನಾವುಗಳು ಪಡೆಯುತ್ತಿದ್ದೇವೆ ನಾವು ಮಾಡಿದ ಅವಿಷ್ಕಾರಗಳನ್ನು ನಮ್ಮ ಮುಂದಿನ ಪೀಳಿಗೆ ಪಡೆಯುತ್ತದೆ ಆದರ ಮುಂದಿನ  ಪೀಳಿಗೆ ವಿಜ್ಞಾನದ ಅವಿಷ್ಕಾರಗಳನ್ನು ಅನುಭವಿಸಲು ಇಂದಿನ ಮಕ್ಕಳು ವಿಜ್ಞಾನದ ಬಗ್ಗೆ ಅಸಕ್ತಿಯನ್ನು ಬೆಳಸಿಕೊಳ್ಳಬೇಕಿದೆ ಎಂದರು.

 

ಸ್ನೇಹ ಅನ್ವೇಷಣಾವನ್ನು ಉದ್ಘಾಟಿಸಿದ ಜಿಸಿಟಿಇಯ ಮಾಜಿ ಜಂಟಿ ನಿರ್ದೆಶಕರಾದ ಗುರುಪ್ರಸಾದ್ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಯನ್ನು ಹೂರ ಹಾಕಲು ಈ ರೀತಿಯ ವಿಜ್ಞಾನ ವಸ್ತು ಪ್ರದರ್ಶನ ವೇದಿಕೆಯಾಗಿದೆ. ಇದರಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಅಡಗಿರುವ ವಿಶಿಷ್ಠವಾದ ಜ್ಞಾನ ಹೂರ ಹಾಕಲಿ ಸೂಕ್ತವಾದ ಸಾಧನವಾಗಿದೆ. ನಮ್ಮ ವಿಜ್ಞಾನಿಗಳು ಹತ್ತು ಹಲವಾರು ಅವಿಷ್ಕಾರಗಳನ್ನು ಮಾಡುವುದರ ಮೂಲಕ ಜನತೆಗೆ ಉತ್ತಮವಾದ ಸಹಕಾರವನ್ನು ನೀಡಿದ್ದಾರೆ. ನಮ್ಮನ್ನಾಳುವ ಸರ್ಕಾರಗಳು ಸಹಾ ಇದಕ್ಕೆ ಉತ್ತಮವಾಧ ಸಹಕಾರ ಹಾಗೂ ಪ್ರೋತ್ಸಾಹವನ್ನು ನೀಡುತ್ತಿವೆ. ಇದರಿಂದ ಜವಾಬ್ದಾರಿಯನ್ನು ಹೆಚ್ಚಿಸುತ್ತಿವೆ. ಮಕ್ಕಳಾದವರು ಪ್ರಶ್ನೆ ಮಾಡದೇ ಏನನ್ನು ಸಹಾ ಒಪ್ಪಿಕೊಳ್ಳ ಬೇಡಿ ಯಾವುದೇ ವಿಷಯವಾದರೂ ಸಹಾ ಅದರ ಬಗ್ಗೆ ಆಳವಾಗಿ ತಿಳಿದುಕೊಂಡು ಪ್ರಶ್ನೆಯನ್ನು ಮಾಡಿ ಸರಿಯಾದ ಉತ್ತರ ದೂರಕಿದ ನಂತರ ಒಪ್ಪಿಕೊಳ್ಳಿ, ಇಂದಿನ ವಿಜ್ಞಾನದ ಆವಿಷ್ಕಾರದ ಫಲವಾಗಿ ನಾವು ಕುಳಿತ್ತಲ್ಲಿಯೇ ಪ್ರಪ್ರಂಚದ ವಿಷಯವನ್ನು ತಿಳಿಯುತ್ತೇವೆ, ಇದು ವಿಜ್ಞಾನದ ಸಾಧನೆಯಾಗಿದೆ. ನಮ್ಮ ದೇಶವೂ ಸಹಾ ವಿವಿಧ ಗ್ರಹಗಳನ್ನು ಉಡಾವಣೆಯನ್ನು ಮಾಡುವಲ್ಲಿ ಪ್ರಪಂಚದಲ್ಲಿಯೇ ಮೂರನೇ ಸ್ಥಾನವನ್ನು ಪಡೆದಿದೆ ಎಂದರು.

 

ನಿವೃತ್ತ ಮುಖ್ಯೋಪಾಧ್ಯಯರು, ವಿಜ್ಞಾನ ಪೌಂಡೇಷೇನ್‍ನ ಕಾರ್ಯದರ್ಶಿಗಳಾದ ಹೆಚ್.ಎಸ್.ಟಿ.ಸ್ವಾಮಿ ಮಾತನಾಡಿ, ನೀವುಗಳಲ್ಲಾಮ ಬಾಲ ವಿಜ್ಞಾನಿಗಳು ನಿಮ್ಮಲ್ಲಿನ ಆಪಾರವಾದ ವಿಜ್ಞಾನ ಆಸಕ್ತಿ ಮುಂದಿನ ದಿನಮಾನದಲ್ಲಿ ನಿಮ್ಮನ್ನು ವಿಜ್ಞಾನಿಗಳನ್ನಾಗಿ ಮಾಡಬಹುದಾಗಿದೆ. 1930ರಲ್ಲಿ ನಮ್ಮ ವಿಜ್ಞಾನ ಕ್ಷೇತ್ರಕ್ಕೆ ನೋಬೆಲ್ ಪಾರಿತೋಷಕ ಬದಿದ್ದು ಇಟ್ಟರೆ ಇದುವರೆವಿಗೂ ಪಾರಿತೋಷಕ ಬಂದಿಲ್ಲ ನಮ್ಮ ವಿಜ್ಞಾನಿಗಳು ಸಂಶೋಧನೆÀಯನ್ನು ಮಾಡುತ್ತಲೇ ಇದ್ದಾರೆ ಆದರೆ ಪ್ರಶಸ್ತಿ ಮಾತ್ರ ಇದುವರವಿಗೂ ಸಿಕ್ಕಿಲ್ಲ ವಿಜ್ಞಾನಕ್ಕೆ ಸರ್ ಸಿ.ವಿ.ರಾಮನ್ ರವರ ಬಳಿಕ ಯಾರಿಗೂ ನೋಬೆಲ್ ಪಾರಿತೋಷಕ ಸಿಕ್ಕಿಲ್ಲ ಎಂದ ಅವರು,  ಸರ್ ಸಿ.ವಿ.ರಾಮನ್ ರವರ ಆದರ್ಶ ಮತ್ತು ತತ್ವಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಆತ್ಮವಿಶ್ವಾಸವನ್ನು ಮೈಗೂಡಿಸಿಕೊಳ್ಳಬೇಕಿದೆ. ವೈಜ್ಞಾನಿಕವಾಗಿ ನಾವುಗಳು ಸಹಾ ವಿಜ್ಞಾನದ ಬಗ್ಗೆ ಅಸಕ್ತಿಯನ್ನು ಮೂಡಿಸಿಕೊಳ್ಳಬೇಕಿದೆ. ಶಿಕ್ಷಕರಾದವರ ಮುಂಚೆ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡಿಸಿಕೊಳ್ಳಬೇಕಿದೆ ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನ ಭೋಧಿಸಿ ಮನೆಯಲ್ಲಿ ಇದಮು ಅಮವಾಸ್ಯೆ ಹೊರಗಡೆ ಹೋಗಬೇಡ ಎಂದು  ಹೇಳುವುದು ಸರಿಯಲ್ಲ ಎಂದರು.

 

ಕಾರ್ಯಕ್ರಮದಲ್ಲಿ ಸ್ನೇಹ ಪಬ್ಲಿಕ್ ಸ್ಕೂಲ್‍ನ ಅಧ್ಯಕ್ಷರಾದ ಮಂಜುನಾಥ್, ಕಾರ್ಯದರ್ಶಿ ವಾಸಂತಿ, ಹೊಳಲ್ಕೆರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿಜ್ಞಾನ ದಿನಾಚರಣೆಯ ಅಂಗವಾಗಿ ಶಾಲೆಯ ಮಕ್ಕಳು ಸುಮಾರು 250ಕ್ಕೂ ಹೆಚ್ಚು ವಿವಿಧ ರೀತಿಯ ಆವಿಷ್ಕಾರಗಳ ಮಾದರಿಯನ್ನು ಮಾಡಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದಲ್ಲದೆ ಅದರ ಉಪಯೋಗದ ಬಗ್ಗೆ ಮಾಹಿತಿಯನ್ನು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *