ಸಿದ್ದರಾಮಯ್ಯ ಮತ್ತು ನನ್ನ ನಡುವಿನ ದೋಸ್ತಿ ಬೇರೆನೆ ಇದೆ : ಶ್ರೀರಾಮುಲು

1 Min Read

 

ಬಳ್ಳಾರಿ: ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ. ನನ್ನ ಅವರ ನಡುವೆ ಇರುವ ಸ್ನೇಹವೇ ಬೇರೆ ರೀತಿಯದಾದ್ದು ಎಂದು ಸಚಿವ ಶ್ರೀರಾಮುಲು ಹೊಸ ವಿಚಾರವನ್ನು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರ ವಿರೋಧಿ ಅಲ್ಲ. ಸಿದ್ದು ಸಿಎಂ ಆಗಬೇಕೆಂಬ ಆಸೆ ನನಗೂ ಇದೆ. ನಾನು ಸಿಎಂ ಆಗಬೇಕು ಎಂಬುದನ್ನು ಸಿದ್ದು ಒಪ್ಪುತ್ತಾರೆ. ಇದು ಹಿಂದುಳಿದವರನ್ನು ಒಂದು ಮಾಡುವ ಪ್ರಯತ್ನ. ನಾನು ಸಿದ್ದು ಬಾದಾಮಿಯಲ್ಲಿ ಇಟ್ಟಿಗೆ ಸ್ಪರ್ಧಿಸಿದ್ದೆವು. ಬಾದಾಮಿಯಲ್ಲಿ ಹೇಗೆ ಗೆದ್ದರು ಅಂತ ಅವರನ್ನೇ ಕೇಳಿ.

ನಾನು ಸಿದ್ದರಾಮಯ್ಯ ಅವರ ವಿರೋಧಿಯಲ್ಲ. ಸಿದ್ದರಾಮಯ್ಯ ಮತ್ತು ನನ್ನ ನಡುವಿನ ದೋಸ್ತಿ ಬೇರೆನೆ ಇದೆ. ಒಳಗೊಳಗೆ ನಾವೂ ಏನೋ ಮಾಡಿಕೊಳ್ಳುತ್ತೇವೆ. ಭಗವಂತ ಆಶೀರ್ವಾದ ಮಾಡಿದರೆ ಸಿದ್ದು ಸಿಎಂ ಆಗಲಿ ಎಂದು ಬಳ್ಳಾರಿಯಲ್ಲಿ ಸಚುವ ಶ್ರೀರಾಮುಲು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *