Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಾರ ಎತ್ತಿದರೆ ಹೊಟ್ಟೆನೋವು ಬರುತ್ತಾ..? ಹರ್ನಿಯಾ ಆಗಿರಬಹುದು ಎಚ್ಚರ..!

Facebook
Twitter
Telegram
WhatsApp

ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಕೆಲವೊಂದು ಕಾಯಿಲೆಗೆ ಮೊದಲೇ ರೋಗ ಲಕ್ಷಣಗಳು ಕಂಡು ಬರುತ್ತವೆ. ಆ ಬಗ್ಗೆ ನಾವೂ ಎಚ್ಚರಗೊಳ್ಳಬೇಕಾಗುತ್ತದೆ. ಕೆಲವೊಂದು ರೋಗ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಗೆ ತೋರಿಸುವುದು ಉತ್ತಮ. ಅದರಲ್ಲೂ ಭಾರ ಎತ್ತುವಾಗ ನಿಮಗೆ ಹೊಟ್ಟೆ ನೋವು ಬಂದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಅದು ಹರ್ನೀಯಾದ ಲಕ್ಷಣವೂ ಆಗಿರಬಹುದು.

ಈ ಹರ್ನಿಯಾ ಎಂದರೇನು..? ಯಾವ ರೀತಿಯ ಸಮಸ್ಯೆ ಕಾಡುತ್ತದೆ..?

ಹರ್ನಿಯಾ ಎಂದರೆ ಒಂದು ಅಂಗ ಅಥವಾ ಫ್ಯಾಟಿಯ ಅಂಗಾಂಶ ತನ್ನ ಸುತ್ತಲಿನ ಮಾಂಸ ಖಂಡದ ಕನೆಕ್ಟಿವ್ ಟಿಶ್ಯೂನ ಯಾವುದಾ ದರೂ ದುರ್ಬಲ ಭಾಗದಿಂದ ಹೊರಬಂದಂತಹ ಸಂದರ್ಭ ವನ್ನು ಹರ್ನಿಯಾ ಎಂದು ಕರೆಯಲಾಗುತ್ತದೆ. ಹರ್ನಿಯಾ ಸಮಸ್ಯೆಯಲ್ಲಿ ಬೇರೆ ಬೇರೆ ವಿಧಗಳಿವೆ. ಅದರಲ್ಲಿ ಹೊಟ್ಟೆಯ ಭಾಗದ ಹರ್ನಿಯಾ ಸಾಮಾನ್ಯವಾಗಿ ಕಂಡು ಬರುತ್ತದೆ. ಹೊಟ್ಟೆಯ ದುರ್ಬಲ ಭಾಗದ ಮೂಲಕ ಕರುಳು ಹೊರ ಬಂದರೆ ಈ ರೀತಿ ಆಗುತ್ತದೆ. ಪ್ರತಿದಿನ ಯಾರು ಜಾಸ್ತಿ ಭಾರ ಎತ್ತುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತಾರೆ ಅವರಿಗೆ ಈ ರೀತಿ ಆಗುತ್ತದೆ.​

ಹರ್ನಿಯಾ ಸಮಸ್ಯೆ ಇದ್ದರೆ ಚರ್ಮ ಊದಿಕೊಳ್ಳುತ್ತದೆ. ನಿಂತಾಗ, ಕೂತಾಗ, ಭಾರದ ವಸ್ತು ಎತ್ತಿದಾಗ ಈ ಸಮಸ್ಯೆ ಕಾಣಿಸಿಕೊಳ್ಳಲಿದೆ.

* ಇದರ ಲಕ್ಷಣಗಳೆಂದರೆ, ಬಾಗಿದಾಗ, ಭಾರ ಎತ್ತಿದಾಗ ನೋವು ಕಾಣಿಸಿಕೊಳ್ಳುವುದು
* ಹೊಟ್ಟೆ ಊದಿಕೊಂಡಂತೆ ಕಾಣಿಸುವುದು
* ವಾಕರಿಕೆ, ವಾಂತಿ ಮತ್ತು ಜ್ವರ ಕಾಣಿಸುವುದು.

* ಒಂದು ವೇಳೆ ನಿಮಗೆ ಹರ್ನಿಯಾದ ಯಾವುದೇ ರೋಗ ಲಕ್ಷಣ ಗಳು ಇದ್ದರೆ, ಸೂಕ್ತವಾದ ಚಿಕಿತ್ಸೆಗಾಗಿ ತಕ್ಷಣವೇ ಡಾಕ್ಟರ್ ಬಳಿ ತೋರಿಸಿ ಕೊಳ್ಳಿ. ನಿಮಗೆ ಹರ್ನಿಯಾ ಯಾವ ಪ್ರಮಾಣದಲ್ಲಿದೆ ಎನ್ನುವುದರ ಆಧಾರದ ಮೇಲೆ ಶಸ್ತ್ರಚಿಕಿತ್ಸೆಯ ಪ್ರಮಾಣ ಅವಲಂಬಿತ ವಾಗಿರುತ್ತದೆ. ಅಕ್ಕ ಪಕ್ಕದ ಅಂಗಾಂಗಗಳಿಗೆ ತೊಂದರೆಯಾಗ ದಂತೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.​

Facebook
Twitter
Telegram
WhatsApp
suddionenews

suddionenews

Leave a Comment

Top Stories

30 ವರ್ಷದಿಂದ ಸೀರೆಯನ್ನೇ ತೆಗೆದುಕೊಳ್ತಿಲ್ಲ : ಸರಳತೆಯಿಂದಾನೇ ಮತ್ತೆ ಮನಸ್ಸು ಗೆದ್ದ ಸುಧಾಮೂರ್ತಿ, ಹೇಳಿದ್ದೇನು..?

ಬೆಂಗಳೂರು: ಸುಧಾಮೂರ್ತಿ ಅಂದ್ರೆ ಸರಳತೆಯಿಂದಾನೇ ಯುವಕರಿಗೆ ಸ್ಪೂರ್ತಿಯಾದವರು. ಅವರ ನಡವಳಿಕೆ, ಅವರ ಮಾತುಗಳು ಎಲ್ಲರನ್ನು ಆಕರ್ಷಿಸುತ್ತದೆ. ಕೋಟ್ಯಾಧೀಶ್ವರರೇ ಆದರು ಸಿಂಪಲ್ ಆಗಿ ಇರುವುದಕ್ಕೆ ಇಷ್ಟ ಪಡುತ್ತಾರೆ. ಇದೀಗ ಕಳೆದ 30 ವರ್ಷದಿಂದ ಸೀರೆಯನ್ನೇ ಕೊಂಡುಕೊಂಡಿಲ್ಲ

ಇತಿಹಾಸ ನಿರ್ಮಿಸಿದ ಬಜಾಜ್; ವಿಶ್ವದ ಮೊದಲ CNG ಬೈಕ್ ಬಿಡುಗಡೆ ಮಾಡಿದ ಭಾರತೀಯ ಕಂಪನಿ; ಮೈಲೇಜ್ ಕೂಡ ಸೂಪರ್

• ಹಲವು ವರ್ಷಗಳಿಂದ ಸುದ್ದಿಯಲ್ಲಿದ್ದ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಬಿಡುಗಡೆಗೆ ಕೊನೆಗೂ ತೆರೆ ಬಿದ್ದಿದೆ. ಭಾರತೀಯ ಆಟೋಮೊಬೈಲ್ ಕಂಪನಿ ಬಜಾಜ್ ಶುಕ್ರವಾರ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ | ಅದ್ದೂರಿಯಾಗಿ ನೆರವೇರಿದ ಮೊದಲ ದಿನದ ಕಾರ್ಯಕ್ರಮ

ಸುದ್ದಿಒನ್, ಚಿತ್ರದುರ್ಗ, ಜುಲೈ.05 :ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ ಹಾಗೂ ದ್ವಿತೀಯ ಮಹಾ ಕುಂಭಾಭಿಷೇಕ ಮಹೋತ್ಸವ ಅಂಗವಾಗಿ ಮೊದಲ ದಿನವಾದ ಇಂದು ಸಂಜೆ ಕೇರಳದ ತಂತ್ರಿಗಳಾದ ವಿಷ್ಣು ಭಟ್ಟಾದ್ರಿ ಪಾಡ್ ಹಾಗೂ ದೇವಸ್ಥಾನದ

error: Content is protected !!