Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪುಷ್ಪ-2 ಪೋಸ್ಟರ್ ನಲ್ಲಿ ಅಲ್ಲು ಅರ್ಜುನ್ ಹಿಂದೂ ಭಾವನೆಗೆ ಧಕ್ಕೆ ತಂದರಾ..?

---Advertisement---

ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ನೋಡಿದವರೆಲ್ಲಾ ದಂಗಾಗಿ ಹೋಗಿದ್ದರು. ಪುಷ್ಪ2 ಸಿನಿಮಾ ಬರುತ್ತೆ ಎಂದು ತಿಳಿದ ಮೇಲೆ ಹೆವಿ ಎಕ್ಸ್ಪೆಕ್ಟೇಷನ್ಸ್ ಇಟ್ಟುಕೊಳ್ಳಲಾಯಿತು. ವರ್ಷವೇ ಕಳೆದರೂ ಅದರ ಕ್ರೇಜ್ ಮಾಸಲಿಲ್ಲ, ಡಿಮ್ಯಾಂಡ್ ಕಮ್ಮಿಯಾಗಲಿಲ್ಲ, ಅಭಿಮಾನಿಗಳಂತು ಕಾತುರದಿಂದ ಕಾಯುತ್ತಿದ್ದರು. ಆ ಕಾತುರಕ್ಕೆ ಅಲ್ಲು ಅರ್ಜುನ್ ಹುಟ್ಟು ಹಬ್ಬದ ದಿನ ಒಂದು ಝಲಕ್ ರಿಲೀಸ್ ಮಾಡಲಾಗಿತ್ತು.

ಅಲ್ಲು ಅರ್ಜುನ್ ಹುಟ್ಟುಹಬ್ಬದ ಉಡುಗೊರೆಯಾಗಿ ಒಂದು ಸಣ್ಣ ಟೀಸರ್ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಅಲ್ಲು ಅರ್ಜುನ್ ಲುಕ್ ರಿವೀಲ್ ಆಗಿತ್ತು. ಮೈಮೇಲೆ ಸೀರೆಯುಟ್ಟು, ಬಳೆ ತೊಟ್ಟು, ಹಣೆಗೆ ದೊಡ್ಡ ತಿಲಕವಿಟ್ಟು ಕಾಳಿ ಮಾತೆಯಂತೆ ಕಾಣುತ್ತಿದ್ದ ಅಲ್ಲು ಅರ್ಜುನ್, ಕೈನಲ್ಲಿ ಗನ್ ಕೂಡ ಹಿಡಿದಿದ್ದರು. ಇದೀಗ ಈ ವೇಷ ವಿರೋಧಕ್ಕೆ ಕಾರಣವಾಗಿದೆ. ಹಿಂದೂ ಭಾವನೆಗೆ ಧಕ್ಕೆ ತಂದಿದೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್ ದೇವಿಯಾಗಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದ್ದಂತೆ ಸಿನಿಮಾದ ಬಾಯ್ಕಾಟ್ ಗೆ ಒತ್ತಾಯಿಸಲಾಗಿದೆ. ಹಿಂದೂ ಭಾವನೆಗೆ ಧಕ್ಕೆ ಮಾಡಲಾಗಿದೆ, ಈ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುತ್ತಿದ್ದಾರೆ ಕೆಲ ಸಂಘಟನೆಗಳು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...