Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಧಾರ್ಮಿಕ ವಿಚಾರ ತರುವುದು ಎಲೆಕ್ಷನ್ ಗಾಗಿ ಮಾತ್ರ : ಬಿಜೆಪಿ ಬಗ್ಗೆ ಜಗದೀಶ್ ಶೆಟ್ಟರ್ ಶಾಕಿಂಗ್ ಹೇಳಿಕೆ

Facebook
Twitter
Telegram
WhatsApp

ಬೆಂಗಳೂರು: ರಾಮ ಮಂದಿರ ಉದ್ಘಾಟನೆ ಸಮಯದಲ್ಲಿಯೇ ಹಿಂದೂಗಳ ಟಾರ್ಗೆಟ್ ಪ್ರಶ್ನೆಗೆ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ನಾನು ಅಲ್ಲಿದ್ದು ವಿತ್ ಡ್ರಾ ಮಾಡೋಕೆ ಪ್ರಯತ್ನ ಪಟ್ಟಂತ ವ್ಯಕ್ತಿ. ಷಡ್ಯಂತ್ರ ಮಾಡವ್ರೆ ಅಂದರೆ ಏನು ಷಡ್ಯಂತ್ರ ಅಂತ ಹೇಳಿ ಬಿಡಲಿ. ರಾಜ್ಯದಲ್ಲಿ ಎಷ್ಟು ಮಂದಿ ಅವರೆ ಹಿಂದುಗಳು ಇದಾರ್ರೀ. ಏಳು ಕೋಟಿ ಜನಸಂಖ್ಯೆ ಇದೆ. 8% ಜನಸಂಖ್ಯೆ ಹಿಂದೂಗಳೇ ಇದಾರೆ. ಒಬ್ಬ ವ್ಯಕ್ತಿಯನ್ನು ಅರೆಸ್ಟ್ ಮಾಡಿದರೆ ಐದಾರು ಕೋಟಿ ಜನರಿಗೆ ತೊಂದರೆ ಆಯ್ತಾ..? ಅರ್ಥ ಏನು ಇದಕ್ಕೆ. ಹಿಂದೂ ಮುಸ್ಲಿಂ ಅಂತ ಡಿವೈಡ್ ಮಾಡೋದೇ ಆಯ್ತು ನಿಮ್ಮದು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಮಣಿಕಂಠ ರಾಥೋಡ್ ಎಂಬ ವ್ಯಕ್ತಿ. 80 ಕ್ರಿಮಿನಲ್ ಕೇಸ್ ಇದೆ. ಅವನು ರೌಡಿಶೀಟರ್ ಲೀಸ್ಟ್ ನಲ್ಲಿದ್ದಾನೆ. ಅವರನ್ನು ತೆಗೆದುಕೊಂಡು ಪ್ರಿಯಾಂಕ್ ಖರ್ಗೆ ಎದುರು ಸ್ಪರ್ಧೆಗೆ ನಿಲ್ಲಿಸುತ್ತಾರೆ. ಕಾನೂನು ರೀತಿ ಹೋರಾಟ ಮಾಡಿ, ಜಾಮೀನು ತೆಗೆದುಕೊಳ್ಳಿ. ವಿಷಯ ಕೋರ್ಟ್ ನಲ್ಲಿದೆ. ಜನ ಅರ್ಥ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್ ಅನ್ನ ಹಿಂದೂ ವಿರೋಧಿ ಅಂತ ಬಿಜೆಪಿ ಹೋರಾಟ ಮಾಡುತ್ತಾ ಇದೆಯಲ್ಲ, ಧಾರ್ಮಿಕವಾದ ವಿಚಾರದ ಮೇಲೆ ಕ್ಷಣಿಕ ಗೆಲುವು ಸಾಧಿಸಿದೆ.

 

ಬಿಜೆಪಿಯವರು ಬೀದಿಗೆ ಇಳಿದು ಹೋರಾಟ ಮಾಡುತ್ತಾ ಇದಾರಲ್ಲ, ಕರಸೇವಕರ ಬಗ್ಗೆ ಬಹಳಷ್ಟು ಅಭಿಮಾನದಿಂದ ಮಾತನಾಡುತ್ತಾ ಇದಾರಲ್ಲ. ಆ ಕರಸೇವಕರ ಮೇಲೆ ಇರುವಂತ ಕೇಸನ್ನ ಅವರು ಯಾಕೆ ವಿತ್ ಡ್ರಾ ಮಾಡುವುದಕ್ಕೆ ಪ್ರಯತ್ನ ಪಡಲಿಲ್ಲ. ಆಗ ಬಿಜೆಪಿಯೇ ಅಧಿಕಾರದಲ್ಲಿಯೇ ಇತ್ತು. ಆಗ ಯಾರೂ ಕೆಲಸ ಮಾಡುವುದಿಲ್ಲ. ಆದರೆ ಇಂಥ ಘಟನೆಯಾದಾಗ ಹೋರಾಟ ಮಾಡುವುದಕ್ಕೆ ನಿಂತು ಬಿಡುತ್ತಾರೆ. ಹಿಂದೂ ಮುಸ್ಲಿಂ ವಿಚಾರ ತೆಗೆದುಕೊಂಡು ಎಲೆಕ್ಷನ್ ಉಪಯೋಗ ಪಡೆದುಕೊಳ್ಳುತ್ತಾರೆ. ಇದರಲ್ಲಿ ಪ್ರಹ್ಲಾದ್ ಜೋಶಿ ಕೈವಾಡವೂ ಇದೆ ಎಂದು ಬಿಜೆಪಿ ವಿರುದ್ದ ಆಕ್ರೋಶ ಹೊರ ಹಾಕಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!