Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿನ್ನಯ್ಯನ ಬುರುಡೆ ಪ್ಲ್ಯಾನ್ ಗೆ ಚಿತ್ರದುರ್ಗದ ಆ ಲೇಡಿಯಿಂದ ಫಂಡಿಂಗ್..!?

---Advertisement---

ಬೆಂಗಳೂರು: ನೂರಾರು ಶವಗಳನ್ನ ಹೂತು ಹಾಕಿದ್ದೀನಿ ಎಂದಿದ್ದ ಚಿನ್ನಯ್ಯ ಈಗ ಎಸ್ಐಟಿ ವಶದಲ್ಲಿದ್ದಾನೆ. ವಿಚಾರಣೆ ಕೂಡ ನಡೆಯುತ್ತಿದೆ. ಈ ವಿಚಾರಣೆಯ ಸಂದರ್ಭದಲ್ಲಿ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾನೆ. ಚಿತ್ರದುರ್ಗದ ಒಬ್ಬ ಮಹಿಳೆಯೇ ಈ ಬುರುಡೆ ಪ್ಲ್ಯಾನಿಂಗ್ ಗೆ ಫಂಡಿಂಗ್ ಮಾಡಿದ್ದಾರಂತೆ. ಎಸ್ಐಟಿ ತಂಡದ ಮುಂದೆ ಈ ವಿಚಾರವನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗ್ತಾ ಇದೆ.

ಚಿತ್ರದುರ್ಗದ ಮಹಿಳೆ ಫಂಡಿಂಗ್ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದು, ಸ್ಟೋರಿ ಪ್ಲಾಂಟ್ ಮಾಡಲು ಆ ಮಹಿಳೆ ಫಂಡಿಂಗ್ ಮಾಡಿದ್ದಾರಂತೆ. ಚಿತ್ರದುರ್ಗದ ಮೂಲದ ಮಹಿಳೆ ಎಸ್ಐಟಿ ಕಚೇರಿಗೆ ಬಂದಂತ ಸಂದರ್ಭದಲ್ಲಿ ಆಕೆಯನ್ನ ಚಿನ್ನಯ್ಯ ಗುರುತಿಸಿದ್ದನಂತೆ. ಈಕೆಯೇ ಫಂಡಿಂಗ್ ಮಾಡಿದ್ದಳು ಎಂಬ ಸೂಚನೆಯನ್ನ ಎಸ್ಐಟಿಗೆ ನೀಡಿದ್ದನಂತೆ. ಈ ಹಿನ್ನೆಲೆ ಎಸ್ಐಟಿ ಅಧಿಕಾರಿಗಳು ಈಗ ಆ ಫಂಡಿಂಗ್ ಜಾಲದ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ.

ಮತ್ತೊಂದು ವಿಚಾರ ಅಂದ್ರೆ ಆ ಮಹಿಳೆಗೆ ಧರ್ಮಸ್ಥಳದೊಂದಿಗೆ ಭೂ ವಿವಾದ ಇದೆ ಎಂಬ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆಯನ್ನ ನಡೆಸುತ್ತಿದ್ದಾರೆ. ಆ ಮಹಿಳೆ ಯಾಕೆ ಫಂಡಿಂಗ್ ಮಾಡಿದ್ದು..? ಆಕೆಯ ಹಿಂದೆ ಯಾರೆಲ್ಲಾ ಇದ್ದಾರೆ ಎಂಬೆಲ್ಲಾ ವಿಚಾರಗಳ ತನಿಖೆ ನಡೆಯುತ್ತಿದೆ.

ಸದ್ಯ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೂ ಧರ್ಮಸ್ಥಳದ ಬುರುಡೆ ರಹಸ್ಯದ ಬಗ್ಗೆ ಸಾಕಷ್ಟು ಚರ್ಚೆಗಳಾಗ್ತಾ ಇದೆ. ಎಸ್ಐಟಿ ಅಧಿಕಾರಿಗಳು ಕೂಡ ತನಿಖೆಯನ್ನ ನಡೆಸುತ್ತಿದ್ದಾರೆ. ದಿನೇ ದಿನೇ ಈ ಬುರುಡೆ ಮ್ಯಾನ್ ಚಿನ್ನಯ್ಯನ ಒಂದೊಂದೆ ವಿಚಾರ ಹೊರಗೆ ಬರುತ್ತಿದೆ. ಫೈನಲೀ ಏನಾಗಲಿದೆ ಅನ್ನೋದು ತನಿಖೆ ಸಂಪೂರ್ಣವಾದ ಮೇಲೆ ತಿಳಿಯಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...