Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಸವ, ಕುವೆಂಪು ಎಂದರೆ ಕನ್ನಡ, ಇಬ್ಬರಿಗೂ ಅವಮಾನವಾದರೆ ಇದ್ದು ಏನು ಪ್ರಯೋಜನ: ಪಾದಯಾತ್ರೆ ಹೊರಟ ಹಂಸಲೇಖ

Facebook
Twitter
Telegram
WhatsApp

ಶಿವಮೊಗ್ಗ: ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪರಿಷ್ಕರಣೆಯಾದ ಪಠ್ಯಪುಸ್ತಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಸವಣ್ಣ, ಅಲ್ಲಮಪ್ರಭು, ಕುವೆಂಪು, ಟಿಪ್ಪು ಸುಲ್ತಾನ ಅವರಿಗೆ ಏಕವಚನ ಬಳಸಿ ಅವಮಾನ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ. ರೋಹಿತ್ ಚಕ್ರತೀರ್ಥ ಮಾಡಿರುವ ಪಠ್ಯಗಳನ್ನು ಮಕ್ಕಳಿಗೆ ನೀಡುವುದು ಬೇಡವೆಂದು ಹೋರಾಟಗಳು ನಡೆಯುತ್ತಿವೆ. ಇದೀಗ ಹೊಸ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ನಾದಬ್ರಹ್ಮ ಹಂಸಲೇಖ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಪಠ್ಯಪುಸ್ತಕದಲ್ಲಿನ ದೋಷ ವಿರೋಧಿಸಿ ಕುಪ್ಪಳ್ಳಿಯಿಂದ ಸಾಂಸ್ಕೃತಿಕ ಸೌಹಾರ್ದ ನಡಿಗೆ ಶುರುವಾಗಿದೆ. ಕುಪ್ಪಳ್ಳಿಯಿಂದ ತೀರ್ಥಹಳ್ಳಿಯ ತನಕ ಈ ನಡಿಗೆ ನಡೆಯಲಿದೆ. ಈ ನಡಿಗೆಯಲ್ಲಿ ಪಾಲ್ಗೊಂಡಿರುವ ನಾದಬ್ರಹ್ಮ ಹಂಸಲೇಖ ಈ ಬಗ್ಗೆ ಮಾತನಾಡಿದ್ದು, ನಮಗೆ ಕನ್ನಡಕ್ಕೆ ಮಹಾಮನೆ ಕಲ್ಯಾಣದಲ್ಲಿ, ಕವಿಶೈಲದಲ್ಲಿ ಗುರುಮನೆ. ಈ ಗುರುಮನೆಯಿಂದ ಇಂದು ನಾವೂ ಒಂದು ಕಹಳೆ ಉದುತ್ತಾ ಇದ್ದೀವಿ. ಅದು ಕುಪ್ಪಳ್ಳಿ ಕಹಳೆ.

ಅವತ್ತು ಗೋಕಾಕ್ ಚಳುವಳಿ, ಇವತ್ತು ಕುಪ್ಪಳ್ಳಿ ಕಹಳೆ. ಇದು ನಾಡಿನಾದ್ಯಂತ ಮೊಳಗಬೇಕು. ಕನ್ನಡಕ್ಕೆ ಕುತ್ತು ಬಂದ ಮೇಲೆ ನಾವಿಲ್ಲಿದ್ದು ಏನು ಮಾಡಬೇಕು. ಬಸವ ಅಂದ್ರೆ ಕನ್ನಡ, ಕುವೆಂಪು ಅಂದ್ರೆ ಕನ್ನಡ, ಬಸವ ಅಂದ್ರೆ ಕರುನಾಡು, ಕುವೆಂಪು ಪುಟ್ಟಪ್ಪ ಎಂದರೆ ಕರ್ನಾಟಕ. ಈ ರೀತಿಯ ಅವಮಾನವಾದರೆ ನಾವಿದ್ದು ಏನು ಮಾಡುವುದು. ನಾಡೇ ಒಂದು ಗೀತೆ, ನಮ್ಮ ನಾಡೇ ಒಂದು ಧ್ವಜ. ಅವೆರಡಕ್ಕೂ ಅವಮಾನವಾದರೆ ನಾವಿದ್ದು ಏನು ಮಾಡುವುದು. ಕನ್ನಡದ ನಡ ಮುರಿಯುವ ನಡೆ ಕನ್ನಡ ನಾಡಲ್ಲಿ ಶುರುವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಾಳೆ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಉತ್ಸವ :   ಸಿದ್ದತೆ ಹೇಗಿದೆ ?

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ.06 : ಸಹೋದರಿಯರ ನಡುವೆ ಜಗಳ, ಮುನಿಸು ಇರುವುದು ಸಹಜ. ಆದ್ರೆ, ಕೋಟೆನಾಡಿನಲ್ಲಿ ಮಾತ್ರ ಮುನಿದು

ಸಿ.ಟಿ ರವಿಯವರು ರಾಜ್ಯದ ಕ್ಷೌರಿಕ ಕ್ಷಮೆ ಕೇಳಬೇಕು : ಎನ್.ಡಿ.ಕುಮಾರ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ.06 : ಯಲ್ಲಾಪುರಲ್ಲಿ ಇತ್ತೀಚಿಗೆ ನಡೆದ ರಾಜಕೀಯ ಸಭೆ ಒಂದರಲ್ಲಿ ಮಾಜಿ ಸಚಿವ ಸಿಟಿ ರವಿಯವರು

ಬೆಂಗಳೂರಿನಲ್ಲಿ ಇಂದು ಜೋರು ಮಳೆ : ಯಾವ ಜಿಲ್ಲೆಯಲ್ಲಿ ಮಳೆಯಾಗಲಿದೆ

ಕಳೆದ ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ಜನಕ್ಕೆ ಮಳೆಯ ಅನುಭವವಾಗಿತ್ತು. ಬಿಸ ಬಿಸಿಯಾಗಿದ್ದ ಭೂಮಿಗೆ ಮಳೆರಾಯ ತಂಪೆರೆದು ಹೋಗಿದ್ದ. ಮತ್ತೆ ನಿನ್ನೆಯೆಲ್ಲಾ ಅದೇ ಬಿಸಿಬಿಸಿ ಅನುಭವ. ಇದೀಗ ಇಂದು ಸಿಲಿಕಾನ್ ಸಿಟಿ ಮತ್ತೆ ತಂಪಾಗಿದೆ‌.

error: Content is protected !!