Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿಕೆಶಿನೆ ನಮಗೆ ಸಿಎಂ.. ರಾಜಣ್ಣ ಹೋದ್ಮೇಲೆ ಫುಲ್‌ ಖುಷಿಯಾಗವ್ರೆ : ಕಾಲೆಳೆದ ಆರ್ ಅಶೋಕ್

---Advertisement---

ಬೆಂಗಳೂರು: ಇಂದಿನ ಅಧಿವೇಶನದಲ್ಲಿ ಆರ್ ಅಶೋಕ್ ಅವರು ಡಿಕೆಶಿ ಅವರ ಕಾಲೆಳೆದಿದ್ದೇ ಹೆಚ್ಚಾಯ್ತು. ಇಂದು ಒಳ ಮೀಸಲಾತಿಗೆ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಗೆ ಕೊಟ್ಟಾಯ್ತು. ಈ ಬಗ್ಗೆ ಸದನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡುತ್ತಾ, ಅವರೆಲ್ಲ ತುಂಬಾ ಖುಷಿಯಾಗಿದ್ದಾರೆ. 25 ವರ್ಷದಿಂದ ಆ ಸಮಸ್ಯೆಯನ್ನ ಕಾಂಗ್ರೆಸ್ ಬಗೆಹರಿಸಿದೆ. ಆ ಚರ್ಚೆಯನ್ನ ಇಲ್ಲಿಗೆ ಬಿಡೋಣಾ ಎಂದು ಹೇಳಿ ಕುಳಿತುಕೊಂಡರೆ, ಆರ್ ಅಶೋಕ್ ಚರ್ಚೆ ಶುರು ಮಾಡಿದ್ದಾರೆ.

ಡಿಕೆ ಶಿವಕುಮಾರ್ ಅವರು ರಾಜಣ್ಣ ಹೋದ್ಮೇಲೆ ಬಹಳ ಫಾಸ್ಟ್ ಆಗ್ಬಿಟ್ಟಿದ್ದಾರೆ. ಬಹಳ ಆಕ್ಟೀವ್ ಆಗ್ಬಿಟ್ಟಿದ್ದಾರೆ. ಕಳೆ ಬಂದಿದೆ. ಅವರು ಏನು ಹೇಳಿದ್ರು ನಮ್ಮ ಪಾರ್ಟಿಯ ಎಸ್ಸಿಎಸ್ಟಿ ಬಹಳ ಖುಷಿಯಾಗಿದ್ದಾರೆ ಅಂತ. ಸರಿ ಅವರ ಮಾತಿಗೆ ನಾನು ಬರ್ತೀನಿ, ಮಾತಾಡಲ್ಲ ಕುಳಿತುಕೊಳ್ತೀನಿ. ಕ್ಲಾರಿಟಿ ಕೊಡ್ಲಿ ಎಂದು ಕಾಲೆಳೆದಿದ್ದಾರೆ. ಈ ವೇಳೆ ಸ್ಪೀಕರ್ ಅವರು ನೀವ್ ನೀವೇ ಮಾತಾಡಿದ್ರೆ ನಾನ್ಯಾಕೆ ಇಲ್ಲಿ ಕೂತಿರೋದು ಎಂದಿದ್ದಾರೆ.

ನಮಗೆ ಡಿಕೆ ಶಿವಕುನಾರ್ ಅವರೇ ಸಾಕು. ಅವರಿಗೆ ಸಿಎಂ ಅಂತೀವಿ. ಸಿಎಂ ಬೇಕಾಗಿಲ್ಲ ಡಿಕೆ ಶಿವಕುಮಾರ್ ಅವರೇ ಸಿಎಂ. ನೀವೂ ಪ್ರಶ್ನೆಗೆ ಅವಕಾಶವನ್ನೇ ಕೊಡದೆ ಇದ್ದರೆ ಸರ್ಕಾರ ಏನೋ ಮುಚ್ಚಿಡ್ತಾ ಇದೆ ಅಂತಾನೇ ಅರ್ಥ. ಉತ್ತರ ಆಮೇಲೆ ಕೊಡಲಿ ಮೊದಲು ಪ್ರಶ್ನೋತ್ತರಕ್ಕೆ ಅವಕಾಶ ಕೊಡಲಿ. ದಲಿತರನ್ನೆಲ್ಲಾ ಮೀಟಿಂಗ್ ಕರೆದಿದ್ರು ಪರಮೇಶ್ವರ್ ಅವರು. ಊರಿಗೆ ಬಂದವಳು ನೀರಿಗೆ ಬಂದೇ ಬರ್ತಾರೆ. ಮುಚ್ಚಿಡುವಂತದ್ದು ಏನಿದೆ ಅಲ್ಲಿ. ಅಧ್ಯಕ್ಷರೇ ಮುಖ್ಯಮಂತ್ರಿಗಳು ಬರುವ ತನಕ ಚರ್ಚೆ ಮಾಡೋಣಾ. ಇದು ದಲಿತರಿಗೆ, ರಾಜ್ಯಕ್ಕೆ ಸಂಬಂಧಪಟ್ಟದ್ದು. ಸರ್ಕಾರ ಮಾಡಿರುವುದು ಸರೀನಾ, ತಪ್ಪಾ ವಿಶ್ಲೇಷಣೆ ಮಾಡುವುದು ವಿರೋಧ‌ ಪಕ್ಷಕ್ಕೆ ಸಂಬಂಧಿಸಿದ್ದು ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment