ಬೆಂಗಳೂರು: ಮಾಜಿ ಸಚಿವ ಕೆ.ಸುಧಾಕರ್ ನಿನ್ನೆ ವಿಜಯೇಂದ್ರ ವಿರುದ್ಧ ನೇರಾ ನೇರಾ ಸವಾಲು ಹಾಕಿದ್ದರು. ಅಹಂಕಾರವೆಲ್ಲ ಬೇಡ ಎಂಬ ಮಾತನ್ನ ಹೇಳಿದ್ದರು. ನಮ್ಮನ್ನ ಮುಳುಗಿಸುವ ಪ್ರಯತ್ನ ಮಾಡ್ತಾ ಇದ್ದೀರಾ ಎಂದು ಆರೋಪ ಮಾಡಿದ್ದರು. ಅದಕ್ಕೆ ಇಂದು ಬಿವೈ ವಿಜಯೇಂದ ಅವರು ಸಾವಾಧಾನದ ಉತ್ತರ ನೀಡಿದ್ದಾರೆ.
ಮಾನ್ಯ ಸುಧಾಕರ್ ಅವರು ಆಡಿದ ಆಕ್ರೋಶಭರಿತ ಮಾತುಗಳನ್ನ ಕೇಳಿದ್ದೇನೆ. ವಿಜಯೇಂದ್ರ ಅವರು ನಮ್ಮನ್ನ ಸಮಾಧಿ ಮಾಡುವುದಕ್ಕೆ ಹೊರಟಿದ್ದಾರೆ ಎಂಬ ಮಾತನ್ನ ಹೇಳಿದ್ದಾರೆ. ನಾನು ತಮ್ಮ ಮೂಲಕ ಸುಧಾಕರ್ ಅವರಿಗೆ ಹೇಳುತ್ತಿದ್ದೇನೆ, ದಯವಿಟ್ಟು ಈ ರೀತಿಯ ಹೇಳಿಕೆಗಳನ್ನು ಕೊಡಬೇಡಿ. ಅದು ನಿಮಗೂ ಗೌರವ ತಂದುಕೊಡಲ್ಲ, ನನಗೂ ಗೌರವ ತಂದು ಕೊಡುವುದಿಲ್ಲ. ಅಲ್ಲಿ ಯಾರು ಆಯ್ಕೆಯಾಗಿದ್ದಾನೆ, ಆತ ಕೂಡ ಪಕ್ಷದ ಕಾರ್ಯಕರ್ತ ಮತ್ತು ಸುಧಾಕರ್ ಅವರ ಸಂಬಂಧಿಯೂ ಹೌದು. ಚುನಾವಣಾ ಪ್ರಕ್ರಿಯೆ ಏನಾಗಿದೆ ಎಂಬುದನ್ಮು ಅವರು ಕೂಡ ಅರ್ಥ ಮಾಡಿಕೊಳ್ಳಲಿ.

ಅವರು ಏನೇ ಟೀಕೆ ಮಾಡಿದರೂ ನಾವೂ ಅವರನ್ನ ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ. ಮಾಜಿ ಸಚಿವರಾಗಿ ಅವರು ಕೂಡ ಕೆಲಸ ಮಾಡಿದ್ದಾರೆ. ಪಕ್ಷ ಏನು ತೀರ್ಮಾನ ಮಾಡುತ್ತೆ ಅದನ್ನ ಹೈಕಮಾಂಡ್ ಹಿರಿಯರು ತೀರ್ಮಾನ ಮಾಡಿರುತ್ತಾರೆ. ಅದರಲ್ಲಿ ಯಾವುದೇ ರೀತಿಯಲ್ಲಿ ನಾನು ಮೂಗು ತೂರಿಸುವ ಕೆಲಸ ಮಾಡಿಲ್ಲ. ಹೀಗಾಗಿ ಇಂಥಹ ಹೇಳಿಕೆಗಳು ಪಕ್ಷಕ್ಕೂ ಗೌರವ ತಂದುಕೊಡುವಂಥದ್ದಲ್ಲ. ವಿಜಯೇಂದ್ರ ಅವರು ತಿದ್ದುಕೊಳ್ಳಬೇಕು ಅಂತಿದ್ದಾರೆ. ಇದು ಅವರ ಆಸೆ ಮಾತ್ರವಲ್ಲ ಇನ್ನು ಹಲವರ ಆಸೆ. ತಿದ್ದುಕೊಳ್ಳುವಂಥದ್ದು ಪ್ರಕ್ರಿಯೆ. ನಾನು ಕೂಡ ತಿದ್ದುಕೊಳ್ಳುತ್ತೇನೆ. ಸುಧಾಕರ್ ಅವರನ್ನು ಭೇಟಿ ಮಾಡ್ತೇನೆ. ಏನನ್ನ ತಿದ್ದುಕೊಳ್ಳಬೇಕು ಎಂಬ ಅಪೇಕ್ಷೆ ಇದೆ ಅದನ್ನು ತಿದ್ದಿಕೊಳ್ಳುತ್ತೇನೆ. ನಾನು ಮನೆ ಮಠ ಬಿಟ್ಟು ಕೆಲಸ ಮಾಡ್ತಾ ಇದ್ದೇನೆ. ಪಕ್ಷ ಅವರ ಸ್ವತ್ತು ಅಲ್ಲ, ನನ್ನ ಸ್ವತ್ತು ಅಲ್ಲ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















