ಚಿತ್ರದುರ್ಗ. ಮಾ.05: ಚಿತ್ರದುರ್ಗ ನಗರದ ಬೆಂಗಳೂರು ಸರ್ವಿಸ್ ರಸ್ತೆಯ ಎಂ.ಎಸ್.ನಾರಾಯಣ ಶೆಟ್ಟಿ ಪಂಪ್ನಲ್ಲಿ ಮಂಗಳವಾರ ಸಿಎನ್ಜಿ ಅನಿಲ ಸೋರಿಕೆ ತಡೆಗಟ್ಟುವಿಕೆ ಸಂಬಂಧ ಅಣಕು ಪ್ರಾತ್ಯಕ್ಷಿತೆ ಕಾರ್ಯಾಚರಣೆ ನಡೆಯಿತು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಮಹಾನಗರ ಗ್ಯಾಸ್ ಲಿಮಿಟೆಡ್ ಉದ್ಯಮದ ಯೂನಿಸನ್ ಎನ್ವಿರೋ ಪ್ರೈವೆಟ್ ಲಿಮಿಟೆಡ್ನ ಅವರ ಸಹಯೋಗದಲ್ಲಿ ಅನಿಲ ಸೋರಿಕೆ ಸಂದರ್ಭದ ಬಿಕ್ಕಟ್ಟನ್ನು ಹೇಗೆ ನಿರ್ವಹಿಸಬೇಕು ಎಂಬುವುದರ ಕುರಿತು ಅಣಕು ಕಾರ್ಯಾಚರಣೆ ಪ್ರದರ್ಶನ ನಡೆಸಲಾಯಿತು. ಅಣಕು ಕಾರ್ಯಾಚರಣೆಯು ಪರಿಸ್ಥಿತಿಯ ನೈಜ ಚಿತ್ರಣವನ್ನು ಕಟ್ಟಿಕೊಟ್ಟಿತು.

ಈ ಸಂದರ್ಭದಲ್ಲಿ ಚಿತ್ರದುರ್ಗ ಉಪವಿಭಾಗಾಧಿಕಾರಿ ಮೆಹಬೂಬ್ ಜೀಲಾನಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್ ವಿ ಅಗಡಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಹೆಚ್.ಎನ್.ಸಮರ್ಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್, ಮಹಾನಗರ ಗ್ಯಾಸ್ ಲಿಮಿಟೆಡ್ ಉದ್ಯಮದ ಯೂನಿಸನ್ ಎನ್ವಿರೋ ಪ್ರೈವೆಟ್ ಲಿಮಿಟೆಡ್ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಪಂಕಜ್ ಕುಮಾರ್ ಮೌರ್ಯ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


