ಸುದ್ದಿಒನ್, ದಾವಣಗೆರೆ, ಜನವರಿ.21 : ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾನಗರದ ಉದ್ಯಾನದಲ್ಲಿ
‘ಸೂಪರ್ ಮಾಮ್ಸ್ ಆಫ್ ದಾವಣಗೆರೆ’ ಮಹಿಳಾ ತಂಡದ ಸದಸ್ಯೆಯರು ದೀಪ ಬೆಳಗುವ ಮೂಲಕ ‘ಶ್ರೀರಾಮ ದೀಪಾವಳಿ’ ಆಚರಿಸಿದರು.

ಇದಕ್ಕೂ ಮೊದಲು ಸೂಪರ್ ಮಾಮ್ಸ್ ಆಫ್ ದಾವಣಗೆರೆ ವತಿಯಿಂದ ಮಹಿಳೆಯರು ವಿದ್ಯಾನಗರದ ಶಿವ ಪಾರ್ವತಿ ದೇವಾಲಯದಿಂದ ಶ್ರೀ ರಾಮ ನಾಮ ಜಪಿಸುತ್ತಾ ಉದ್ಯಾನದವರೆಗೆ ಮೆರವಣಿಗೆ ನಡೆಸಿದರು.
ಬಳಿಕ ಉದ್ಯಾನದಲ್ಲಿ ರಂಗೋಲಿಯಲ್ಲಿ ಅರಳಿದ ಶ್ರೀ ರಾಮನಿಗೆ ಜ್ಯೋತಿ ಬೆಳಗುವ ಮೂಲಕ ಪ್ರಾರ್ಥನೆ ಸಲ್ಲಿಸಿ, ಜೈ ಶ್ರೀರಾಮ್ ಘೋಷಣೆ ಕೂಗಿದರು. ರಂಗೋಲಿಯಲ್ಲಿ ಮೂಡಿದ್ದ ಶ್ರೀರಾಮನ ಚಿತ್ರದ ಸುತ್ತ ದೀಪಗಳನ್ನು ಇಟ್ಟು ಸಂಭ್ರಮಿಸಿದರು.
‘ಜನವರಿ 22ರಂದು ಮನೆಯಲ್ಲಿ ವಿಶೇಷ ಪೂಜೆ ಮಾಡುತ್ತಿದ್ದು, ಎರಡನೇ ದೀಪಾವಳಿಯಂತೆ ಆಚರಿಸುತ್ತೇವೆ. ಆ ದಿನ ಅಯೋಧ್ಯೆಗೆ ಹೋಗಲು ಆಗದ ಹಿನ್ನೆಲೆಯಲ್ಲಿ ಒಟ್ಟಾಗಿ ಸೇರಿ ರಾಮನಿಗೆ ನಮನ ಸಲ್ಲಿಸಲಿದ್ದೇವೆ’ ಎಂದು ತಂಡದ ಸದಸ್ಯೆಯರು ತಿಳಿಸಿದರು.
ಇದೇ ವೇಳೆ ಮಕ್ಕಳು ಶ್ರೀರಾಮ, ಸೀತೆ ಹಾಗೂ ಹನುಮಂತನ ವೇಷ ಧರಿಸಿ ಎಲ್ಲರ ಗಮನ ಸೆಳೆದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















