in ,

ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ರೀಮತಿ ದಯಾ ಪುತ್ತೂರ್ ಕರ್ ಅವರಿಗೆ ಬೀಳ್ಕೊಡುಗೆ

suddione whatsapp group join

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ: ಲೋಕೋಪಯೋಗಿ ಇಲಾಖೆಯಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋ ನಿವೃತ್ತಿಯಾದ ದಯಾ ಪುತ್ತೂರ್ಕರ್ ಗೆ ಬೀಳ್ಕೊಡುಗೆ ನೀಡಲಾಯಿತು.

ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್ ಮಾತನಾಡಿ ದಯಾ ಪುತ್ತೂರು ಕರ್ ರವರ ಕರ್ತವ್ಯ ಪ್ರಜ್ಞೆ, ನಿಷ್ಠೆ, ಪ್ರಾಮಾಣಿಕತೆ, ಬದ್ದತೆ, ಸರಳತೆಯಿತ್ತು. ಹಾಗಾಗಿ ಕಚೇರಿಯಲ್ಲಿ ಎಲ್ಲಾ ಸಿಬ್ಬಂದಿಗಳಿಗೆ ಅಚ್ಚುಮೆಚ್ಚಿನವರಾಗಿದ್ದರು ಎಂದು ಗುಣಗಾನ ಮಾಡಿದರು.

ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಿ.ಕೃಷ್ಣಪ್ಪ ಮಾತನಾಡಿ ವಿವಿಧ ಇಲಾಖೆಗಳಲ್ಲಿ ತುರ್ತು ಕೆಲಸವಿದ್ದಾಗ ದಯಾ ಪುತ್ತೂರ್ಕರ್‍ಗೆ ಜವಾಬ್ದಾರಿಯನ್ನು ವಹಿಸುತ್ತಿದ್ದೆವು. ಆಗ ಅವರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಕೆಲಸದ ಬಗ್ಗೆ ತಮಗಿದ್ದ ಕಾಳಜಿಯನ್ನು ಪ್ರದರ್ಶಿಸುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲೆಕ್ಕಪರಿಶೋಧನಾಧಿಕಾರಿ ಹೆಚ್.ಶಿವಕುಮಾರ್ ಮಾತನಾಡಿ ದಯಾ ಪುತ್ತೂರ್ಕರ್ ತಮ್ಮ ಕರ್ತವ್ಯದ ಅವಧಿಯಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

ಮ್ಯಾನೇಜರ್ ಮಹಮದ್ ಸಾದತ್, ನಾಗವೇಣಿ, ಜಯಂತ್‍ರೆಡ್ಡಿ, ಕಲ್ಪನಾ, ಚಂದ್ರಪ್ಪ, ಬಸವರಾಜ್, ಗೌಸ್, ಶಾನ್ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಶ್ರೀಮತಿ ರೇಣುಕ ಪ್ರಕಾಶ್, ಜಯಪ್ರಕಾಶ್, ಶ್ರೀಮತಿ ಜಯ ಪ್ರಾಣೇಶ್, ಶೋಭ ಮಲ್ಲಿಕಾರ್ಜುನ್, ಡಾ.ಚಾಂದಿನಿ ಖಲೀದ್, ಪೂಜ, ಅಜೆಯ್, ಜಯದೇವಮೂರ್ತಿ, ಮಹೇಶ್ವರಿ, ಶೈಲ, ದೀಪಿಕ ಇನ್ನು ಮುಂತಾದವರು ಹಾಜರಿದ್ದು ದಯಾ ಪುತ್ತೂರ್ಕರ್‍ರವರಿಗೆ ನಿವೃತ್ತ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಿದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸಂಧಾನ ಸಭೆ ವಿಫಲ : ಭವಾನಿ ರೇವಣ್ಣ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ತಾರಾ : ಏನಂದ್ರು ನಿಖಿಲ್..?

ಹಿಂದೂ ರುದ್ರಭೂಮಿ ಸೇವಾ ಸಮಿತಿ ಟ್ರಸ್ಟ್‌ಗೆ ಶ್ರೀಮತಿ ಶಾಂತಮ್ಮ ಮತ್ತು ಪಿ.ಹೆಚ್.ಚನ್ನವೀರಪ್ಪ ಪಟ್ಟಣಶೆಟ್ರು ಸ್ಮರಣಾರ್ಥ ಮುಕ್ತಿವಾಹನ ಕೊಡುಗೆ