Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ | ಒತ್ತುವರಿ ತೆರವುಗೊಳಿಸಿ ರಸ್ತೆ ನಿರ್ಮಾಣ ಕಾರ್ಯ ಆರಂಭ : ತಹಸೀಲ್ದಾರ್ ರೇಹಾನ್ ಪಾಷಾ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 24 : ಚಳ್ಳಕೆರೆ ನಗರದ ಬಳ್ಳಾರಿ ರಸ್ತೆ ಮಾರ್ಗದಲ್ಲಿ ನಿರಾಶ್ರಿತ ನೂರಾರು ಕುಟುಂಬಗಳಿಗೆ ಪ್ರತ್ಯೇಕವಾಗಿ ನಿರ್ಮಾಣ ಮಾಡಿರುವ ಅಭಿಷೇಕ ನಗರಕ್ಕೆ ರಸ್ತೆ ನಿರ್ಮಾಣ ಕಾಮಗಾರಿಗೆ ತೊಂದರೆ ಆಗಿದ್ದ ಒತ್ತುವರಿ ಜಾಗವನ್ನು ಕೋರ್ಟ್ ಆದೇಶದಂತೆ ಮಂಗಳವಾರ ತೆರವುಗೊಳಿಸಿ ರಸ್ತೆ ನಿರ್ಮಾಣ ಕಾರ್ಯ ಆರಂಭ ಮಾಡಲಾಗಿದೆ ಎಂದು ತಹಸೀಲ್ದಾರ್ ರೇಹಾನ್ ಪಾಷಾ ತಿಳಿಸಿದರು.

ನಗರದ ಹೆದ್ದಾರಿ ಮಾರ್ಗದಿಂದ ಅಭಿಷೇಕ ನಗರಕ್ಕೆ ಪ್ರಹ್ಲಾದ್ ಮತ್ತು ಚಿದಂಬರಂ ಎಂಬುವರ ಮಾಲೀಕತ್ವದ ಜಮೀನಿನಲ್ಲಿ ಕಾಲುದಾರಿ ಜಾಡಿನಲ್ಲಿ ಓಡಾಟ ಮಾಡಲಾಗುತ್ತಿತ್ತು. ಮಳೆಗಾಲದಲ್ಲಿ ಇಲ್ಲಿ ಹರಿಯುವ ಹಳ್ಳದಿಂದ ತೊಂದರೆಗೀಡಾಗುತ್ತಿದ್ದ ಜನರ ಅಪಾಯ ತಪ್ಪಿಸಲು ಡಾಂಬರೀಕರಣ ರಸ್ತೆ ಮಾಡಲು ಸಿದ್ಧತೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಜಮೀನು ಮಾಲೀಕರು ಕೋರ್ಟಿಗೆ ಹೋಗಲಾಗಿತ್ತು. ಕೋರ್ಟ್ ಆದೇಶದಂತೆ ರಸ್ತೆಯಿದ್ದ ಜಮೀನು ಮತ್ತು ಅಕ್ಕಪಕ್ಕದವರ ಜಮೀನು ಒಟ್ಟಾರೆಯಾಗಿ ಅಳತೆ ಮಾಡಿದಾಗ, ಪಕ್ಕದ ಜಮೀನಿನವರು ಪ್ರಹ್ಲಾದ್ ಮತ್ತು ಚಿದಂಬರ್ ಎಂಬುವರ ಜಮೀನನ್ನು ಸುಮಾರು ಒಂದು ಎಕರೆ ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಒತ್ತುವರಿ ತೆರವುಗೊಳಿಸಿದ ಜಮೀನಿನಲ್ಲಿ ರಸ್ತೆ ಮಾಡಲು ಪ್ರಹ್ಲಾದ್ ಮತ್ತು ಚಿದಂಬರಂ ಎಂಬುವರು ಸಂತೋಷವಾಗಿ ಒಪ್ಪಿರುವ ಕಾರಣ, ರಸ್ತೆ ಕಾಮಗಾರಿ ಆರಂಭ ಮಾಡಲಾಗಿದೆ ಎಂದು ತಿಳಿಸಿದರು.

ನಗರಸಭಾ ಸದಸ್ಯ ಟಿ. ಮಲ್ಲಿಕಾರ್ಜುನ ಮಾತನಾಡಿ, ಬೂದಿಹಳ್ಳಿ ಗ್ರಾಮದ ನಿರಾಶ್ರಿತರು ಸೇರಿದಂತೆ ಚಿಂದಿ ಆಯುವ ಮತ್ತು ಆಟಿಕೆ ಸಾಮಾನು ಮಾರಾಟ ಮಾಡುವ ದೊಂಬಿದಾಸರ ಕುಟುಂಬಗಳು ವೆಂಕಟೇಶ್ವರ ನಗರ ಕೆರೆಯಂಗಳದಲ್ಲಿ ಜೀವನ ಕಟ್ಟಿಕೊಳ್ಳಲಾಗಿತ್ತು. ಕೆರೆ ನೀರು ಅಪಾಯ ಮಟ್ಟ ತಲುಪಿದಾಗ ತುರ್ತಾಗಿ ಶಾಸಕರ ಸೂಚನೆಯಂತೆ ಅಭಿಷೇಕ ನಗರಕ್ಕೆ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಟೆಂಟ್ ಗುಡಿಸಲುಗಳಲ್ಲಿ ಜೀವನ ಮಾಡುತ್ತಿದ್ದಾರೆ. ಲಿಡ್ಕರ್ ನಿಗಮದಡಿ ವಸತಿ ಸೌಲಭ್ಯಕ್ಕೆ ಅನುಕೂಲ ಮಾಡಲಾಗಿದೆ. ನಗರದಿಂದ ಅಭಿಷೇಕ್ ನಗರಕ್ಕೆ ಸಂಪರ್ಕ ರಸ್ತೆಗೆ ದಾರಿ ಸಮಸ್ಯೆ ಆಗಿತ್ತು. ಈಗ ಕೋರ್ಟ್ ಆದೇಶದಂತೆ ಸಮಸ್ಯೆ ಬಗೆಹರಿದಿದೆ. ನಗರೋತ್ಥಾನ ನಾಲ್ಕನೇ ಹಂತದ ೧ ಕೋಟಿ ಅನುದಾನದಲ್ಲಿ ೮೧೮ ಅಡಿ ಉದ್ದ ೩೦ ಅಡಿ ಅಗಲ ಡಾಂಬರೀಕರಣ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಸರ್ವೆ ಎಡಿಎಲ್‌ಆರ್ ಬಾಬುರೆಡ್ಡಿ, ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ, ಗ್ರಾಮಾಧಿಕಾರಿ ಪ್ರಕಾಶ, ಎ. ಪ್ರಸನ್ನ, ವಿನಯ್, ಎನ್. ಹೊನ್ನೂರುಸ್ವಾಮಿ, ಜಿ.ಎಂ. ಕೊಟ್ರೇಶ್, ಚಿದಂಬರಂ, ಪ್ರಹ್ಲಾದ್ ಮತ್ತಿತರರು ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment