ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು : ಯಾರು ಏನೆಲ್ಲಾ ಹೇಳಿದರು ಎಂಬ ಮಾಹಿತಿ ಇಲ್ಲಿದೆ

1 Min Read

 

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ. ಜಿಹಾದಿ ಮನಸ್ಥಿತಿಯನ್ನು ಪ್ರದರ್ಶಿಸುವ ಮೂಲಕ ಅಮಾಯಕರನ್ನು ಕೊಲ್ಲುವ ಜಿಹಾದಿಗಳಿಗಿಂತ ಅಪಾಯಕಾರಿ. ನೀವು ಹೆಚ್ಚು ಅಪಾಯಕಾರಿ ಎಂದು ಸಾಬೀತುಪಡಿಸಿದ್ದೀರಿ. ಸಾರ್ವಜನಿಕವಾಗಿ ಚರ್ಚೆಗೆ ಬನ್ನಿ ಎಂದು ಸಿಟಿ ರವಿ ಸವಾಲು ಹಾಕಿದ್ದಾರೆ. ರಾಷ್ಟ್ರೀಯ ವಾದಿ ಸಾವರ್ಕರ್, ಟಿಪ್ಪು ಸುಲ್ತಾನ್ ಬಗ್ಗೆ ಚರ್ಚೆಗೆ ಸಿದ್ಧವಿದ್ದರಿದ್ದೇವೆ ಎಂದಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕೂಡ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಮರ ಏರಿಯಾ ಅನ್ನೋಕೆ ಏನು ಅವರಪ್ಪಂದಾ ಜಾಗ. ಇದು ಸಿದ್ದರಾಮಯ್ಯ ರಾಷ್ಟ್ರ ದ್ರೋಹದ ಹೇಳಿಕೆ. ಇಡೀ ಭಾರತ ಹಿಂದೂಸ್ತಾನ ಭಾರತೀಯರದ್ದು. ಮುಸಲ್ಮಾನರ ಜಾಗ ಒಂದಿಂಚು ಇಲ್ಲ. ಇಡೀ ಜಾಗ ಹಿಂದೂಗಳ ಜಾಗ, ಮುಸಲ್ಮಾನರ ಜಾಗ ಅಲ್ಲ. ಇದು ರಾಷ್ಟ್ರದ್ರೋಹ ಹೇಳಿಕೆ. ಇದರಿಂದ ನಾನು ಸೋನಿಯಾಗಾಂಧಿಯವರ ಒತ್ತಾಯ ಮಾಡುತ್ತೇನೆ ಪಕ್ಷದಿಂದ ಇವರನ್ನು ಉಚ್ಛಾಟನೆ ಮಾಡಿ ಎಂದಿದ್ದಾರೆ.

ಇನ್ನು ಸಿದ್ದರಾಮಯ್ಯ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕೆಂಡಾಮಂಡಲಾರಾಗಿದ್ದು, ಮುಸ್ಲಿಂ ಏರಿಯಾ ಅಂದರೆ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲವಾ. ಸಿದ್ದರಾಮಯ್ಯ ಒಂದು ಸಮುದಾಯ ಓಲೈಸಲು ಈ ರೀತಿ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ರಾಜ್ಯದಲ್ಲಿ ಆಡಳಿತದಲ್ಲಿದ್ದಂತ ವ್ಯಕ್ತಿ ಈ ರೀತಿ ಮಾತನಾಡುವುದರಿಂದ ಪ್ರಚೋದನೆ ಕೊಟ್ಟಂತೆ ಆಗುತ್ತದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *