ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಆ. 20 : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕು ನಾಗರಮುನ್ನೋಳಿಯಲ್ಲಿನ ಮಾನವ ಜೀವನದ ಬೆಳಕು ಕವಿತ್ತ ಕರ್ಮಮಣಿ ಫೌಂಡೇಶನ್ (ರಿ), ವತಿಯಿಂದ ಚಿತ್ರದುರ್ಗದ ಕವಿಯತ್ರಿಯಾದ ಶ್ರೀಮತಿ ಆರ್. ಶೈಲಜಾ ಬಾಬು ರವರಿಗೆ ‘ಸಾಹಿತ್ಯ ವಿಭೂಷಣ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಫೌಂಡೇಶನ್ನ ಅಧ್ಯಕ್ಷರಾದ ಲಾಲಸಾಬ ಹೆಚ್ ಪೆಂಡಾರಿ ತಿಳಿಸಿದ್ದಾರೆ.
ಮಾನವ ಜೀವನದ ಬೆಳಕು ನಮ್ಮ ‘ಕವಿತ್ತ ಕರ್ಮಮಣಿ ಪೌಂಡೇಶನ್’ನ ಸಂಚಾಲಕ ಮಂಡಳಿಯು ತಮ್ಮ ಸಾಹಿತ್ಯ, ಭಾಷೆ, ನೆಲ-ಜಲ, ಸಂಸ್ಕೃತಿ, ಸಂಗೀತ, ಕಲೆ ಮೊದಲಾದ ಕ್ಷೇತ್ರಗಳಲ್ಲಿಯ ಗಣನೀಯ ಸೇವೆ-ಸಾಧನೆ, ಜ್ಞಾನ ಮತ್ತು ಪ್ರೀತಿಯನ್ನು ಗುರುತಿಸಿ ಕವಿಯತ್ರಿಯಾದ ಶ್ರೀಮತಿ ಆರ್. ಶೈಲಜಾ ಬಾಬು ರವರನ್ನು ‘ಸಾಹಿತ್ಯ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯನ್ನು ದಿನಾಂಕ ಆ. 23 ಆಗಸ್ಟ್ 2026 ರಂದು ನಡೆಯಲಿರುವ ‘ರಾಷ್ಟ್ರಮಟ್ಟದ ಕವಿಗೋಷ್ಠಿ ಹಾಗೂ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ನೀಡಲಾಗುವುದು ಎಂದು ಕೆ ಕೆ ಫೌಂಡೇಶನ್ (ರಿ)ನ ಅಧ್ಯಕ್ಷರಾದ ಲಾಲಸಾಬ ಹೆಚ್ ಪೆಂಡಾರಿ ತಿಳಿಸಿದ್ದಾರೆ.










