ಚಿತ್ರದುರ್ಗ | ರಕ್ಷಣೆ ಕೋರಿ ಪೋಷಕರ ವಿರುದ್ದ ಪ್ರೇಮಿಗಳ ದೂರು..!

1 Min Read

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 16 : ಪ್ರೀತಿಸಿ ಮದುವೆಯಾದ ಜೋಡಿಯೊಂದು ನಮಗೆ ತಂದೆ-ತಾಯಿಯಿಂದಾನೇ ಜೀವ ಬೆದರಿಕೆ ಇದೆ. ರಕ್ಷಣೆ ಕೊಡಿ ಎಂದು ಎಸ್.ಪಿ. ಅವರಿಗೆ ಮನವಿ ಮಾಡಿದ್ದಾರೆ. ಹಿರಿಯೂರು ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದ ಅಮೃತಾ ಹಾಗೂ ಮಾರುತಿ ರಕ್ಷಣೆ ಕೋರಿದ ಪ್ರೇಮಿಗಳು.

ಮಾರುತಿ, ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೃತಾ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಇಬ್ಬರು ಒಂದೇ ಗ್ರಾಮದವರು ಹಾಗೇ ಸಂಬಂಧಿಕರು ಕೂಡ. ಚಿಕ್ಕಂದಿನಿಂದಲೂ ಇಬ್ಬರಿಗೊಬ್ಬರು ಜೊತೆಗೆ ಬೆಳೆದವರು. ಈಗ ಪ್ರೀತಿಯಾಗಿದೆ. ಐದು ವರ್ಷದ ಪ್ರೀತಿಯನ್ನ ಉಳಿಸಿಕೊಳ್ಳುವ ಸಲುವಾಗಿ ಇಬ್ಬರು ಮನೆ ಬಿಟ್ಟು ಬಂದಿದ್ದಾರೆ. ಮದುವೆ ಕೂಡ ಆಗಿದ್ದಾರೆ. ಆದರೆ ಇದಕ್ಕೆ ಮನೆಯವರಿಂದ ವಿರೋಧವಿದೆ.

ಈ ಸಂಬಂಧ ಮಾರುತಿ ಮಾತನಾಡಿ, ನಾವೂ ಐದು ವರ್ಷದಿಂದ ಪ್ರೀತಿ ಮಾಡ್ತಾ ಇದ್ದೀವಿ. ಆದರೆ ಮನೆಯಲ್ಲಿ ಅವಳಿಗೆ ತುಂಬಾ ಕಿರುಕುಳ ಕೊಡ್ತಾ ಇದ್ದಾರೆ. ಅವ್ಳು ನಾನೇ ಬೇಕು ಅಂತ ಬಂದಿದ್ದಾಳೆ. ಪ್ರಾಣ ತೆಗೆಯುವ ಬೆದರಿಕೆಯನ್ನು ಹಾಕ್ತಾ ಇದ್ದಾರೆ‌. ಅವರ ಅಪ್ಪ, ಅಮ್ಮ, ದೊಡ್ಡಪ್ಪ ಅವರೆಲ್ಲಾ ಪ್ರಾಣ ಬೆದರಿಕೆ ಹಾಕ್ತಾ ಇದ್ದಾರೆ. ಹೀಗಾಗಿಯೇ ನ್ಯಾಯ ಕೇಳುವುದಕ್ಕೆ ಬಂದಿದ್ದೇವೆ‌ ಎಂದಿದ್ದಾರೆ.

ಅಮೃತಾ ತಮ್ಮ ಪ್ರೀತಿ ಬಗ್ಗೆ ಮಾತನಾಡಿ, ನಾವಿಬ್ಬರು ಐದು ವರ್ಷದಿಂದ ಲವ್ ಮಾಡ್ತಾ ಇದ್ದೆವು. ಆದ್ರೆ ಮನೆಯಲ್ಲಿ ವಿರೋಧವಿತ್ತು. ಅವನಿಗೆ ಹುಷಾರು ಬೇರೆ ಇರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಹೋಗಿ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದೆ. ನನ್ನ ಸ್ವಯಿಚ್ಛೆಯಿಂದಾನೇ ನಾನು ಬಂದಿದ್ದೀನಿ, ನಾನೇ ಕರೆದುಕೊಂಡು ಬಂದಿದ್ದೀನಿ. ಇದಕ್ಕೆ ಮನೆಯವರಿಂದ ಕಿರುಕುಳ ಇದೆ. ನಾವಿಬ್ಬರು ಮದುವೆ ಆಗಿದ್ದೀವಿ ಎಂದಿದ್ದಾರೆ.

Share This Article
Enable Notifications OK No thanks