Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ : ಸಿಎಂ ಬದಲಾವಣೆ ಬಗ್ಗೆ ಹೇಳಿದ್ದೇನು..?

---Advertisement---

ದೆಹಲಿ: ಸಿಎಂ ಬದಲಾವಣೆಯ ಚರ್ಚೆ ಅಂತು ಈಗ ಇನ್ನಷ್ಟು ಜಾಸ್ತಿಯಾಗಿದೆ. ಡಿಕೆ ಬ್ರದರ್ಸ್ ಅದಕ್ಕಾಗಿ ಪಟ್ಟು ಹಿಡಿದು ಬೆಂಗಳೂರು ಟು ದೆಹಲಿ ಓಡಾಟ ನಡೆಸ್ತಾ ಇದ್ದಾರೆ. ಇದೀಗ ದೆಹಲಿಗೆ ಭೇಟಿ ನೀಡಿರುವ ಸತೀಶ್ ಜಾರಕಿಹೊಳಿ ಈ ಬಗ್ಗೆ ಮಾತನ್ನಾಡಿದ್ದಾರೆ.

ವರಿಷ್ಠರನ್ನ ಭೇಟಿ ಮಾಡಿದ ಬಳಿಕ, ದೆಹಲಿಗೆ ಬಂದಾಗ ಎಲ್ಲರನ್ನು ಭೇಟಿ ಮಾಡಬೇಕು. ಅದು ವಾಡಿಕೆ. ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ಭೇಟಿಯಾಗ್ತೇನೆ. ಸಂಪುಟ ಪುನರ್ ರಚನೆ ವಿಚಾರ, ಸಿಎಂ ಬದಲಾವಣೆ ವಿಚಾರವೆಲ್ಲಾ ಹೈಕಮಾಂಡ್ ಮಾಡಬೇಕು. ಹೈಕಮಾಂಡ್ ಗಮನಕ್ಕೆ ಸುಮಾರು ಸಲ ತಂದಿದ್ದೇವೆ. ಅಂತಿಮವಾಗಿ ಅವರು ನಿರ್ಧಾರ ಮಾಡಬೇಕು. ನಿನ್ನೆ ಕೂಡ ಹೇಳಿದ್ದೇವೆ. ಇದು ಬೇಗ ಇತ್ಯರ್ಥ ಆಗಬೇಕು ಅಂತ. ಗೊಂದಲ ನಿಲ್ಲಬೇಕು ಅಂತ. ಮತ್ತೆ ಅದನ್ನೇ ಹೇಳುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.

ಬೆಂಗಳೂರಲ್ಲಿ ನಿರ್ಧಾರ ಮಾಡುವಂತದ್ದು ಅಲ್ಲ. ದೆಹಲಿಯಲ್ಲಿಯೇ ನಿರ್ಧಾರ ಮಾಡಬೇಕು. ಬಹುಶಃ ಈ ಚುನಾವಣೆಯ ಫಲಿತಾಂಶ ಬಂದ ನಂತರ ಮಾಡಬಹುದು. ಪರಿಹಾರ ಅಂತು ಹೇಳಲೇಬೇಕು. ಮಂತ್ರಿಗಳದ್ದು ಶಾಸಕರದ್ದು ಗೊಂದಲಗಳು ಮೊದಲು ಬಗೆಹರಿಯಬೇಕು ಎಂಬ ಮಾತನ್ನ ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...