Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜಾತಿಗಣತಿಯಲ್ಲಿ ಭೋವಿ, ವಡ್ಡರ್ ಎಂದು ನಮೂದಿಸಿ : ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

 

ಸುದ್ದಿಒನ್, ಚಿತ್ರದುರ್ಗ ಏ. 19 : ತಮ್ಮ ಮನೆಗಳಿಗೆ ಜಾತಿ ಗಣತಿಗೆ ಬರುವವರ ಬಳಿ ನಮ್ಮ ಜಾತಿ ಭೋವಿ,ಉಪಜಾತಿ ವಡ್ಡರ್ ಎಂದು ಬರೆಸುವುದರ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಸರ್ಕಾರದಿಂದ ಸಿಗುವಂತ ವಿವಿಧ ರೀತಿಯ ಸೌಲಭ್ಯವನ್ನು ಪಡೆಯಲು ಅನುಕೂಲ ಮಾಡಿಕೊಡಬೇಕಿದೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಮ್ಮ ಸಮುದಾಯವರಿಗೆ ಕರೆ ನೀಡಿದರು.

ನಗರದ ಹೂರ ವಲಯದಲ್ಲಿನ ಭೋವಿ ಗುರಪೀಠದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತ್ಸೋತ್ಸವ, ಪರಿಶಿಷ್ಟ ಜಾತಿ ಸಮೀಕ್ಷೆ, ಭೋವಿ ಜನಜಾಗೃತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಶ್ರೀಗಳು, ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಒಳ ಮೀಸಲಾತಿಯನ್ನು ಜಾರಿ ಮಾಡಲು ಸೂಚನೆ ನೀಡದೆ ಆದರೆ ಇದರ ಜಾರಿಗೆ ದತ್ತಾಂಶ ಅಗತ್ಯವಾಗಿದೆ ಎಂದು ತಿಳಿಸಿದೆ ಈ ಹಿನ್ನಲೆಯಲ್ಲಿ ಸರ್ಕಾರದ ಬಳಿ ಸರಿಯಾದ ದತ್ತಾಂಶ ಇಲ್ಲದಿರುವುದರಿಂದ ಈಗ ಜಾತಿ ಸಮೀಕ್ಷೆಯನ್ನು ಮಾಡಲು ಮುಂದಾಗಿದೆ ಬಹಶಃ ಮೇ ಮೊದಲವಾರ ಅಥವಾ ಮೇ.10ರ ನಂತರ ನಿಮ್ಮ ಮನೆಗಳಿಗೆ ಜಾತಿ ಸಮೀಕ್ಷೆ ಮಾಡುವ ಜಾತಿ ಗಣತಿದಾರರು ಬರುತ್ತಾರೆ ಈ ಸಮಯದಲ್ಲಿ ನೀವುಗಳು ಜಾತಿಯ ಕಾಲಂನಲ್ಲಿ ಭೋವಿ ಎಂದೂ ಉಪ ಜಾತಿ ಕಾಲಂನಲ್ಲಿ ವಡ್ಡರ್ ಎಂದು ಬರೆಸಬೇಕಿದೆ ಎಂದು ತಿಳಿಸಿ ಇದರ ಬಗ್ಗೆ ನೀವುಗಳು ನಿಮ್ಮ ಗ್ರಾಮ, ತಾಲ್ಲೂಕು, ಜಿಲ್ಲೆಗಳಲ್ಲಿ ಸಮುದಾಯದವರಲ್ಲಿ ಜಾಗೃತಿಯನ್ನು ಮೂಡಿಸಬೇಕಿದೆ ಎಂದು ತಿಳಿಸಿದರು.

ನಿಮ್ಮ ಬಳಿಯಲ್ಲಿ ನಿಮ್ಮ ತಂದೆಯ ಅಥವಾ ತಾತನ ಮನೆ ಇದ್ದರೆ ಆದು ನಿಮ್ಮದ್ದಲ್ಲ ನೀವುಗಳು ನನ್ನ ಬಳಿ ಮನೆ ಇಲ್ಲ ಎಂದು ನಮೂದಿಸಿ, ಇದೇ ರೀತಿ ನೀವುಗಳು ಸಾಲದ ಮೂಲಕ ವಾಹನಗಳನ್ನು ಹೊಂದಿದ್ದರೆ ಅವುಗಳು ಸಹಾ ನಿಮ್ಮದ್ದಲ್ಲ ಅವುಗಳು ನೀವು ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟುವವರೆಗೂ ಬ್ಯಾಂಕ್ ನವರದ್ದು ಈ ಹಿನ್ನಲೆಯಲ್ಲಿ ನೀವುಗಳು ವಾಹನಗಳನ್ನು ಸಾಲದಲ್ಲಿ ಹೊಂದಿದರೆ ಅದರ ಮಾಹಿತಿಯನ್ನು ನೀಡಬೇಡಿ, ಇದೇ ರೀತಿ ಬೇರೆ ಯಾವ ಅಸ್ತಿಯನ್ನು ನೀವುಗಳು ಬೇರೆಯವರಿಂದ ಅದರ ಮಾಹಿತಿಯನ್ನು ಗಣತಿದಾರರಿಗೆ ನೀಡಬೇಡಿ, ನಿಮ್ಮ ಸ್ವಂತ ದುಡಿಮೆ ಇದ್ದರೆ ಮಾತ್ರ ಮಾಹಿತಿ ನೀಡಿ ಎಂದ ಶ್ರೀಗಳು ನೀವುಗಳು ಈಗ ನೀಡುವ ಮಾಹಿತಿಯಿಂದ ನಿಮ್ಮ ಮುಂದಿನ ಪೀಳಿಗೆ ತುಂಬಾ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಗಣತಿದಾರರಿಗೆ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ನೀಡುವಂತೆ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಸಮುದಾಯದ ಮುಖಂಡರಿಗೆ ಕರೆ ನೀಡಿದರು.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಮುಂದಿನ ಮೇನಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಸಭೆಯನ್ನು ಮಾಡಲಾಗುವುದು ಅಲ್ಲಿಗೆ ಬರುವಾಗ ಎಲ್ಲರು ತಮ್ಮ ಗ್ರಾಮದಲ್ಲಿನ ಸಮುದಾಯ ಜನತೆಯ ಮಾಹಿತಿಯನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಕೊಂಡು ಬರಬೇಕಿದೆ ಇದರಿಂದ ನಮಗೆ ಮಂದಿನ ದಿನದಲ್ಲಿ ಉಪಯೋಗವಾಗಲಿದೆ, ಈ ಕಾರ್ಯವನ್ನು ಸಮುದಾಯದವರೆಲ್ಲಾ ಸೇರಿ ಮಾಡಬೇಕಿದೆ ಇದರೊಂದಿಗೆ ಗ್ರಾಮಗಳಲ್ಲಿ ಸಭೆಯನ್ನು ಮಾಡುವುದರ ಮೂಲಕ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವಂತ ಕಾರ್ಯವನ್ನು ಮಾಡುವಂತೆ ತಿಳಿ ಹೇಳಿದರು.

ಶಾಸಕರಾದ ಡಾ.ಎಂ.ಚಂದ್ರಪ್ಪ ಮಾತನಾಡಿ, ನಮ್ಮ ರಾಜ್ಯದಲ್ಲಿ ಸದಾನಂದಗೌಡರವರು ಮುಖ್ಯಮಂತ್ರಿ ಯಾಗಿದ್ದಾಗ ಈ ಒಳ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಹಲವಾರು ವರ್ಷಗಳಿಂದ ಪ್ರಭಾವಿ ವ್ಯಕ್ತಿಗಳಿಂದ ತಯಾರಿ ನಡೆಯುತ್ತಿತ್ತು, ಇದರ ಬಗ್ಗೆ ಸದನದಲ್ಲಿ ನಮ್ಮ ಭೋವಿ ಜನಾಂಗದ ಶಾಸಕರು ಮಂತ್ರಿಗಳು ಸೇರಿ ತಡೆ ಹಿಡಿಯುವಂತ ಕಾರ್ಯವನ್ನು ಮಾಡಲಾಗಿತ್ತು ಇದರ ಬಗ್ಗೆ ಯಾರಿಗೂ ಸಹಾ ಅಷ್ಠಾಗಿ ಗೊತ್ತಿಲ್ಲ, ನಮ್ಮ ಹಂತದಲ್ಲಿ ಈ ಒಳ ಮೀಸಲಾತಿ ಜಾರಿಯಾಗದಂತೆ ತಡೆ ಹಿಡಿಯುವ ಕಾರ್ಯವನ್ನು ಮಾಡಲಾಗಿದೆ. ಈ ಮುಂಚೆ ನಮ್ಮ ಸಮುದಾಯಕ್ಕೆ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಎಸ್.ಸಿ. ಜನಾಂಗಕ್ಕೆ ಸೇರಿಸಿರಲಿಲ್ಲ,ಹರಿಹರದ ಹೊಳೆಯಿಂದ ಆಚೇಗೆ ನಮ್ಮ ಸಮುದಾಯದವರನ್ನು ಸಾಮಾನ್ಯ ವರ್ಗಕ್ಕೆ ಇಡಲಾಗಿತ್ತು ಇದರ ಬಗ್ಗೆ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರಿಗೆ ಇದರ ಬಗ್ಗೆ ಪೂರ್ಣ ಪ್ರಮಾಣದ ವಿಷಯವನ್ನು ತಿಳಿಸಿ ರಾಜ್ಯ ಪೂರ್ಣ ಭೋವಿ ಸಮುದಾಯವನ್ನು ಎಸ್.ಸಿ. ವರ್ಗಕ್ಕೆ ಮಾಡಿಸಲಾಯಿತು. ನಮ್ಮ ಸಮುದಾಯದವರು ಇನ್ನೂ ಸಹಾ ಕಲ್ಲು ಒಡೆಯುವುದರಲ್ಲಿಯೇ ಇದ್ದಾರೆ ಅರ್ಥಿಕವಾಗಿ ಶೃಕ್ಷಣಿಕವಾಗಿ ಹಿಂದೆ ಉಳಿದಿದ್ದಾರೆ, ಇವರು ಪ್ರಗತಿಯನ್ನು ಹೊಂದಬೇಕಾದರೆ ಗುರುಗಳು ಹೇಳಿದ ರೀತಿಯಲ್ಲಿ ಜಾತಿಗಣತಿಯಲ್ಲಿ ಬರೆಸಬೇಕಿದೆ ಎಂದರು.

ಭೋವಿ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ರವಿಕುಮಾರ್ ಮಾತನಾಡಿ, ನಮ್ಮ ಸಮುದಾಯದವರು ನಮ್ಮ ಜಾತಿಯ ಹೆಸರನ್ನು ಹೇಳಲು ಹಿಂದೆ ಮುಂದೆ ನೋಡುತ್ತಿದ್ದಾರೆ ಅಕ್ಕ-ಪಕ್ಕದವರು ಏನು ಅನ್ನುತ್ತಾರೋ ಎಂಬ ಗೀಳು ಅವರನ್ನು ಕಾಡುತ್ತಿದೆ ಇದರಿಂದ ರಾಜ್ಯದಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಾಗಿ ಇದ್ದರೂ ಸಹಾ ಈ ರೀತಿಯ ಮನೋಭಾವದಿಂದ ಕಡಿಮೆ ಎನ್ನುವಂತಾಗಿದೆ, ಜಾತಿಗಣಿತಿಯವರು ಬಂದಾಗ ಜವಾಬ್ದಾರಿಯಿಂದ ವರ್ತಿಸಿ ನಮ್ಮ ಜಾತಿಯ ಹೆಸರನ್ನು ದೈರ್ಯವಾಗಿ ತಿಳಿಸುವುದ್ದಲ್ಲದೆ ಬರೆಯಿಸಬೇಕಿದೆ. ನಮ್ಮ ಸಮುದಾಯದಲ್ಲಿಯೇ ನಮ್ಮಲ್ಲಿ ಒಡಕನ್ನು ಮೂಡಿಸುವ ಕಾರ್ಯವಾಗುತ್ತಿದೆ, ನಮ್ಮ ಹುಟ್ಟು-ಸಾವು ವಡ್ಡರಗೀಯೇ ಇರಬೇಕಿದೆ ನಾವು ವಡ್ಡರು ಎನ್ನುವುದಕ್ಕೆ ಹಿಂಜರಿಯಬಾರದು ಹೆಮ್ಮೆ ಪಡಬೇಕಿದೆ ಎಂದರು.

ನಮ್ಮ ಸಮುದಾಯವರ ಯುವ ಜನತೆ ಇಲ್ಲಿಂದ ಹೋದ ಮೇಲೆ ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಬರುವಂತ ಗ್ರಾಮಗಳಲ್ಲಿ ಜಾತಿಗಂತಿಯವರು ಬಂದಾಗ ಯಾವ ರೀತಿ ಬರೆಸಬೇಕು ಎಂಬುದರ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಿದೆ. ಇದರಿಂದ ನಮ್ಮ ಸಮುದಾಯಕ್ಕೆ ಮುಂದೆ ಆಗಬಹುದಾದ ಅನ್ಯಾಯವನ್ನು ತಡೆಯಬೇಕಿದೆ. ನಮ್ಮ ನಮ್ಮಲ್ಲಿನ ಮೈಮನಸ್ಸು ಬಿಟ್ಟು ಸಮುದಾಯದ ಪ್ರಗತಿಗೆ ಒಂದಾಗಿರಿ, ಮೇನಲ್ಲಿ ನಡೆಯುವ ಜಾತಿ ಜನಗಣತಿಯಲ್ಲಿ ಎಲ್ಲರು ಸಹಾ ಸಕ್ರಿಯವಾಗಿ ಭಾಗವಹಿಸಿ ನಮ್ಮ ಜಾತಿಯ ಹೆಸರನ್ನು ತಪ್ಪದೆ ಬರೆಸಬೇಕಿದೆ ಎಂದರು.

ಹೆಚ್,ಅನಂದಪ್ಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು, ರವಿ ಪೂಜಾರ್ ಪ್ರಸ್ತಾವಿಕವಾಗಿ ಮಾತನಾಡಿದರು ಭೋವಿ ಗುರುಪೀಠದ ಸಿಇಓ ಗೋವಿಂದಪ್ಪ ಕಾರ್ಯಕ್ರಮ ನಿರೂಪಿಸಿದರು. ತದ ನಂತರ ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತ್ಸೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ್, ದೊಡ್ಡರಂಗಣ್ಣ, ಗೋಪಾಲ್, ಲಕ್ಷ್ಮಣ್ ರಾಡಿ ವಡ್ಡರ್, ಬಾಲಕೃಷ್ಣ ಬಸವರಾಜು, ವೆಂಕಟೇಶ್, ರಾಮು, ಸಿದ್ದರಾಮು ಜಯ್ಯಣ್ಣ, ರಾಮಾಂಜನೇಯ, ಪರಶುರಾಮ್. ಉಮಾ ಗಾದ್ದಪ್ಪ ಶಶಿಕಲಾ, ಮುನಿರಾಜು, ತಿಮ್ಮಯ್ಯ, ಮುನಿಯಪ್ಪ ಹನುಮಂತಪ್ಪ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಿಲ್ಲಾ, ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment