ನನಗೆ ಆ ಇಬ್ಬರು ಶತ್ರುಗಳ ಸಮಾನವೇ : ಸಿಪಿ ಯೋಗಿಶ್ವರ್ ಹೇಳಿದ್ದು ಯಾರಿಗೆ..?

suddionenews
1 Min Read

ರಾಮನಗರ: ಸಿಪಿ ಯೋಗೀಶ್ವರ್ ಆಗಾಗ ಹೆಚ್ಡಿಕೆ ಹಾಗೂ ಡಿಕೆ ಬ್ರದರ್ಸ್ ಬಗ್ಗೆ ಹರಿಹಾಯ್ತಾ ಇರ್ತಾರೆ. ಇದೀಗ ಆ ಇಬ್ಬರು ನನ್ನ ಸಮಾನ ಶತ್ರುಗಳು ಎಂದಿದ್ದಾರೆ.

ರಾಮನಗರ, ಚನ್ನಪಟ್ಟಣ ಕಡೆ ಜೆಡಿಎಸ್ ತನ್ನ ಪ್ರಾಬಲ್ಯ ಮೆರೆದಿದೆ. ಆದ್ರೆ ಇದೀಗ ಬಿಜೆಪಿ ಎಂಎಲ್ಸಿ ಸಿ ಪಿ ಯೋಗೀಶ್ವರ್ ನೇತೃತ್ವದಲ್ಲಿ ಹಲವು ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ. ಈ ವಿಚಾರವನ್ನು ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಕ್ಷೇತ್ರದ ಉದಾಸೀನತೆ ಹಾಗೂ ಅವರ ಆಡಳಿತದಿಂದ ಬೇಸತ್ತು ಬಿಜೆಪಿ ಸೇರುತ್ತಿದ್ದಾರೆ. ಕ್ಷೇತ್ರದ ಜನಕ್ಕೆ ಕುಮಾರಸ್ವಾಮಿ ಮೇಲೆ ಹತಾಶ ಮನೋಭಾವ ಬೆಳೆದಿದೆ.

ನಾನು ಚನ್ನಪಟ್ಟಣದಲ್ಲಿ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ಹಣ ಕೊಟ್ಟು ಕಾರ್ಯಕರ್ತರನ್ನ ಬಿಜೆಪಿಗೆ ಸೆಳೆಯಲು ಇದು ಚುನಾವಣಾ ಸಮಯವೇನು ಅಲ್ಲ. ಜೆಡಿಎಸ್ ಪಕ್ಷದಿಂದ ಬೇಸತ್ತು ಸ್ವಯಂಪ್ರೇರಿತರಾಗಿ ಬಿಜೆಪಿ ಪಕ್ಷ ಸೇರುತ್ತಿದ್ದಾರೆ. ಕುಮಾರಸ್ವಾಮಿ ಇತ್ತೀಚೆಗೆ ಮುಂಜಾನೆ ಎದ್ದು ಕ್ಷೇತ್ರಕ್ಕೆ ಬರ್ತಿದ್ದಾರೆ. ತಿಥಿ ಮದುವೆಗಳಲ್ಲಿ ಭಾಗವಹಿಸುತ್ತಿದ್ದಾರೆ. ನಾನು ಕ್ಷೇತ್ರ ಪ್ರವಾಸ ಕೈಗೊಂಡ ಮೇಲೆ ಅವರು ಆ್ಯಕ್ಟೀವ್ ಆಗಿದ್ದಾರೆಂದು ವ್ಯಂಗ್ಯವಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *