Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂತಾರ ಸಿನಿಮಾ ಸಮಾಜದ ಮುಖ್ಯವಾಹಿನಿಗೆ ಬರಲು ನಾಡಿನ ಪ್ರೇಕ್ಷಕರ ಅಭಿಮಾನವೇ ಕಾರಣ : ನಟಿ ಮಾನಸಿ ಸುಧೀರ್

Facebook
Twitter
Telegram
WhatsApp

ಸುದ್ದಿಒನ್,  ಚಳ್ಳಕೆರೆ : ತುಳು ಜನಾಂಗದ ಧಾರ್ಮಿಕ ಆರಾಧ್ಯ ದೇವರ ಮಹತ್ವ ಸಾರುವ ಕಾಂತಾರ ಸಿನಿಮಾ ಸಮಾಜದ ಮುಖ್ಯವಾಹಿನಿಗೆ ಬರಲು ನಾಡಿನ ಪ್ರೇಕ್ಷಕರ ಅಭಿಮಾನವೇ ಕಾರಣ ಎಂದು ಸಿನಿಮಾದ ನಾಯಕ ನಟ ರಿಷಭ್‍ಶೆಟ್ಟಿ ಅವರ ಅಮ್ಮನ ಪಾತ್ರ ಮಾಡಿರುವ ನಟಿ ಮಾನಸಿ ಸುಧೀರ್ ಹೇಳಿದ್ದಾರೆ.

ಚಿತ್ರದುರ್ಗದ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಪದಾಧಿಕಾರಿಗಳು ಉಡುಪಿಯಲ್ಲಿನ ತಮ್ಮ ನಿವಾಸದಲ್ಲಿ ಸೋಮವಾರ ಅಭಿನಂದಿಸಿದ ವೇಳೆ ಮಾತನಾಡಿದ್ದಾರೆ.
ತುಳು ಭಾಷೆ ಮತ್ತು ಇಲ್ಲಿನ ಸಂಸ್ಕøತಿ ಆಚರಣೆಯಲ್ಲಿನ ದೈವಭಕ್ತಿ ಕಾಂತಾರ ಸಿನಿಮಾದ ಪ್ರಧಾನ ವಸ್ತು ವಿಷಯವಾಗಿದೆ. ವಯಸ್ಸಿನಲ್ಲಿ ಚಿಕ್ಕವಳಾಗಿದ್ದರೂ ತಾಯಿ ಪಾತ್ರಕ್ಕೆ ನನ್ನ ನಟನಾ ಕೌಶಲ್ಯವನ್ನು ಗುರುತಿಸಿದ ರಿಷಭ್‍ಶೆಟ್ಟಿ ಒಪ್ಪಿಗೆಯಂತೆ ತಾಯಿ ಪಾತ್ರ ನಟಿಸಲು ಅವಕಾಶವಾಯಿತು.

ಯಾವುದೇ ಕ್ಷೇತ್ರದಲ್ಲಿ ಒಳ್ಳೆಯ ಅವಕಾಶ ಬಯಸುವುದಕ್ಕಿಂತ ಮೊದಲು ನಮ್ಮಲ್ಲಿ ಪರಿಶ್ರಮ ಮತ್ತು ಆಸಕ್ತಿ ಇರಬೇಕು. ಯೂಟ್ಯೂಬ್ ಪ್ರಸಾರಕ್ಕೆ ಸಣ್ಣ ಪ್ರಮಾಣದಲ್ಲೂ ತುಂಬಾ ಆಸಕ್ತಿಯಿಂದ ನಟನಾ ಕೌಶಲ್ಯ ರೂಢಿಸಿಕೊಂಡಿದ್ದರ ಫಲವಾಗಿ, ರಿಷಭ್‍ಶೆಟ್ಟಿಯಂತಹ ಮೇರು ನಟರು ಗುರುತಿಸಿ ನಟನೆಗೆ ಅವಕಾಶ ನೀಡಲಾಗಿದೆ. ಕಲಾವಿದರಿಗೆ ಯಾವುದೇ ಭಾಷೆ, ವರ್ಗ, ಗಡಿ ಇಲ್ಲ ಎನ್ನುವ ಭಾವನೆ ಇದೆ. ಈ ದಿಸೆಯಲ್ಲಿ ಮಧ್ಯ ಕರ್ನಾಟಕದ ಸಾಹಿತ್ಯ ಸಂಘಟನೆಯವರು ಬಂದು ಅಭಿನಂದಿಸಿರುವುದು ನನ್ನ ಕಲಾ ಬದುಕಿಗೆ ಸಾರ್ಥಕ ಅನಿಸುತ್ತದೆ ಎಂದು ಸ್ಮರಿಸಿದ್ದಾರೆ.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ಆರ್. ದಯಾವತಿ ಪುತ್ತೂರ್ಕರ್ ಮಾತನಾಡಿ, ಬದಲಾಗುತ್ತಿರುವ ಸಮಾಜದಲ್ಲಿ ಸಿನಿಮಾ ಕತೆಗಳು ಜನರಿಗೆ ಒಪ್ಪುವುದಿಲ್ಲ. ಇಂತಹ ಕಾಲಘಟ್ಟದಲ್ಲೂ ಕಾಂತಾರ ಸಿನಿಮಾ ಕೌಟುಂಬಿಕವಾಗಿ ನೋಡುವಂತಹ ಕತೆ ಆಧಾರಿತವಾಗಿದೆ. ತಾಯಿ ಪಾತ್ರ ನಿರ್ವಹಣೆಯಲ್ಲಿ ನಿಮ್ಮ ಕಲಾ ಕೌಶಲ್ಯತೆ ಮಹಿಳಾ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳಾದ ಸತ್ಯಭಾಮ, ರಂಗಲಕ್ಷ್ಮಿ, ಉಷಾರಾಣಿ, ರಶ್ಮಿ, ಪದ್ಮರಾಣಿ, ಸೌಮ್ಯಪುತ್ರನ್, ಡಾ. ಗೌರಮ್ಮ, ಶೋಭಾ, ಮಹೇಶ್ವರಿ, ಸವಿತಾ, ಟಿ. ಗೀತಾ  ಮತ್ತಿತರರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೇಹಾ ಕೊಲೆ ಆರೋಪಿ ಡಿಎನ್ಎ ಟೆಸ್ಟ್ ಗೆ ಮುಂದಾದ ಅಧಿಕಾರಿಗಳು : ಯಾಕೆ ಗೊತ್ತಾ..?

ಹುಬ್ಬಳ್ಳಿ: ನೇಹಾ ಹೀರೇಮಠ ಕೊಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಹಳ ಗಂಭೀರವಾಗಿ ತನಿಖೆ ನಡೆಸುತ್ತಿದ್ದು, ತನಿಖೆಯನ್ನು ಚುರುಕುಗೊಳಿಸಿದೆ. ರಾಜ್ಯ ಸರ್ಕಾರ ಕೂಡ ನೇಹಾ ಕೇಸನ್ನು ಸಿಐಡಿಗೆ ಒಪ್ಪಿಸಿದೆ. ಎಲ್ಲಾ ರೀತಿಯಿಂದಾನೂ ತಪಾಸಣೆ ನಡೆಯುತ್ತಿದೆ. ಇಂದು

ರಾವಣ ಪಾತ್ರಕ್ಕಾಗಿ ಯಶ್ ಹೆಚ್ಚಿಸಿಕೊಂಡಿದ್ದು ಬರೋಬ್ಬರಿ 15 ಕೆಜಿ..!

ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ರಾಮಾಯಣ ಸಿನಿಮಾ ಸಿಕ್ಜಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಯಶ್ ಕೂಡ ಅದರಲ್ಲಿ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಇನ್ನಷ್ಟು ಸದ್ದು ಮಾಡಿದೆ. ರಾವಣನ ಪಾತ್ರದಲ್ಲಿ ಯಶ್ ರಾಮಾಯಣದಲ್ಲಿ ನಟಿಸಲು ಒಪ್ಪಿದ್ದಾರೆ. ಆದರೆ

ಮಾದವಾರದಲ್ಲಿ ಸಿಕ್ಕ ಕೋಟಿ ಕೋಟಿ ಹಣ : ಮೆಸೇಜ್ ಮಾಡಿ, ಕಾಲ್ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ಕೆ‌.ಸುಧಾಕರ್..?

ಬೆಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆ ಕಂತೆವಕಂತೆ ಹಣ ಸಾಗಾಣೆಯಾಗುವುದು ಸರ್ವೇ ಸಾಮಾನ್ಯ. ಚುನಾವಣೆಯಲ್ಲಿ ಹಣ ಸಾಗಾಟ ನಡೆಯುತ್ತದೆ ಎಂದೇ ಪೊಲೀಸರು ಹದ್ದಿನ ಕಣ್ಣು ಇಡುತ್ತಾರೆ. ಏಪ್ರಿಲ್ 25ರಂದು ಬಿಜೆಪಿ ಮುಖಂಡನ ಮನೆಯಲ್ಲಿ ಕೋಟಿ ಕೋಟಿ

error: Content is protected !!