Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮನವೆಂಬ ಮರ್ಕಟದ ಲೆಕ್ಕಪರಿಶೋಧಕರು ನಾವಾದರೆ ತಪ್ಪುಗಳಾಗುವುದಿಲ್ಲ : ಮಹಾದೇವಿ ಎಂ.

Facebook
Twitter
Telegram
WhatsApp

 

ಚಿತ್ರದುರ್ಗ, (ನ.04) : ಮನವೆಂಬುದು ಮರ್ಕಟವಿದ್ದಹಾಗೆ. ನಾಗಲೋಟದಲ್ಲಿ ಓಡುವ ಮನಸ್ಸಿನ ಲೆಕ್ಕಪರಿಶೋಧಕರು ನಾವಾದರೆ ಜೀವನದಲ್ಲಿ ತಪ್ಪುಗಳಾಗುವುದಿಲ್ಲ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕಿ ಮಹಾದೇವಿ ಎಂ. ಮರಕಟ್ಟಿ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಸಾಪ, ರಂಗಸೌರಭ ಕಲಾ ಸಂಘ, ಪ್ರಜಾಸೇವಾ ಸಾಂಸ್ಕøತಿಕ ಮತ್ತು ಕ್ರೀಡಾಸಂಘ ಇವರ ಸಹಯೋಗದಲ್ಲಿ ಗುರುವಾರ 67ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೀವನವೆಂಬ ಲೆಕ್ಕಾಚಾರದಲ್ಲಿ ತಪ್ಪುಗಳು ಆಗುತ್ತವೆ. ಆ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿದೆ. ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಸಂಸ್ಥೆಗಳು ಲೆಕ್ಕಪರಿಶೋಧನೆಯನ್ನು ಮಾಡಿಸಿ ಆದ ಪ್ರಮಾದಗಳನ್ನು ಮತ್ತೊಮ್ಮೆ ಆಗದಂತೆ ನೋಡಿಕೊಳ್ಳುತ್ತವೆ. ಜೀವನವೂ ಹಾಗೆಯೇ. ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕು ಆಗ ಮಾತ್ರ ಜೀವನ ಸುಗಮವಾಗಲು ಸಾಧ್ಯ. ಚಿತ್ರದುರ್ಗ ಜಿಲ್ಲಾ ಕಸಾಪ ಹಾಗು ವಿವಿಧ ಸಂಸ್ಥೆಗಳು ವಿಶಿಷ್ಟವಾಗಿ ಈ ಕಾರಾಗೃಹದಲ್ಲಿ ರಾಜ್ಯೋತ್ಸವ ನಿಮಿತ್ತ ಕನ್ನಡ ಗೀತೆಗಳ ಗಾಯನ ಹಮ್ಮಿಕೊಂಡಿರುವುದು ಖುಷಿಯ ಸಂಗತಿ. ಸಂಗೀತ ಮನಸ್ಸನ್ನು ತಿಳಿಗೊಳಿಸುವ ಸಾಧನ ಇಂತಹ ಕಾರ್ಯಕ್ರಮಗಳಿಂದ ಮನಸ್ಸು ಪರಿವರ್ತನೆಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಸಂಗೀತವೆಂಬುದು ಗಾಯಕ ಹಾಗು ಕೇಳುಗರ ಇಬ್ಬರ ಮನಸ್ಸನ್ನು ಮುದಗೊಳಿಸುತ್ತದೆ. ಒಳ್ಳೆಯ ಹಾಡು ಹಾಡಿದೆ ಎನ್ನುವ ತೃಪ್ತಿ ಗಾಯಕನಿಗೆ ಇದ್ದರೆ, ಎಲ್ಲಾ ಕಷ್ಟಗಳನ್ನು ಮರೆತು ಕ್ಷಣ ಕಾಲ ಸಂಗೀತ ಆಲಿಸಿದ ಸಂತಸ ಕೇಳುಗರಿಗಿರುತ್ತದೆ ಈ ಮಾತನ್ನು ಖ್ಯಾತ ಇಂಗ್ಲೀಷ್ ಕವಿ ಷೇಕ್ಸ್‍ಪೀಯರ್ ಒಂದೆಡೆ ಉಲ್ಲೇಖಿಸಿದ್ದಾನೆ. ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಾಗೆಯೇ ಸಂಗೀತಕ್ಕೂ ಆದರದ್ದೇ ಆದ ಮಹತ್ವವಿದೆ. ಸಾಹಿತ್ಯದೊಂದಿಗೆ ಸಂಗೀತ ಬೆರೆತರೆ ಅದೊಂದು ಅದ್ಭುತ ಲೋಕವನ್ನೇ ಸೃಷ್ಟಿಸುತ್ತದೆ. ಕನ್ನಡ ಗೀತೆಗಳು ಅಂತಹ ಅದ್ಭುತವಾದ ಲೋಕವನ್ನು ಸೃಷ್ಟಿಸಿದ ಉದಾಹರಣೆಗಳಿವೆ ಎಂದು ಖ್ಯಾತ ಕವಿಗಳು ಅವುಗಳನ್ನು ಹಾಡಿದ ಗಾಯಕರನ್ನು ತಿಳಿಸಿದರು.

ಜನಸಾಮಾನ್ಯರಿಗೆ ಸಾಹಿತ್ಯ ತಲುಪುವುದು ಅದಕ್ಕೆ ಸಂಗೀತ ಬೆರೆತಾಗಲೇ. ಅನಕ್ಷರಸ್ಥರಿಗೂ ಸಾಹಿತ್ಯದ ಮಹತ್ವವನ್ನು ತಿಳಿಸುವುದು ಸಂಗೀತವೇ. ಅದು ಸಂಗೀತದ ಯಾವುದೇ ಪ್ರಕಾರವಾಗಬಹದು ಎಂದು ತಿಳಿಸಿದರು.

ಜೀವನದಲ್ಲಿ ಆದಂತಹ ನೋವುಗಳನ್ನು ಮರೆಸುವ ಅದ್ಭುತವಾದ ಶಕ್ತಿ ಇರುವುದು ಉತ್ತಮ ಸಾಹಿತ್ಯ, ಸಂಗೀತಕ್ಕೆ ಮಾತ್ರ ಎಂದು ಹಲವಾರು ಮಹನೀಯರ ಕಥೆಗಳನ್ನು ಉದಾಹರಣೆ ಮೂಲಕ ವಿವರಿಸಿದರು.

ಗಾಯಕರಾದ ಎಂ.ಕೆ. ಹರೀಶ್, ಗಂಗಾಧರಪ್ಪ, ಹಿಮಂತ್‍ರಾಜ್, ಮೈಲಾರಿ, ಅಂಜಿನಪ್ಪ, ರಂಗ ನಿರ್ದೇಶಕ ಕೆಪಿಎಂ.ಗಣೇಶಯ್ಯ ಮತ್ತು ತಂಡ ಹಲವಾರು ಭಾವಗೀತೆಗಳು, ಕನ್ನಡ ಮಹತ್ವವನ್ನು ಸಾರುವ ಚಲನಚಿತ್ರ ಗೀತೆಗಳನ್ನು ಹಾಡಿದರು. ಕಾರಾಗೃಹದ ಬಂಧಿನಿವಾಸಿಗಳು ಸಿ.ಅಶ್ವತ್ ಗಾಯನದ ಒಳಿತು ಮಾಡು ಮನುಷ ಎಂಬ ಗೀತೆಯನ್ನು ಬಂಧಿನಿವಾಸಿಗಳೇ ಹಾಡಿದುದು ಎಲ್ಲರ ಗಮನ ಸೆಳೆಯಿತು.

ಅಲ್ಲದೇ ನಾಡಿನ ಚರಿತ್ರೆಯನ್ನು ಸಾರುವ ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ.. ಡಾ.ರಾಜ್ ಅಭಿನಯದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.. ರವಿಚಂದ್ರನ್ ಅಭಿನಯದ ಡಾ.ಎಸ್.ಪಿ.ಬಿ ಹಾಡಿದ ಕರುನಾಡ ತಾಯಿ ಸದಾ ಚಿನ್ಮಯಿ.. ಮುಂತಾದ ಮನಸ್ಸಿಗೆ ಮುದ ನೀಡುವ ಗೀತೆಗಳ ಗಾಯನ ಸೊಗಸಾಗಿ ಮೂಡಿಬಂತು. ಅಪ್ಪು ಅಭಿನಯದ ಬೊಂಬೆ ಹೇಳುತೈತೆ.. ಹಾಡು ಹಾಗು ಸತ್ಯಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ ಹಾಡಿಗೆ ಬಂಧಿನಿವಾಸಿಗಳು ಮೈಮರೆತು ಆಲಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಕೋಶಾಧ್ಯಕ್ಷ ಚೌಳೂರು ಲೋಕೇಶ್, ಕಸಾಪ ನಿರ್ದೇಶಕ ಶ್ರೀನಿವಾಸ ಮಳಲಿ, ನಿವೃತ್ತ ಶಿಕ್ಷಕ ಎಂ.ಆರ್.ದಾಸೇಗೌಡ, ಕಾರಾಗೃಹದ ಶಿಕ್ಷಕ ಶ್ರೀರಾಮರೆಡ್ಡಿ ಹಾಗು ಕಾರಾಗೃಹದ ಸಿಬ್ಬಂದಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೊತ್ತಂಬರಿ ಸೊಪ್ಪಿನ ಟೀ ಕೇಳಿದ್ದೀರಾ..? ಒಮ್ಮೆ ಮಾಡಿಕೊಂಡು ಕುಡಿಯಿರಿ : ಎಷ್ಟೆಲ್ಲಾ ಅನುಕೂಲ ಗೊತ್ತಾ ?

ಸುದ್ದಿಒನ್ : ಹಲವರಿಗೆ ಬೆಳಗ್ಗೆ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಅನೇಕ ಜನರು ಬೆಳಿಗ್ಗೆ ಹಾಲಿನಿಂದ ತಯಾರಿಸಿದ ಚಹಾ ಮತ್ತು ಕಾಫಿ ಕುಡಿಯುತ್ತಾರೆ. ಆದರೆ, ಕೆಲವರು ಗ್ರೀನ್ ಟೀ ಕುಡಿಯುತ್ತಾರೆ, ಇನ್ನು ಕೆಲವರು ಲೆಮನ್ ಟೀ

ಈ ರಾಶಿಯ ತಂದೆ ತಾಯಿಗೆ ಮಕ್ಕಳ ಸಂಸಾರದ ಚಿಂತೆ ಕಾಡಲಿದೆ.

ಈ ರಾಶಿಯ ತಂದೆ ತಾಯಿಗೆ ಮಕ್ಕಳ ಸಂಸಾರದ ಚಿಂತೆ ಕಾಡಲಿದೆ. ಗುರುವಾರ- ರಾಶಿ ಭವಿಷ್ಯ ಮೇ-9,2024 ಸೂರ್ಯೋದಯ: 05:50, ಸೂರ್ಯಾಸ್ತ : 06:35 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಅವಕಾಶ ಸಿಗದೆ ಅಲ್ಲು ಅರ್ಜುನ್ ಕೂಡ ನೊಂದಿದ್ದರು.. ಇಂದು ಪ್ಯಾನ್ ಇಂಡಿಯಾ ನಟ..!

ಇಂದು ಸ್ಟಾರ್ ನಟರಾಗಿರುವ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಟ-ನಟಿಯರ ಹಿಂದೆಯೂ ಸಾಕಷ್ಟು ಪರಿಶ್ರಮ ಅಡಗಿದೆ. ಆರಂಭದಲ್ಲಿ ಅವಕಾಶಕ್ಕಾಗಿ ಪರಿತಪಿಸಿದ್ದಾರೆ. ಅವಕಾಶ ಸಿಗದೆ ಅವಮಾನ ಎದುರಿಸಿದ್ದಾರೆ. ಅದರಲ್ಲಿ ಇಂದು ತೆಲುಗು ಇಂಡಸ್ಟ್ರಿಯ ಟಾಪ್ ಒನ್

error: Content is protected !!